ಪ್ರಧಾನಿ(Primeminister) ನರೇಂದ್ರ ಮೋದಿ(Narendra Modi), ಮತ್ತು ಶಾಸಕ ಎಸ್.ಎ.ರಾಮದಾಸ್(SA Ramdas) ಇಬ್ಬರೂ ಬ್ಯಾಚುಲರ್ಸು ಹೀಗಾಗಿ ವೇದಿಕೆಯಲ್ಲಿ ತಬ್ಬಾಡಿದ್ರು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್(M Lakshman) ನೀಡಿರುವ ಹೇಳಿಕೆ ಸಭ್ಯತೆಯ ಎಲ್ಲೆ ಮೀರಿದೆ.
ಒಂದು ರಾಷ್ಟ್ರೀಯ ಪಕ್ಷದ ವಕ್ತಾರ ಸ್ಥಾನದಲ್ಲಿರುವವರಿಗೆ ಕನಿಷ್ಠ ಸಭ್ಯತೆಯ ಅರಿವಿರಬೇಕು.
ನರೇಂದ್ರ ಮೋದಿಯವರು ಕೇವಲ ಬಿಜೆಪಿ ನಾಯಕರಲ್ಲ, ಅವರು ಇಡೀ ದೇಶದ ಪ್ರಧಾನಿ ಎಂಬ ಸಂಗತಿಯನ್ನು ಲಕ್ಷ್ಮಣ್ ಅವರು ನೆನಪಿನಲ್ಲಿಟ್ಟುಕೊಳ್ಳಬೇಕು.
ಆಡಳಿತ ಪಕ್ಷವನ್ನು ಟೀಕಿಸಲು, ವ್ಯಂಗ್ಯ ಮತ್ತು ಲೇವಡಿ ಮಾಡಲು ವಿರೋಧ ಪಕ್ಷಗಳಿಗೆ ಮುಕ್ತ ಅವಕಾಶವಿರುತ್ತದೆ. ಆದರೆ ವ್ಯಂಗ್ಯ ಎನ್ನುವುದು ಕೂಡಾ ವೈಯಕ್ತಿಕ ಅವಹೇಳನದ ಭಾಗವಾಗಿರಬಾರದು.
https://vijayatimes.com/mithali-raj-biopic-cinema-releasing/
ಮೋದಿಯವರ ಕಾರ್ಯವೈಖರಿಯನ್ನು, ಯೋಜನೆಗಳನ್ನು, ನಿರ್ಧಾರಗಳನ್ನು ವ್ಯಂಗ್ಯವಾಡಬಹುದು. ಆದರೆ ನೀವು ಮಾಡಿರುವ ಲೇವಡಿ ಅಥವಾ ವ್ಯಂಗ್ಯ ನಿಮ್ಮ ಘನತೆಗೆ ಸರಿಯಾದುದೇ?ಎಂಬುದನ್ನು ಲಕ್ಷ್ಮಣ್ ಅವರೇ ಹೇಳಬೇಕು. ಇತ್ತೀಚಿನ ದಿನಗಳಲ್ಲಿ ರಾಜಕೀಯ ಟೀಕೆಗಳು ಸಭ್ಯತೆಯ ಎಲ್ಲೆ ಮೀರುತ್ತಿವೆ.
ಈ ಮಾತು ಎಲ್ಲ ಪಕ್ಷಗಳಿಗೂ ಅನ್ವಯವಾಗುತ್ತದೆ. ರಾಜಕೀಯ ವಿರೋಧಿಗಳನ್ನು ವೈಯಕ್ತಿಕವಾಗಿ ಟೀಕಿಸುವ ಮತ್ತು ಲೇವಡಿ ಮಾಡುವ ಪರಿಪಾಠ ರಾಜಕೀಯ ಅಂಧಃಪತನದ ಸೂಚಕವಾಗಿದೆ. ರಾಜಕೀಯ ಟೀಕೆಗಳು ಅತ್ಯಂತ ಮೌಲ್ಯಯುತವಾಗಿರಬೇಕು. ಜನಪರ ಕಾಳಜಿ ಮತ್ತು ಅಭಿವೃದ್ದಿಗೆ ಪೂರಕವಾಗಿ ಮಾಡುವ ಟೀಕೆಗಳು ಆಳುವ ಸರ್ಕಾರಕ್ಕೆ ಚಾಟಿ ಬೀಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಟೀಕೆಗಳು ಕೇವಲ ಮಾನಹಾನಿ ಮಾಡುವ ಸಾಧನವಾಗುತ್ತಿವೆ.