Dakshina Kannada: ದಕ್ಷಿಣ ಕನ್ನಡ ಜಿಲ್ಲೆಯ (land Akrama Sakrama Deal) ಬಂಟ್ವಾಳ ಶಾಸಕರ ಅಧ್ಯಕ್ಷತೆಯಲ್ಲಿರುವ ಅಕ್ರಮ ಸಕ್ರಮದ ಸಮಿತಿಯ ಭೂ ಮಾಪಿಯಾದ ಕರ್ಮಕಾಂಡ
ಬಯಲು ಮಾಡಲು ಹೊರಟ ಸಾಮಾಜಿಕ ಕಾರ್ಯಕರ್ತರಾದ ಪದ್ಮನಾಭ ಸಾಮಂತ್ (Padmanabha Samanth) ವಾಮದಪದವುರವರ ಹತ್ಯೆ ಮಾಡಲು ಉತ್ತರ ಪ್ರದೇಶದ (Uttar Pradesh)
ಯುವಕರಿಗೆ ಡೀಲ್ ಕೊಡಲಾಗಿದ್ದು, ಅವರಿಗೆ ಕೊಲೆ ಬೆದರಿಕೆ (land Akrama Sakrama Deal) ಮಾಡಲಾಗುತ್ತಿದೆ.

ಕಾಂಗ್ರೆಸ್ (Congress) ಕಾರ್ಯಕರ್ತರಾದ ಪದ್ಮನಾಭ ಸಾಮಂತ್ ಅವರು ಈ ಅಕ್ರಮದ ವಿರುದ್ದ ದೂರು ನೀಡಿರುವ ಕಾರಣ ಆರೋಪಿಗಳಾದ ಉದಯ ಪೂಜಾರಿ (Udaya Poojari) ಪಾಂಡವರ
ಗುಡ್ಡೆ ಕೊಯಿಲ ಹಾಗೂ ಆತನ ಸಹಚರ ಉದಯ ಶೆಟ್ಟಿ ಸಿದ್ದಕಟ್ಟೆ ಪರನೀರು ಅವರು ಫೋನ್ ಕರೆ ಮೂಲಕ ಬೆದರಿಕೆಯೊಡ್ಡಿರುವುದಲ್ಲದೆ ಉತ್ತರ ಪ್ರದೇಶದ (Uttara Pradesh) ಯುವಕರನ್ನು ಈ ಹತ್ಯೆ
ನಡೆಸಲು ಸೆಟ್ ಮಾಡಿರುವುದು ಬಯಲಾಗಿದೆ.
ಅಷ್ಟೇ ಅಲ್ಲದೆ, ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿದ್ದಾರೆ. ಇನ್ನು ಈ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ (Punjalakatta Police Station) ದೂರು ದಾಖಲಿಸಲಾಗಿದೆ.
ಬಂಟ್ವಾಳ (Bantwala) ತಾಲೂಕಿನ ಕೊಳ್ನಾಡು ಎಂಬಲ್ಲಿ ಒಂದೇ ಕುಟುಂಬದ ಒಂದೇ ಮನೆಯಲ್ಲಿ ವಾಸವಿರುವ ತಂದೆ, ತಾಯಿ, ಮಗನಿಗೆ 10 ಎಕರೆ

ಸರ್ಕಾರಿ ಜಮೀನನ್ನು 2018-22 ನೇ ಸಾಲಿನ ಬಂಟ್ವಾಳದ ಶಾಸಕರ ಅಧ್ಯಕ್ಷತೆ ವಹಿಸಿಕೊಂಡಿರುವ ಅಕ್ರಮ ಸಕ್ರಮ ಸಮಿತಿಯು, ಕಾನೂನು ಬಾಹಿರವಾಗಿ ಸರ್ಕಾರಿ ಶಾಲೆಗೆ ಅಧಿಕೃತವಾಗಿ ಮೀಸಲಿಟ್ಟ
ಭೂಮಿಯನ್ನು ಬಂಟ್ವಾಳ ಶಾಸಕರ ಆಪ್ತನಿಗೆ ವರ್ಗಾವಣೆ ಮಾಡಿರುತ್ತಾರೆ.
ಇನ್ನು ತಂದೆಯ ಹೆಸರಿನಲ್ಲಿ 2.50 ಎಕರೆ, ತಾಯಿಯ ಹೆಸರಿನಲ್ಲಿ 2.90 ಎಕರೆ, ಮಗನ ಹೆಸರಿನಲ್ಲಿ 4.58 ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಮಂಜೂರಾತಿ ಮಾಡಲಾಗಿದೆ. ಇದು ಸರ್ಕಾರಿ
ಶಾಲೆಯ ಜಮೀನು ಎನ್ನುವುದಕ್ಕೆ ಸರ್ಕಾರದ ಮುಟೇಶನ್ ಕಾಪಿ (Mutation Copy) ಸಾಕ್ಷಿಯಾಗಿದ್ದು, ಅಷ್ಟೇ ಅಲ್ಲದೆ 2018ನೇ ಸಾಲಿನ ಅಕ್ರಮ ಸಕ್ರಮ ಸಮಿತಿಯ ಭ್ರಷ್ಟಾಚಾರ ಹಾಗೂ ಅವ್ಯವಹಾರದ
ಮೂಲಕ ಭೂಕಂದಾಯ ನಿಯಮಗಳನ್ನು ಉಲ್ಲಂಘಿಸಿ, ಮಾಡಿರುವ ಭೂ ಮಂಜೂರಾತಿ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಬಂಟ್ವಾಳ ತಹಸೀಲ್ದಾರ್ (Tahsildar) ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ.
ಇದನ್ನು ಓದಿ: ಅಕ್ರಮ ಸಕ್ರಮ ಹಗರಣ: ದೂರು ದಾಖಲಿಸಿದ ಕಾಂಗ್ರೆಸ್ ಕಾರ್ಯಕರ್ತ ಪದ್ಮನಾಭ ಸಮಂತ್ಗೆ ಕೊಲೆ ಬೆದರಿಕೆ
- ಭವ್ಯಶ್ರೀ ಆರ್ ಜೆ