ಬೆಂಗಳೂರು, ಮಾ. 26: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿರುವ ಯುವತಿ ಶುಕ್ರವಾರ 3ನೇ ವಿಡಿಯೋ ಬಿಡುಗಡೆ ಮಾಡಿದ್ದು, ತಮ್ಮ ವಕೀಲ ಜಗದೀಶ್ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ಸಲ್ಲಿಸುತ್ತಿರುವುದಾಗಿ ವಿಡಿಯೋದಲ್ಲಿ ಹೇಳಿದ್ದಾಳೆ.
ನಿನ್ನೆಯಷ್ಟೇ ಎರಡನೇ ವಿಡಿಯೋ ಬಿಡುಗಡೆ ಮಾಡುವ ಮೂಲಕ ತಮ್ಮ ತಂದೆ-ತಾಯಿ ರಕ್ಷಣೆ ಬಗ್ಗೆ ಹಾಗೂ ಎಸ್ಐಟಿ ಅಧಿಕಾರಿಗಳ ಬಗ್ಗೆ ಭಾರೀ ಆರೋಪ ಮಾಡಿದ್ದರು. ಸಿಡಿ ಲೇಡಿಯ ಈ ವಿಡಿಯೋ ಹೊಸ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಮೂರನೇ ವಿಡಿಯೋ ಬಿಡುಗಡೆ ಮಾಡಿರುವ ಯುವತಿ, ಎಲ್ಲಾ ಕರ್ನಾಟಕದ ಜನತೆಯ ತಂದೆ-ತಾಯಿ ಆಶೀರ್ವಾದದಿಂದ, ಎಲ್ಲಾ ಪಕ್ಷದ ನಾಯಕರು ಹಾಗೂ ಸಂಘಟನೆಯವರು ನನ್ನ ಬೆಂಬಲಿಸುತ್ತಿದ್ದೀರಾ. ನಾನು 24 ದಿನ ಜೀವ ಭಯದಲ್ಲಿ ಬದುಕುತ್ತಿದ್ದೇನೆ. ಈಗ ನನ್ನ ಎಲ್ಲಾ ಬೆಂಬಲಿಸುತ್ತಿದ್ದೀರಾ ಎಂಬ ಭರವಸೆಯಿಂದ ರಮೇಶ್ ಜಾರಕಿಹೊಳಿ ವಿರುದ್ಧ ನನ್ನ ವಕೀಲ ಜಗದೀಶ್ ವಿರುದ್ಧ ದೂರು ಸಲ್ಲಿಸುತ್ತಿದ್ದೇನೆ” ಎಂದು ಯುವತಿ ಹೇಳಿದ್ದಾಳೆ.
29 ಸೆಕೆಂಡ್ ಅವಧಿಯ ಈ ವಿಡಿಯೋದಲ್ಲಿ ಯುವತಿ ಇಷ್ಟು ವಿವರ ಮಾತ್ರ ಹೇಳಿದ್ದಾಳೆ. ರಮೇಶ್ ಜಾರಕಿಹೊಳಿ ವಿರುದ್ಧ ನಾನೇ ಸ್ವತಃ ದೂರು ಸಲ್ಲಿಸುತ್ತಿದ್ದೇನೆ ಎಂಬುವುದಕ್ಕೆ ಪೊಲೀಸರಿಗೆ ದೂರು ಬರೆಯುತ್ತಿರುವ ಫೋಟೊವನ್ನು ಯುವತಿ ಕಳುಹಿಸಿದ್ದಾಳೆ.
ರಮೇಶ್ ಜಾರಕಿಹೊಳಿ ವಿರುದ್ಧ ದೂರು ಸಲ್ಲಿಸುತ್ತಿರುವ ಕಾರಣ ಈ ಪ್ರಕರಣ ಮತ್ತೊಂದು ತಿರುವು ಪಡೆದಿದೆ.