ತಿರುವನಂತಪುರ, ಮಾ. 15: ಚುನಾವಣೆ ಕಣಕ್ಕಿಳಿಯುವ ಕನಸು ಹೊತ್ತು ಟಿಕೆಟ್ ಸಿಗದಿದ್ದಾಗ ಸಿಟ್ಟಿನಿಂದ ಪಕ್ಷ ತೊರೆಯುವ ಹಲವರನ್ನು ನೋಡಿದ್ದೇವೆ. ಆದರೆ ಟಿಕೆಟ್ ಸಿಗದಿದ್ದಕ್ಕೆ ಆಕ್ರೋಶಗೊಂಡ ಆಕಾಂಕ್ಷಿಯೊಬ್ಬರು, ಕೇಶ ಮಂಡನೆ ಮಾಡಿಸಿಕೊಂಡಿರುವ ಪ್ರಸಂಗವೊಂದು ಕೇರಳದಲ್ಲಿ ನಡೆದಿದೆ.
ಕೇರಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಲತಿಕಾ ಸುಭಾಶ್, ಟಿಕೆಟ್ ದೊರೆಯುವ ನಿರೀಕ್ಷೆ ಹೊಂದಿದ್ದರು. ಆದರೆ ತಮ್ಮ ನಿರೀಕ್ಷೆ ಹುಸಿಯಾಗಿ ಟಿಕೆಟ್ ಕೈ ತಪ್ಪಿದ್ದರಿಂದ ಬೇಸರಗೊಂಡ ಲತಿಕಾ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲದೇ, ಪ್ರತಿಭಟನೆಯ ಸಂಕೇತ ಎನ್ನುವಂತೆ ತಮ್ಮ ಕೇಶ ಮುಂಡನ ಮಾಡಿಸಿದ್ದಾರೆ.
ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ತಮ್ಮ ಹೆಸರಿಲ್ಲದಿರುವುದನ್ನು ಖಚಿತಪಡಿಸಿಕೊಂಡ ಲಿತಿಕಾ ಅವರು ಇದು ಮಹಿಳೆಯರಿಗೆ ಮಾಡಿದ ಅನ್ಯಾಯ ಎಂದು ವ್ಯಾಖ್ಯಾನಿಸಿದ್ದಾರೆ.
ದಶಕಗಳಿಂದ ಪಕ್ಷದ ರಕ್ಷಣಾ ಕೋಟೆಯಿಂತಿರುವ ಮಹಿಳೆಯರಿಗೆ ಪಕ್ಷವು ಅನ್ಯಾ ಮಾಡಿದೆ ಎಂದು ಆರೋಪಿಸಿರುವ ಅವರು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.