- ಕ್ಯಾನ್ಸರ್ ಕಾರಕವಾಗ್ತಿರುವ ಸೇಬು ಹಣ್ಣು
- ಕಾಶ್ಮೀರದ ಕೆಲ ಜಿಲ್ಲೆಗಳಲ್ಲಿ ಜನಸಂಖ್ಯೆ ಕಡಿಮೆ ಇದ್ದರೂ ಕ್ಯಾನ್ಸರ್ ಪ್ರಕರಣಗಳು ಹೆಚ್ಚು
- ಮ್ಯಾಂಕೊಜೆಬ್ ಹೆಸರಿನ ಕೀಟನಾಶಕವು ಕ್ಯಾನ್ಸರ್ಕಾರಕ (Kashmir pesticides apple leads to cancer)
Srinagar: ಆ್ಯಪಲ್ ಅಂದ್ರೆ ಸಾಕು ಯಾರಿಗಿಷ್ಟವಿಲ್ಲ ಹೇಳಿ. ಅದರಲ್ಲೂ ಕಾಶ್ಮೀರಿ ಆ್ಯಪಲ್ ಅಂದ್ರೆ (Kashmiri Apple) ಜನ್ರು ಮುಗಿಬಿದ್ದು ಖರೀದಿಸ್ತಾರೆ. ಅದ್ರಲ್ಲೂ ಕಾಶ್ಮೀರಿ ಆ್ಯಪಲ್ಗೆ ಭಾರೀ ಬೇಡಿಕೆ ಇದೆ. ಅಂತಹ ಕಾಶ್ಮೀರಿ ಸೇಬನ್ನು ಬೆಳೆಯುವ ಜಾಗದಲ್ಲಿ ಹೆಚ್ಚಾಗಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ (Cancer appears) .ಕಣ್ಮನ ಸೆಳೆಯುವ ಕಾಶ್ಮೀರದ ಸೇಬಿನ ತೋಟಗಳಲ್ಲಿ ಸಮಸ್ಯೆಯೊಂದು ಸೃಷ್ಟಿಯಾಗುತ್ತಿದೆ.
ಇಂಡಿಯನ್ ಜರ್ನಲ್ ಆಫ್ ಅಕ್ಯುಪೇಷನಲ್ (Indian Journal of Occupational) ಆ್ಯಂಡ್ ಎನ್ವಿರಾನ್ಮೆಂಟಲ್ ಮೆಡಿಸಿನ್ (Indian Journal of Occupational and Environmental Medicine) ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ 2010ರ ಅಧ್ಯಯನ ವರದಿಯೊಂದರ ಪ್ರಕಾರ, ಕಾಶ್ಮೀರದಲ್ಲಿ ತೋಟ ಹೆಚ್ಚು ಇರುವ ಪ್ರದೇಶಗಳಲ್ಲಿ ಮಿದುಳಿನ ಕ್ಯಾನ್ಸರ್ಗೆ ತುತ್ತಾಗಿರುವವರಲ್ಲಿ ಶೇಕಡ 90ರಷ್ಟು ಮಂದಿ ಕೀಟನಾಶಕಗಳ ಪ್ರಭಾವಕ್ಕೆ ಒಳಗಾಗಿದ್ದರು.
ಅನಂತನಾಗ್, ಬಡಗಾಂ ಮತ್ತು ಬಾರಾಮುಲ್ಲಾ ಜಿಲ್ಲೆಗಳ (Budgam and Baramulla districts) ತೋಟಗಳಲ್ಲಿ ಕೆಲಸ ಮಾಡುವವರನ್ನು ಕೇಂದ್ರೀಕರಿಸಿ ಅಧ್ಯಯನ ನಡೆಸಲಾಗಿದೆ. ಕಣಿವೆಯ ಸೇಬಿನ ತೋಟಗಳಲ್ಲಿ ಶೇಕಡ 90ರಷ್ಟು (90 percent) ಇಲ್ಲೇ ಇವೆ. ಕುಲ್ಗಾಂ, ಶೋಪಿಯಾನ್ ಜಿಲ್ಲೆಗಳಲ್ಲಿ ಜನಸಂಖ್ಯೆ ಕಡಿಮೆ ಇದ್ದರೂ ಅಲ್ಲಿ ಕ್ಯಾನ್ಸರ್ ಪ್ರಕರಣಗಳು (Cancer cases) ಹೆಚ್ಚು ವರದಿಯಾಗಿವೆ.

ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುವುದಷ್ಟೇ ಅಲ್ಲದೆ, ಕೆಲವು ಕೀಟನಾಶಕಗಳು ಹಣ್ಣಿನ ಗುಣಮಟ್ಟವನ್ನು (Fruit quality) ಹಾಳು ಮಾಡುತ್ತಿವೆ. ಕಣಿವೆಯಲ್ಲಿ ಬಳಕೆಯಲ್ಲಿರುವ ಮ್ಯಾಂಕೊಜೆಬ್ ಹೆಸರಿನ ಕೀಟನಾಶಕವನ್ನು ಕ್ಯಾನ್ಸರ್ಕಾರಕ ಎಂದು ಐರೋಪ್ಯ ಒಕ್ಕೂಟದಲ್ಲಿ ನಿಷೇಧಿಸಲಾಗಿದೆ.
ಆದರೆ ಕಾಶ್ಮೀರದಲ್ಲಿ ಇದರ ಬಳಕೆಗೆ ನಿಯಂತ್ರಣವೇ ಇಲ್ಲ. ಕೀಟನಾಶಕಗಳು ಕಾಶ್ಮೀರದ ಜಲಮೂಲಗಳನ್ನು ಪ್ರವೇಶಿಸುತ್ತಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ (Experts have warned). ತೋಟಗಾರಿಕೆಯಲ್ಲಿ ತೊಡಗಿರುವವರು ಮಲಿನ ನೀರನ್ನು (Waste water) ಬೆಳೆಗೆ ನೀರುಣಿಸಲು ಬಳಸುತ್ತಿದ್ದಾರೆ. ಆ ಮೂಲಕ ವಿಷಕಾರಕಗಳನ್ನು ಅವರು ಆಹಾರ ಸರಪಳಿಯೊಳಗೆ ಮತ್ತೆ ತರುತ್ತಿದ್ದಾರೆ (Back into the chain).
ಇದನ್ನು ಓದಿ : http://ಮೈಸೂರಿನ ಪ್ರವಾಸಿ ತಾಣಗಳನ್ನ ಉಡೀಸ್ ಮಾಡುವುದಾಗಿ ಬೆದರಿಕೆ : ಅರಮನೆ ನಗರಿಯಲ್ಲಿ ಹೈ-ಅಲರ್ಟ್ ಘೋಷಣೆ
ಕೀಟನಾಶಕಗಳ ಗುಣಮಟ್ಟದ ಮೇಲೆ ಹೆಚ್ಚು ನಿಗಾ ಇರಿಸುವುದು, (Kashmir pesticides apple leads to cancer) ಕೀಟಗಳ ಬಾಧೆಯನ್ನು ತಾಳಿಕೊಳ್ಳುವ ಹಣ್ಣಿನ ತಳಿಗಳನ್ನು ಹೆಚ್ಚಾಗಿ ಬೆಳೆಯುವುದು, ಸಾವಯವ ಕೃಷಿ ಮಾದರಿ ಅನುಸರಿಸುವುದು ಈಗಿನ ಬಿಕ್ಕಟ್ಟಿನಿಂದ ಹೊರಬರುವ ಮಾರ್ಗ ಆಗಿರಬಹುದು ಎಂದು ಕ್ಯಾನ್ಸರ್ ತಜ್ಞ ಡಾ. ಅಝರ್ ಜಾನ್ (Cancer specialist Dr. Azar Jan) ಹೇಳಿದ್ದಾರೆ.