Mandya: ಈಗಾಗಲೇ ರಾಜ್ಯದ ಹಲವೆಡೆ ಮುಂಗಾರು (KRS Dam water level)ಅಬ್ಬರ ಶುರುವಾಗಿದ್ದರೆ ಇನ್ನು ಕೆಲವೆಡೆ ಮಳೆಯ ಸುಳಿವೇ ಇಲ್ಲದಂತಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಆಧಾರವಾಗಿರುವ
ಹಲವು ನದಿಗಳು ಬತ್ತಿ ಹೋಗಿವೆ. ಅದರಂತೆ ಇದೀಗ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದ (KRS Dam) ನೀರಿನ ಮಟ್ಟ 79 ಅಡಿಗೆ ಕುಸಿದಿದೆ. ಹೌದು, ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿಯುತ್ತಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಲಾಶಯದ ಮಟ್ಟ 22 ಅಡಿ ಕುಸಿದಿದೆ. ಮುಂಗಾರು ಮಳೆ ವಿಳಂಬವಾದರೆ ರಾಜಧಾನಿಯಲ್ಲಿ (Bengaluru) ಕುಡಿಯುವ ನೀರಿಗೂ ಆತಂಕ ಎದುರಾಗಿದೆ.
ಈಗ ಕೆಆರ್ ಎಸ್ ಅಣೆಕಟ್ಟೆಯಲ್ಲಿ ಕೇವಲ 10 ಟಿಎಂಸಿ ನೀರಿದೆ. ಅದರಲ್ಲಿ ಬಳಕೆಗೆಂದು ಇರುವುದು ಕೇವಲ 3 ಟಿಎಂಸಿ ನೀರು ಮಾತ್ರ .ಉಳಿದ 7 ಟಿಎಂಸಿ ಡೆಡ್ ಸ್ಟೋರೇಜ್ ನೀರು ಇದರಿಂದ ಯಾವುದೇ
ಪ್ರಯೋಜನವಿಲ್ಲ. ಈ ಡ್ಯಾಂ 124.80 ಗರಿಷ್ಠ ಮಟ್ಟದಾಗಿದೆ ಪ್ರಸ್ತುತ ಈ ಡ್ಯಾಂನಲ್ಲಿ 79.02 ಅಡಿಯಷ್ಟೇ ನೀರಿದೆ. ಇನ್ನು ಬರೊಬ್ಬರಿ 22 ಅಡಿಯಷ್ಟು ನೀರು ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಬಹಳಷ್ಟು ಕುಸಿತವಾಗಿದೆ.
104.07 ಅಡಿ ನೀರು ಕಳೆದ ವರ್ಷ ಇದೇ ದಿನ ಸಂಗ್ರಹವಾಗಿತ್ತು. ಇದೀಗ49.452 ಟಿಎಂಸಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿರುವಈ ಡ್ಯಾಂನಲ್ಲಿ ಸದ್ಯದ ಮಟ್ಟಿಗೆ ಕೇವಲ 11.837 ಟಿಎಂಸಿಯಷ್ಟು
ನೀರು ಸಂಗ್ರಹ ಇದೆ.ಐದು ವರ್ಷದಲ್ಲೇ ಇದು ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿದ ನೀರಿನ ಮಟ್ಟ ಎಂದು (KRS Dam water level) ದಾಖಲಾಗಿದೆ.

ಕಾವೇರಿ (Kaveri) ಜಲಾನಯನ ಸುತ್ತ ಮುತ್ತ ಪ್ರದೇಶದಲ್ಲಿ ಮಳೆ ಕೊರತೆಯಿಂದ ಕೆಆರ್ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕುಸಿದಿದೆ. ಹೌದು, ನೀರಿನ ಮಟ್ಟವು ಐದು ವರ್ಷಗಳಲ್ಲಿ ಅತ್ಯಂತ ಕಡಿಮೆ
ಮಟ್ಟಕ್ಕೆ ಕುಸಿದಿದೆ, ಮತ್ತು ಬೆಂಗಳೂರು ಮಾತ್ರವಲ್ಲದೆ ಕಾವೇರಿ ನೀರನ್ನು ಅವಲಂಬಿಸಿರುವ ನಗರಗಳು ನೀರಿನ ಕೊರತೆಯನ್ನು ಎದುರಿಸಬೇಕಾಗುತ್ತದೆ.
ಇದನ್ನೂ ಓದಿ : ಇಂದಿರಾ ಕ್ಯಾಂಟೀನ್ ಊಟದ ಮೆನು ಬದಲಾವಣೆ : ಹೊಸ ಸೇರ್ಪಡೆ ಪಟ್ಟಿ ಇಲ್ಲಿದೆ ನೋಡಿ
ಇದೇ ವೇಳೆ ಕೆಆರ್ ಎಸ್ ಅಣೆಕಟ್ಟೆ ಬಳಿಯ ರೈತರು ಕೂಡ ಬೆಳೆ ನಷ್ಟದ ಭೀತಿ ಎದುರಿಸುತ್ತಿದ್ದಾರೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್ಎಸ್ನಲ್ಲಿ ಸದ್ಯದ ಮಟ್ಟಿಗೆ ಇದೀಗ 79.02 ಅಡಿಯಷ್ಟೇ
ನೀರು ಸಂಗ್ರಹವಾಗಿದೆ. ದಿನದಿಂದ ದಿನಕ್ಕೆ ಇದು ಕೂಡ ಕುಸಿಯುತ್ತಿದೆ.
ಈ ಬಾರಿ ಮುಂಗಾರು ಪೂರ್ವ ಮಳೆ ಕೂಡ ಕೈ ಕೊಟ್ಟಿದೆ. ಇದೇ ವೇಳೆ ಕಳೆದ ವರ್ಷಕ್ಕೆ ಉತ್ತಮ ಮಳೆಯಾಗಿತ್ತು. ಈ ಬಾರಿ ದಿನದಿಂದ ದಿನಕ್ಕೆ ಜಲಾಶಯದ ನೀರಿನ ಮಟ್ಟ ಮಳೆಯ ಕೊರತೆಯಿಂದ ಕುಸಿಯತೊಡಗಿದೆ.
ಕುಡಿಯುವ ನೀರಿಗೆ ಅಗತ್ಯವಿರುವಷ್ಟು ನೀರು ಮಾತ್ರ ಪ್ರಸ್ತುತ ಜಲಾಶಯದಲ್ಲಿ ಸಂಗ್ರಹವಾಗಿದೆ. ಇನ್ನು ಮುಂಗಾರು ಮಳೆಯತ್ತ ಕೃಷಿ ಚಟುವಟಿಕೆ ಆರಂಭಕ್ಕೆ ಸಿದ್ಧರಾಗಿರುವ ರೈತರು ಈಗ ದೃಷ್ಟಿಹರಿಸಿದ್ದಾರೆ.
ರಶ್ಮಿತಾ ಅನೀಶ್