- ದೆಹಲಿಯಲ್ಲಿಂದು ಮಲ್ಲಿಕಾರ್ಜುನ ಖರ್ಗೆ (Karnataka cm seat battle) ರಾಹುಲ್ ಗಾಂಧಿ ಭೇಟಿ ಸಾಧ್ಯತೆ
- ಬೆಂಗಳೂರಿಗೆ ದೌಡಾಯಿಸಿದ ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್
- ಮುಂದಿನ ಮುಖ್ಯಮಂತ್ರಿಗಾಗಿ ತೀವ್ರ ಲಾಬಿ
Bengaluru: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಈಗ ಕುರ್ಚಿ ಕದನದ ಆರಂಭವಾಗಿದ್ದು ಕಾಂಗ್ರೆಸ್ (Karnataka cm seat battle) ಪಕ್ಷದಲ್ಲಿ ನಾಯಕತ್ವ ಸಂಘರ್ಷ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಸಿಎಂ ಸಿದ್ದರಾಮಯ್ಯ – ಡಿಸಿಎಂ ಡಿ.ಕೆ. ಶಿವಕುಮಾರ್ ಬಣಗಳ ನಡುವೆ ಉದ್ಭವಿಸಿರುವ ಭೇದಾಭಿಪ್ರಾಯಗಳು ಹೈಕಮಾಂಡ್ಗೆ ತಲೆನೋವಾಗಿ ಪರಿಣಮಿಸಿವೆ.
ಈ ಬೆಳವಣಿಗೆಗಳ ನಡುವೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಎಐಸಿಸಿ ಮುಖ್ಯಸ್ಥ ಖರ್ಗೆಗಳು ಮಧ್ಯಸ್ಥಿಕೆ ವಹಿಸುತ್ತಿರುವುದು ರಾಜ್ಯದ ರಾಜಕೀಯಕ್ಕೆ ಹೊಸ ತಿರುವನ್ನು ನೀಡುವಂತಿದೆ.

ನಡೆಯುತ್ತಿರುವ ವಿವಾದದ ಬಗ್ಗೆ ನಾನು ಏನೂ ಹೇಳುವುದಿಲ್ಲ; ಹೈಕಮಾಂಡ್ ಅಂತಿಮ ತೀರ್ಮಾನ (Karnataka cm seat battle) ಮಾಡುತ್ತದೆ ಎಂದು ಕಾಂಗ್ರೆಸ್ ಮೂಲಗಳೂ ಸ್ಪಷ್ಟಪಡಿಸಿರುವುದರಿಂದ,ಇದೀಗ ಎಲ್ಲರ ಚಿತ್ತ ರಾಹುಲ್ ಗಾಂಧಿ ಅವರ ಮೇಲಿದೆ.
ಇನ್ನು ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿ, ಇವರುಗಳ
ಮಾತುಗಳನ್ನು ನೇರವಾಗಿ ಕೇಳಿ ಹೈಕಮಾಂಡ್ಗೆ ವರದಿ ಸಲ್ಲಿಸಿರುವುದು ದೊಡ್ಡ ರಾಜಕೀಯ ಚಟುವಟಿಕೆಗೆ ದಾರಿ ಮಾಡಿಕೊಟ್ಟಿದೆ.
ಇದೇ ವೇಳೆ, ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ಹೊರಡುವ ಮುನ್ನ ದಿಢೀರ್ ಆಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಬೆಂಗಳೂರಿಗೆ ಆಗಮಿಸಿರುವುದು ಕುರ್ಚಿ ಕಾದಾಟವನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಅವರು ಏರ್ಪೋರ್ಟ್ ಹತ್ತಿರದ ತಾಜ್ ಹೋಟೆಲ್ನಲ್ಲಿ (Taj hotel ) ವಾಸ್ತವ್ಯ ಹೂಡಿದ್ದರೆ, ಡಿಕೆಶಿಯೂ ಸಹ ಅದೆ ಹೋಟೆಲ್ಗೆ ತೆರಳಿರುವ ಅನುಮಾನ ವ್ಯಕ್ತವಾಗಿದೆ.
ಈ ರಹಸ್ಯ ಭೇಟಿ, ಹೈಕಮಾಂಡ್ನ (High Command) ಮುಂದಿನ ನಿರ್ಧಾರಕ್ಕೆ ವೇದಿಕೆ ಸಿದ್ಧವಾಗುತ್ತಿರುವ ಸೂಚನೆ ಎಂದು ರಾಜಕೀಯ ವಲಯ ಅರ್ಥೈಸಿದೆ.
ವಯನಾಡಿಗೆ ಹೋಗುವ ಮೊದಲು ಬೆಂಗಳೂರಿಗೆ ಬಂದಿರುವ ವೇಣುಗೋಪಾಲ್ ಅವರ ಭೇಟಿ, ಡಿಕೆಶಿಗೆ ಅಧಿಕಾರ ಹಸ್ತಾಂತರವಾಗಬಹುದೇ
ಎಂಬ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ನಡುವೆ, ಹಲವು ಶಾಸಕರು ತಮ್ಮ-ತಮ್ಮ ಬಣಗಳ ಪರವಾಗಿ ಓಡಾಡುತ್ತಿದ್ದು, ಕೆಲವರು ಸಿಎಂ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ
ಭೇಟಿ ಮಾಡಿ ಬೆಂಬಲ ಸೂಚಿಸಿದ್ದರೆ, ಇನ್ನೂ ಕೆಲವರು ಡಿಕೆಶಿಗೆ ಸಿಎಂ ಸ್ಥಾನ ನೀಡಬೇಕೆಂದು ಪ್ರಯತ್ನಿಸುತ್ತಿದ್ದಾರೆ.
ಎರಡೂ ಬಣಗಳು ಹೈಕಮಾಂಡ್ ಎದುರು ತಮ್ಮದೇ ಆದ ‘ಅಭಿಪ್ರಾಯ ಸಂಗ್ರಹ’ ನಡೆಸುತ್ತಿರುವಂತೆಯೇ ರಾಜಕೀಯ ತೀವ್ರತೆ ಇನ್ನಷ್ಟು ಹೆಚ್ಚಾಗಿದೆ.
“ನಮ್ಮ ಬಳಿ ಅಧಿಕಾರದ ಆಸೆಯೇ ಇಲ್ಲ, ಪಕ್ಷ ಒಂದೇ ಉಳಿಯಬೇಕು” ಎನ್ನುವ ಹೇಳಿಕೆಗಳೂ ಹೊರಬಿದ್ದರೂ, ಹಿನ್ನಲೆಯಲ್ಲಿ ಮುಂದಿನ ಸಿಎಂ ಯಾರು ಎಂಬ ದೊಡ್ಡ ಪ್ರಶ್ನೆಯೇ ಎಲ್ಲ ಚಟುವಟಿಕೆಗಳ ಕೇಂದ್ರವಾಗಿದೆ.
ಹೀಗಾಗಿ, ಪಕ್ಷದ ಒಳಗಿನ ಒತ್ತಡ ರಾಜಕೀಯ ಈಗ ಹೈಕಮಾಂಡ್ ಅಂಗಳದಲ್ಲಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದ ಜನಶಾಂತಿ, ಆಡಳಿತ ಮತ್ತು ಅಭಿವೃದ್ದಿ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಖಚಿತ ತೀರ್ಮಾನ ಕೈಗೊಳ್ಳಬೇಕಿರುವ ಸಮಯ ಬಂದಿದೆ.
ಖರ್ಗೆ ಅವರ ವರದಿ, ರಾಹುಲ್ ಹಾಗೂ ಸೋನಿಯಾ ಗಾಂಧಿಯ ಅಭಿಪ್ರಾಯಗಳೊಂದಿಗೆ ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆ ಹೆಚ್ಚಿದೆ.
ರಾಜಕೀಯ ವಲಯದಲ್ಲಿ “ಕ್ಲೈಮ್ಯಾಕ್ಸ್ ದೆಹಲಿಯಲ್ಲಿ ನಿಗದಿಯಾಗಲಿದೆ” ಎನ್ನುವ ಅಭಿಪ್ರಾಯ ಗಟ್ಟಿಯಾಗಿ ಮೂಡಿದೆ.
ಅಧಿಕಾರ ಹಂಚಿಕೆ, ಇಬ್ಬರ ಮಧ್ಯದ ಸಮನ್ವಯ, ಹಾಗೂ ಮುಂದಿನ ಚುನಾವಣೆಗೆ ಪಕ್ಷ ಬಲಪಡಿಸುವ ತಂತ್ರ ರೂಪಿಸುವ ಉದ್ದೇಶದಿಂದ ಹೈಕಮಾಂಡ್ ಮುಂದಿನ ಹೆಜ್ಜೆ ಹಾಕಲಿದೆ.
ರಾಜ್ಯ ರಾಜಕೀಯದಲ್ಲಿ ಈ ರೀತಿಯ ಗಂಭೀರ ನಾಯಕತ್ವ ಬಿಕ್ಕಟ್ಟು ಹಲವು ವರ್ಷಗಳ ನಂತರ ಕಾಣಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ.ಒಟ್ಟಾರೆ, ಸಿಎಂ-ಡಿಸಿಎಂ ಬಣಗಳ ಮಧ್ಯೆ ನಡೆಯುತ್ತಿರುವ ಈ ಕುರ್ಚಿ ಕಣಜ ಕದನ ರಾಜ್ಯದ ರಾಜಕೀಯವನ್ನು ಸಂಪೂರ್ಣ ಕದಡಿದೆ.
ಮುಂದಿನ 24 ರಿಂದ 48 ಗಂಟೆಗಳು ಬಹಳ ಮಹತ್ವದ್ದಾಗಿದ್ದು, ಹೈಕಮಾಂಡ್ ಏನು ತೀರ್ಮಾನಿಸುತ್ತದೆ ಎಂಬುದೇ ಮುಂದಿನ ರಾಜಕೀಯ ಸಮೀಕರಣಗಳನ್ನು ನಿರ್ಧರಿಸಲಿದೆ.
ಇದನ್ನು ಓದಿ : ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳಿಂದ ಶಾಕ್: ಕರ್ನಾಟಕದ 10 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ