ಭದ್ರಾವತಿ ಸೆ 6 : ಏಪ್ರಿಲ್ನಲ್ಲಿ ನಡೆದ ನಗರಸಭೆ ಚುನಾವಣೆ ವೇಳೆ 29ನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಹೃದಯಾಘಾತದಿಂದ ನಿಧನರಾಗಿದ್ದರು . ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ 29 ನೇ ವಾರ್ಡ್ನ ಚುನಾವಣೆಯನ್ನು ರದ್ದು ಮಾಡಿತ್ತು. ನಂತರ ಚುನಾವಣಾ ಆಯೋಗ ಮರು ಚುನಾವಣೆ ಘೋಷಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಲೋಹಿತಾ ನಂಜಪ್ಪ , ಜೆಡಿಎಸ್ ನ ನಾಗರತ್ನಾ ಅನಿಲ್ಕುಮಾರ್ , ಬಿಜೆಪಿಯಿಂದ ರಮಾ ವೆಂಕಟೇಶ್ ಕಣದಲ್ಲಿ ಸ್ಪರ್ಧೆ ಮಾಡಿದ್ದರು.
ಇಂದು ಈ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಒಟ್ಟು 3374 ಮತದಾರರ ಪೈಕಿ 2200 ಮತಗಳು ಚಲಾವಣೆಗೊಂಡಿದ್ದು, ಇದರಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿದ್ದ ನಾಗರತ್ನಾ ಅನಿಲ್ಕುಮಾರ್ 1282 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ನ ಲೋಹಿತಾ ನಂಜಪ್ಪ 832 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯ ರಮಾ ವೆಂಕಟೇಶ್ 70 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ.