ನವದೆಹಲಿ ಅ 16 : ನಿಗದಿತ ಸಮಯದಲ್ಲಿ ಪೋಷಕರಿಂದ ಪಾವತಿ ಆಗದ ಶುಲ್ಕ ವಸೂಲಿ ಸಂಬಂಧ ಕ್ರಮ ಕೈಗೊಳ್ಳಲು ಶಾಲ ಆಡಳಿತ ಮಂಡಳಿಗಳು ಮುಕ್ತವಾಗಿವೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಕಳೆದ ಮೇ 20ರಂದು ನೀಡಿದ ತೀರ್ಪಿನಲ್ಲಿ ಉಲ್ಲೇಖಿಸಿದ ನ್ಯಾಯಾಲಯ ಕಂತು ಪಾವತಿಯ ಗಡುವು ಬಹಳ ಹಿಂದೆಯೇ ಮುಗಿದಿದ್ದರೂ ಪೋಷಕರು, ಪಾಲಕರು ಇನ್ನೂ ಹಣ ಪಾವತಿಸಿಲ್ಲ ಹಾಗೂ ಮರುಪಾವತಿಗೆ ವಿಫಲರಾಗಿದ್ದಾರೆ ಎಂದು ಶಾಲೆಗಳು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಪಿ.ಎಂ ಖಾನ್ಸಿಲ್ಕರ್ ಮತ್ತು ಸಿ.ಟಿ ರವಿಕುಮಾರ್ ಅವರಿದ್ದ ಪೀಠ ಅದೇಶ ನೀಡಿದೆ.
ಇನ್ನೂ ಪಾವತಿಯಾಗದ ಬಾಕಿ ಹಣ ವಸೂಲು ಮಾಡಲು ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲು ಶಾಲಾ ಆಡಳಿತ ಮುಕ್ತವಾಗಿವೆ. ಅದೇ ವೇಳೆ ಸಂಬಂಧಪಟ್ಟ ಪೋಷಕರು, ಪಾಲಕರು ನಿಜವಾಗಿಯೂ ವಿನಾಯಿತಿ ಬಯಸಿದರೆ ಅಂತಹ ಮನವಿಯನ್ನು ಸಹಾನುಭೂತಿಯಿಂದ ಪರಿಗಣಿಸಲು ಶಾಲಾಡಳಿತ ಮುಕ್ತವಾಗಿದೆ. ಇದರ ಹೊರತಾಗಿ ಹೆಚ್ಚೇನನ್ನೂ ಹೇಳಬೇಕಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಕಂತಿನ ಮೂಲಕ ಹಣ ಪಾವತಿಸುವ ಗಡುವು ಮುಕ್ತಾಯಗೊಂಡರೂ ಶುಲ್ಕ ಪಾವತಿಯಿಂದ ಪೋಷಕರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.