• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ದ್ವೇಷದ ಜ್ವಾಲೆ ಎಲ್ಲೆಡೆ ಹರಡುತ್ತಾ ದೇಶದ ಹೆಸರಿಗೂ ಮುಟ್ಟಿರುವುದು ದೊಡ್ಡ ದುರಂತ: ನಟ ಕಿಶೋರ್

Bhavya by Bhavya
in ಪ್ರಮುಖ ಸುದ್ದಿ, ರಾಜಕೀಯ, ರಾಜ್ಯ, ವಿಜಯ ಟೈಮ್ಸ್‌
ದ್ವೇಷದ ಜ್ವಾಲೆ ಎಲ್ಲೆಡೆ ಹರಡುತ್ತಾ ದೇಶದ ಹೆಸರಿಗೂ ಮುಟ್ಟಿರುವುದು ದೊಡ್ಡ ದುರಂತ: ನಟ ಕಿಶೋರ್
0
SHARES
2.6k
VIEWS
Share on FacebookShare on Twitter

ದೇಶದಾದ್ಯಂತ ಇಂಡಿಯಾ (INDIA) ಮರು ನಾಮಕರಣ ಪರ-ವಿರೋಧದ ಚರ್ಚೆ ಎಲ್ಲೆಡೆ ತೀವ್ರವಾಗಿದ್ದು, ಇದರ ಕುರಿತು ಹಲವಾರು ಗಣ್ಯರು, ಚಿತ್ರನಟರು ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ನಟ ಕಿಶೋರ್ (Kishor) ಅವರು ಕೂಡ ಪ್ರತಿಕ್ರಿಯಿಸಿದ್ದಾರೆ. ‘ದ್ವೇಷದ ಜ್ವಾಲೆ ಹರಡುತ್ತಾ, ಹರಡುತ್ತಾ ದೇಶದ ಹೆಸರಿನವರೆಗೂ ಬಂದಿರುವುದು ದೊಡ್ಡ ದುರಂತ’ವೆಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Narendra Modi

ನಮ್ಮ ದೇಶದ ಪ್ರಧಾನಿ ಕೀಲಿ ಕೊಟ್ಟ ಗೊಂಬೆಯಂತೆ ಆಡುವ ಆತ ಬಿಟ್ಟು ಪ್ರಬುದ್ಧರಂತೆ ವರ್ತಿಸಲು ಸಾಧ್ಯವಿಲ್ಲವೇ ? ಇಷ್ಟು ದಿನ ಕಾಣಿಸದ ಬ್ರಿಟಿಷ್ ಪ್ರಭಾವವು , ವಿರೋಧಿ ಪಕ್ಷದ ಮೈತ್ರಿಕೂಟ I.N.D.I.A ಅಂತ ಹೆಸರಿಟ್ಟುಕೊಂಡ ಕೂಡಲೇ ಕಂಡಿರುವುದೇಕೆ? ಅದಾನಿಯ ಭ್ರಷ್ಟಾಚಾರದ ಸಾಕ್ಷಿಗಳು ಬಯಲಾದೊಡನೆ ಈ ವಿಚಾರ ಮುನ್ನಲೆಗೆ ಬಂತಾ ? ಜಿಂಪಿಂಗ್, ಪುಟಿನ್ (Putin) ದೆಹಲಿಯ ಜಿ20 ಯಿಂದ ಕೈತೊಳೆದುಕೊಂಡು 56 ಇಂಚಿನ ಬಡಾಯಿಯನ್ನು ಠುಸ್ ಮಾಡಿದೊಡನೆ ಕಂಡದ್ದೇಕೆ? ಎಂದು ಅವರು ಪ್ರಶ್ನಿಸಿದ್ದಾರೆ.

ನಿಜವಾದ ಸಮಸ್ಯೆಗಳಿಂದ ಅಥವಾ ಇನ್ನ್ಯಾವುದೋ ಭಯಂಕರ ಷಡ್ಯಂತ್ರದಿಂದ ಎಲ್ಲರ ಗಮನವನ್ನು ಬೇರೆಡೆಗೆ ತಿರುಚುವ ಚಾರ್ಚೊತ್ಪಾದನೆಯ ರಾಜಕೀಯಕ್ಕೆ ಬಲಿಯಾಗಬೇಕೇ? ಹೆಸರು ಬದಲಾದ ಮಾತ್ರಕ್ಕೆ ಮಣಿಪುರದ ಅತ್ಯಾಚಾರಗಳು, ಕೊಲೆಗಳು ಬದಲಾಗುತ್ತದೆಯೇ? ಕಾಶ್ಮೀರ ಶಾಂತವಾಗುತ್ತದೆಯೇ ? ರೈತರ ಆತ್ಮಹತ್ಯೆಗಳು ನಿಲ್ಲುತ್ತವೆಯೇ? ನಿರೋದ್ಯೋಗ ಸಮಸ್ಯೆಗಳು ಸರಿಯಾಗುತ್ತದೆಯೇ? ಪೆಟ್ರೋಲ್ (Petrol) ಕಮ್ಮಿ ಬೆಳೆಗೆ ಸಿಗುತ್ತದೆಯೇ? ಅಷ್ಟೇ ಅಲ್ಲದೆ ದಿನಬಳಕೆಯ ವಸ್ತುಗಳ ಬೆಲೆ ಇಳಿಯುತ್ತದೆಯೇ? ಎಂದೆಲ್ಲಾ ಪ್ರಶ್ನೆಗಳನ್ನು ಮಾಡಿದ್ದಾರೆ.

India to Bharat

ಈ ಆಡಳಿತ ಪಕ್ಷದ ಕ್ಷುಲ್ಲಕ ಅಹಂಗೆ ಮತ್ತು ಅಪಾಯಕಾರಿ ರಾಜಕಾರಣಕ್ಕೆ ನಮ್ಮ ವಿವೇಚನೆಯನ್ನು ಬಲಿ ಕೊಡಬೇಕಾ? ನಮ್ಮೆಲ್ಲರ ಅಮೂಲ್ಯ ಸಮಯವನ್ನು ಅರ್ಥಹೀನ ಚರ್ಚೆಯಲ್ಲಿ ವ್ಯರ್ಥ ಮಾಡಿಕೊಳ್ಳಬೇಕೆ? ಎಂದು ನಟ ಕಿಶೋರ್ ಅವರು ಕೇಳಿರುವುದಲ್ಲದೆ ಸುಮಾರು 4ನೇ ಶತಮಾನದಿಂದಲೇ ಬ್ರಿಟಿಷರು ಬರುವುದಕ್ಕೆ ಮುನ್ನ ಇರುವ ಹೆಸರನ್ನು ಬ್ರಿಟಿಷರ ನೆಪದಲ್ಲಿ ಬದಲಾಯಿಸುವ ಹೊರಟಿರುವ ಈ ಧೂರ್ತ ಶಿಖಾಮಣಿಗಳು ನಿಜವಾಗಿ ಬ್ರಿಟಿಷರ ಕೊಡುಗೆಯಾದ ಇಂಗ್ಲಿಷ್ ಭಾಷೆಯ ಬಳಕೆಯನ್ನು ತೆಗೆದು ಬಿಡುತ್ತಾರೆಯೇ? ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಮಾಡಿರುವ ಅವರು ಯೋಚಿಸಿ…… ಗತಕಾಲದಲ್ಲಿ ಬಾಳುವುದನ್ನು ಬಿಟ್ಟು ವಿವೇಕಮತಿಗಳಾಗುವ ಹಾಗೂ ನಿರಂಕುಶಮತಿಗಳಾಗುವ ಎನ್ನುವ ಕರೆಯನ್ನು ನೀಡಿದ್ದಾರೆ.

ಭವ್ಯಶ್ರೀ ಆರ್.ಜೆ

Tags: actorkishoreIndiaKarnataka

Related News

ಏಷ್ಯನ್ ಗೇಮ್ಸ್ – 2023 : ಮಿಶ್ರ ಡಬಲ್ಸ್ ಟೆನಿಸ್ನಲ್ಲಿ ಚಿನ್ನ ತಂದ ಬೋಪಣ್ಣ-ರುತುಜಾ ಜೋಡಿ
Sports

ಏಷ್ಯನ್ ಗೇಮ್ಸ್ – 2023 : ಮಿಶ್ರ ಡಬಲ್ಸ್ ಟೆನಿಸ್ನಲ್ಲಿ ಚಿನ್ನ ತಂದ ಬೋಪಣ್ಣ-ರುತುಜಾ ಜೋಡಿ

September 30, 2023
ಏಕರೂಪ ನಾಗರಿಕ ಸಂಹಿತೆ ವ್ಯಾಪ್ತಿಯೊಳಗೆ ಸಲಿಂಗ ವಿವಾಹಕ್ಕೆ ಅವಕಾಶವಿಲ್ಲ: ಕಾನೂನು ಆಯೋಗ ವರದಿ
ದೇಶ-ವಿದೇಶ

ಏಕರೂಪ ನಾಗರಿಕ ಸಂಹಿತೆ ವ್ಯಾಪ್ತಿಯೊಳಗೆ ಸಲಿಂಗ ವಿವಾಹಕ್ಕೆ ಅವಕಾಶವಿಲ್ಲ: ಕಾನೂನು ಆಯೋಗ ವರದಿ

September 30, 2023
ಸಿದ್ದರಾಮಯ್ಯ ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ – ಸಿಡಿದೆದ್ದ ಶಾಮನೂರು ಶಿವಶಂಕರಪ್ಪ
ಪ್ರಮುಖ ಸುದ್ದಿ

ಸಿದ್ದರಾಮಯ್ಯ ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ – ಸಿಡಿದೆದ್ದ ಶಾಮನೂರು ಶಿವಶಂಕರಪ್ಪ

September 30, 2023
ಯೋಗೀಶ ಗೌಡ ಕೊಲೆ ಪ್ರಕರಣ : ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ
ಪ್ರಮುಖ ಸುದ್ದಿ

ಯೋಗೀಶ ಗೌಡ ಕೊಲೆ ಪ್ರಕರಣ : ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ

September 30, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.