- ಕೇಂದ್ರದ ಬೆನ್ನಲ್ಲೇ ಕರ್ನಾಟಕದಲ್ಲೂ ಕೆಲ ಕೆಮ್ಮಿನ ಸಿರಪ್ ನಿಷೇಧಿಸಿದ ಆರೋಗ್ಯ ಇಲಾಖೆ
- ರಾಜ್ಯ ಸರ್ಕಾರದಿಂದ ಡ್ರಗ್ಸ್ ಕಂಟ್ರೋಲ್ ಇಲಾಖೆಗೆ ಎಲ್ಲ ಸಿರಪ್ ಮಾದರಿಗಳನ್ನು ಪರೀಕ್ಷಿಸಲು ಸೂಚನೆ
- ಕರ್ನಾಟಕ, ತಮಿಳುನಾಡು ಸೇರಿ ಹಲವಾರು ರಾಜ್ಯಗಳಲ್ಲಿ ಮಾರಾಟ ನಿಷೇಧ(Karnataka bans cough syrup)
Bengaluru: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮಕ್ಕಳ ಸಾವಿಗೆ ಕಾರಣವೆಂದು ಶಂಕೆ ವ್ಯಕ್ತವಾದ ಬಳಿಕ, ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ಸಂಸ್ಥೆ ತಯಾರಿಸಿದ ಕೋಲ್ಡ್ರಿಫ್ ಕಾಫ್ ಸಿರಪ್ ಈಗ
ಕರ್ನಾಟಕದಲ್ಲೂ ನಿಷೇಧಕ್ಕೆ ಒಳಪಟ್ಟಿದೆ. ರಾಜ್ಯದ ಫಾರ್ಮಾ ರಿಟೈಲರ್ಸ್ ಮತ್ತು ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಷನ್ ಎಲ್ಲಾ ಮೆಡಿಕಲ್ ಸ್ಟೋರ್ಗಳು ಹಾಗೂ ವಿತರಕರಿಗೆ ಈ ಸಿರಪ್ ಮಾರಾಟವನ್ನು
ತಕ್ಷಣವೇ ನಿಲ್ಲಿಸುವಂತೆ ಆದೇಶಿಸಿದೆ. ಸಂಸ್ಥೆಯು ಹೊರಡಿಸಿದ ಸರ್ಕ್ಯುಲರ್ ಪ್ರಕಾರ, ಡೈಎಥಿಲೀನ್ ಗ್ಲೈಕಾಲ್ (Diethylene Glycol) ಎಂಬ ಅಪಾಯಕಾರಿ ರಾಸಾಯನಿಕ ಅಂಶ ಈ ಸಿರಪ್ನಲ್ಲಿ ಪತ್ತೆಯಾಗಿದೆ.
ಈ ಅಂಶವು ಮಕ್ಕಳಲ್ಲಿ ವಿಷಕಾರಿ ಪರಿಣಾಮ ಉಂಟುಮಾಡಬಲ್ಲದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆ ಹಾಗೂ ರಾಜಸ್ಥಾನದಲ್ಲಿ ಇತ್ತೀಚೆಗೆ 11 ಮಕ್ಕಳು ಮೃತಪಟ್ಟಿರುವ ಘಟನೆ ರಾಷ್ಟ್ರವನ್ನು ಕದಡಿತ್ತು. ಅಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲಿ,

ಈ ಮಕ್ಕಳು ಕೋಲ್ಡ್ರಿಫ್ ಕಾಫ್ ಸಿರಪ್ ಸೇವಿಸಿದ್ದರೆಂದು ತಿಳಿದುಬಂದಿದೆ. ಮಧ್ಯಪ್ರದೇಶದಲ್ಲಿ 9 ಮತ್ತು ರಾಜಸ್ಥಾನದಲ್ಲಿ 2 ಸಾವುಗಳು ವರದಿಯಾಗಿದ್ದು,
ಇಬ್ಬರು ರಾಜ್ಯಗಳ ಸರ್ಕಾರಗಳು ತಕ್ಷಣ ಕ್ರಮ ಕೈಗೊಂಡು ಸಿರಪ್ ಮಾರಾಟವನ್ನು ನಿಷೇಧಿಸಿದವು.ಇದಾದ ನಂತರ, ಕರ್ನಾಟಕ ಸರ್ಕಾರವೂ ಮುಂಜಾಗ್ರತಾ ಕ್ರಮವಾಗಿ ಇದೇ ಔಷಧಿಯನ್ನು
ತಾತ್ಕಾಲಿಕವಾಗಿ ನಿಷೇಧಿಸಿದೆ. ತಮಿಳುನಾಡು ಸರ್ಕಾರವೂ ಇದೇ ರೀತಿಯ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ.
ಕರ್ನಾಟಕ ಫಾರ್ಮಾ ರಿಟೈಲರ್ಸ್ ಮತ್ತು ಡಿಸ್ಟ್ರಿಬ್ಯೂಟರ್ಸ್ ಸಂಘವು ಪತ್ರದ ಮೂಲಕ ಸ್ಪಷ್ಟ ಸೂಚನೆ ನೀಡಿದ್ದು — ಯಾವುದೇ ಮೆಡಿಕಲ್ ಸ್ಟೋರ್ ಅಥವಾ ವಿತರಕ ಸಂಸ್ಥೆಯು ಕೋಲ್ಡ್ರಿಫ್ ಕಾಫ್ ಸಿರಪ್ ಅಥವಾ ಅದೇ
ಕಂಪನಿಯ ಇತರ ಔಷಧಿಗಳನ್ನು ಮಾರಾಟ ಮಾಡಬಾರದು. ಈಗಾಗಲೇ ಲಭ್ಯವಿರುವ ಸ್ಟಾಕ್ಗಳ ವಿವರವನ್ನು ಡ್ರಗ್ಸ್ ಕಂಟ್ರೋಲ್ ಇಲಾಖೆಗೆ ತಕ್ಷಣ ಕಳುಹಿಸಬೇಕು,ಎಂದು ತಿಳಿಸಿದೆ.
ಸರ್ಕಾರದಿಂದ ಹೊಸ ಆದೇಶ ಬರುವವರೆಗೆ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ನ ಯಾವುದೇ ಉತ್ಪನ್ನಗಳನ್ನು ಮಾರಾಟ ಮಾಡಬಾರದು ಎಂದು ಸಂಸ್ಥೆ ಎಚ್ಚರಿಕೆ ನೀಡಿದೆ.
ಈ ಘಟನೆಗಳ ಹಿನ್ನೆಲೆ ಕಂಡು ಕೇಂದ್ರ ಆರೋಗ್ಯ ಸಚಿವಾಲಯ ತುರ್ತು ಮಾರ್ಗಸೂಚಿ ಹೊರಡಿಸಿದೆ. ಎರಡು ವರ್ಷದೊಳಗಿನ ಮಕ್ಕಳಿಗೆ ಯಾವುದೇ ರೀತಿಯ ಕೆಮ್ಮು ಅಥವಾ ಶೀತದ ಸಿರಪ್
ನೀಡಬಾರದು ಎಂದು ವೈದ್ಯರಿಗೆ ಸೂಚನೆ ನೀಡಲಾಗಿದೆ. ಕೌಟುಂಬಿಕ ವೈದ್ಯರು ಮತ್ತು ಪೀಡಿಯಾಟ್ರಿಷನ್ಗಳು ಈ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ.
ಕೇಂದ್ರ ಸರ್ಕಾರದ ಪ್ರಕಾರ, ಕೆಲವು ಕೆಮ್ಮಿನ ಸಿರಪ್ಗಳಲ್ಲಿ ಡೈಎಥಿಲೀನ್ ಗ್ಲೈಕಾಲ್ ಅಥವಾ ಎಥಿಲೀನ್ ಗ್ಲೈಕಾಲ್ ಅಂಶ ಇದ್ದರೆ, ಅದು ಮೂತ್ರಪಿಂಡ ಮತ್ತು ಯಕೃತ್ ಹಾನಿಗೆ ಕಾರಣವಾಗಬಹುದು.
ಇದನ್ನು ಓದಿ : 2 ವರ್ಷದ ಒಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡಬೇಡಿ : ಕೇಂದ್ರದ ಎಚ್ಚರಿಕೆ
ಹಾಗಾಗಿ ಕರ್ನಾಟಕ, ತಮಿಳುನಾಡು ಸೇರಿ ಹಲವಾರು ರಾಜ್ಯಗಳಲ್ಲಿ ಮಾರಾಟ ನಿಷೇಧ ಮಾಡಲಾಗಿದೆ. (Karnataka bans cough syrup)