- **ಸ್ಥಳದಲ್ಲಿ ಸಾಲು, ಸಾಲು ಕೊ* ರಹಸ್ಯ
- ಕೋರ್ಟ್ಗೆ ಹಾಜರಾಗಿ ದೂರು ಸಲ್ಲಿಸಿದ ದೂರುದಾರ (Man appears court)
- ಪೊಲೀಸ್ ಭದ್ರತೆಯೊಂದಿಗೆ ಬೆಳ್ತಂಗಡಿ ಕೋರ್ಟ್ಗೆ ಹಾಜರ್
- ಅಸ್ತಿಪಂಜರ, ಪೂರಕ ದಾಖಲೆ ಸಲ್ಲಿಸಿದ ದೂರುದಾರ
ಈ ಸುದ್ದಿ ನಿಜವಾಗ್ಲೂ ರಾಜ್ಯದಲ್ಲಿ ಸಂಚಲನ ಮೂಡಿಸುತ್ತಿದೆ. ಹತ್ತಾರು ವರ್ಷ *ಸ್ಥಳದಲ್ಲಿ ಹೂತಿಟ್ಟ ಕೊ*ಗಳ, ಸಾ*ನ ರಹಸ್ಯ ಬಯಲಾಗೋ ಕಾಲ ಸನ್ನಿಹಿತವಾಗಿದೆ.
ಯಾಕಂದ್ರೆ ಇಲ್ಲಿ ಹತ್ತಾರು ಮಹಿಳೆಯರನ್ನು, ಅಪ್ರಾಪ್ತ ಬಾಲಕಿಯರನ್ನ, ಪುರುಷರನ್ನ ಕೊ* ಮಾಡಿ ಮಣ್ಣಿನಲ್ಲಿ ಹೂತಿಟ್ಟು, ಸುಟ್ಟ ವ್ಯಕ್ತಿಯೇ ಈಗ ಆ ಸತ್ಯವನ್ನ ಹೇಳಿದ್ದಾರೆ.
ಸ್ವತ: ತಾನೇ ದಕ್ಷಿಣ ಕನ್ನಡ(Dakshina Kannada) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿ,
ಬೆಳ್ತಂಗಡಿಯ ಕೋರ್ಟ್ಗೆ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಹಾಜರಾಗಿದ್ದಾರೆ.
ಆ ವ್ಯಕ್ತಿ ವ್ಯಕ್ತಿಯ ದೂರಿನಲ್ಲೇನಿದೆ?
ಆ ವ್ಯಕ್ತಿ ಮತ್ತಾರು ಅಲ್ಲ *ಸ್ಥಳದಲ್ಲಿ ಶುಚಿತ್ವದ ಕೆಲಸ ಮಾಡುತ್ತಿದ್ದವರು. ಆ ಸ್ಥಳದ ಪ್ರಭಾವಿಗಳು(influencers) ಈ ವ್ಯಕ್ತಿಗೆ ಮೃ*ದೇಹಗಳನ್ನು ಹೂತು ಹಾಕುವಂತೆ ನಿರ್ದೇಶನ ನೀಡಿ ಚಿತ್ರಹಿಂಸೆ ನೀಡುತ್ತಿದ್ದರಂತೆ.
ಈ ವ್ಯಕ್ತಿ ದಕ್ಷಿಣ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗೆ ನೀಡಿರುವ ದೂರಿನಲ್ಲಿ **ಸ್ಥಳದಲ್ಲಿ ನಡೆದ ಕೊ*ಗಳ ರಹಸ್ಯವನ್ನು ಒಂದೊಂದಾಗಿಯೇ ಬಿಚ್ಚಿಟ್ಟಿದ್ದಾರೆ.

ಬಿಗಿ ಪೊಲೀಸ್ ಭದ್ರತೆಯೊಂದಿಗೆ ಬೆಳ್ತಂಗಡಿ ಕೋರ್ಟ್ಗೆ(Belthangady court) ದೂರುದಾರ ಹಾಜರಾಗಿದ್ದು,
ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಧೀಶರು(Chief Civil Judge) ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸಂದೇಶ್.ಕೆ(Sandesh.K) ಅವರ ಮುಂದೆ ಹಾಜರಾಗಿ,
ಬಿಎನ್ಎಸ್ 183 ಪ್ರಕಾರ ಹೇಳಿಕೆ ನೀಡಿದ್ದಾರೆ. ನಂತರ ವಕೀಲರೊಂದಿಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ತೆರಳಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.
ದೂರುದಾರರು ಸ್ವತಃ ತಾವೇ ಹೊರತೆಗೆದಿರುವುದಾಗಿ ತಿಳಿಸಿರುವ ಅಸ್ಥಿಪಂಜರದ ಅವಶೇಷಗಳನ್ನು ಹಾಜರುಪಡಿಸಿದ್ದು,
ಅವುಗಳನ್ನು ಸಾಕ್ಷಿ ದೂರುದಾರರ ಪರ ವಕೀಲರು ಹಾಗೂ ಪಂಚರದ ಸಮ್ಮುಖದಲ್ಲಿ ಪೊಲೀಸರು ಸ್ವಾಧೀನಕ್ಕೆ ಪಡೆದುಕೊಳ್ಳಲಾಗಿದೆ.
ಅವರೇ ತಮ್ಮ ದೂರಿನಲ್ಲಿ ಹೇಳಿರುವಂತೆ. ತಾವು ಹೂತಿರುವ ಮೃ*ದೇಹಗಳಲ್ಲಿ ಮಹಿಳೆಯರು ಹಾಗೂ ಅಪ್ರಾಪ್ತ ಬಾಲಕಿಯರದ್ದೇ ಹೆಚ್ಚಿದೆಯಂತೆ.
ಅನೇಕ ಮಹಿಳೆಯರ ಶ*ಗಳು ಬಟ್ಟೆ ಹಾಗೂ ಒಳ ಉಡುಪುಗಳೇ ಇಲ್ಲದೆ, ಹರಿದ ಬಟ್ಟೆಗಳಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದವಂತೆ.
ಮೈಮೇಲೆ, ಕುತ್ತಿಗೆ ಮೇಲೆ, ದೇಹದ ಒಳಭಾಗಗಳೆಲ್ಲಾ ಗಾಯಗಳಿಂದ ಕೂಡಿರುತ್ತಿತ್ತು. ಅದರಲ್ಲೂ ಖಾಸಗಿ ಭಾಗಗಳು ಕ್ರೂರವಾಗಿ ಗಾಯವಾಗಿದ್ದವು.
ಕೆಲವರ ದೇಹದ ಮೇಲೆ ಸುಟ್ಟ ಗಾಯಗಳು, ಮುಖದಲ್ಲಿ ಆಸಿಡ್ ಇರುತ್ತಿತ್ತು.
2010ನೇ ಇಸವಿಯಲ್ಲಿ 12-15 ವರ್ಷದ ಶಾಲಾ ಸಮವಸ್ತ್ರ(school uniform) ಧರಿಸಿದ್ದ ಬಾಲಕಿಯನ್ನು ಅತ್ಯಾಚಾರ ಮಾಡಿ, ಕತ್ತು ಹಿಸುಕಿದ ಸ್ಥಿತಿಯಲ್ಲಿ ಹೆಣ ಸಿಕ್ಕಿತ್ತು.
ಆಕೆಯ ಹೆಣವನ್ನು ಶಾಲಾ ಬ್ಯಾಗ್ ಸಮೇತ ಹೂಳುವ ಸೂಚನೆ ನೀಡಿದ್ದಂತೆ. ಇನ್ನು 20 ವರ್ಷದ ಮಹಿಳೆಯ ಮುಖವನ್ನ ಆಸಿಡ್ನಿಂದ(acid) ಸುಟ್ಟು ದೇಹವನ್ನ ದಿನಪತ್ರಿಕೆಯಿಂದ ಮುಚ್ಚಲಾಗಿತ್ತು.
ಆಕೆಯ ಪಾದರಕ್ಷೆ, ಅವಳ ಎಲ್ಲಾ ವಸ್ತುಗಳನ್ನ ಸುಡಲು ಸೂಚನೆ ನೀಡಿದ್ದರು.
ಈ ಪಾಪಿಗಳು ಕೇವಲ ಮಹಿಳೆಯರನ್ನ ಮಾತ್ರ ಅಲ್ಲ ಭಿಕ್ಷಾಟನೆಗೆ ಬಂದಿರುವ ಪುರುಷರನ್ನ ಕೊಠಡಿಯ ಕುರ್ಚಿಗಳಿಗೆ ಕಟ್ಟಿಹಾಕಿ ಟವಲ್ನಿಂದ ಉಸಿರುಗಟ್ಟಿಸಿ ಕೊ* ಮಾಡುತ್ತಿದ್ದರು.
ಕೊ*ಯ ಬಳಿಕ ಈ ದೇಹಗಳನ್ನು ಹೂತು ಹಾಕಲು ನನಗೆ ನಿರ್ದೇಶನ ನೀಡುತ್ತಿದ್ದರು.
ಅದೆಷ್ಟೋ ಬಾರಿ ಡೀಸೆಲ್ನಿಂದ ಮೃ*ದೇಹಗಳನ್ನ ಬಲವಂತವಾಗಿ ಸುಟ್ಟು ಹಾಕಿದ್ದೇನೆ ಎಂದು ವ್ಯಕ್ತಿ ದೂರು ನೀಡಿದ್ದಾರೆ.
ಇನ್ನು ಈ ಕೆಲಸ ನನ್ನಿಂದ ಆಗಲ್ಲ ಎಂದು ಆ ವ್ಯಕ್ತಿಗೆ ಹೇಳಿದ್ರೆ ಜೀವ ಬೆದರಿಕೆ ಹಾಕುತ್ತಿದ್ದರಂತೆ. ನಿನ್ನನ್ನೂ ನಿನ್ನ ಮನೆಯವ್ರನ್ನೂ ಕೊ*ವೆ ಅಂತಾ ಪ್ರಭಾವಿಗಳು ಹೆದರಿಸುತ್ತಿದ್ದರಂತೆ.
ಅದೆಷ್ಟೋ ಬಾರಿ ಅವರಿಂದ ಥಳಿತಕ್ಕೂ ಒಳಗಾಗಿದ್ದರಂತೆ. ಇದರಿಂದ ಭೀತರಾಗಿ, ಸಾ*ಗೆ ಅಂಜಿ ಇವರ ಕುಟುಂಬ ನೆರೆರಾಜ್ಯಕ್ಕೆ ತೆರಳಿ ತಲೆಮರೆಸಿಕೊಂಡು ಜೀವನ ಮಾಡಲಾರಂಭಿಸಿದರಂತೆ.
ಆದ್ರೂ ಜೀವಕ್ಕೆ ಗ್ಯಾರಂಟಿ ಇರಲಿಲ್ಲ. ಹಾಗಾಗಿ ಇವರಿಗೆ ಪಾಪಪ್ರಜ್ಞೆ ಕಾಡಿ ಅಷ್ಟೂ ಸಾಗೆ ನ್ಯಾಯ ಸಿಗಲಿ ಅಂತ ನಿರ್ಧರಿಸಿ, ಆ ವ್ಯಕ್ತಿ ಇತ್ತೀಚೆಗೆ ಕಳೇಬರ ಹೊರತೆಗೆದು,
ಕಳೇಬರ ಹಾಗೂ ಛಾಯಾಚಿತ್ರವನ್ನ ಪೊಲೀಸ್ ವರಿಷ್ಠಾಧಿಕಾರಿಗೆ ನೀಡಿದ್ದಾರೆ.
ಜೊತೆಗೆ ಸ್ಥಳಕ್ಕೆ ಬಂದು ಮೃ*ದೇಹ ಹೊರತೆಗೆಯಲು ಸಹಕಾರ ನೀಡುತ್ತೇನೆ. ಹಾಗೂ ಈ ಮೃ*ದೇಹಗಳಿಗೆ ಅಂತ್ಯಸಂಕಸ್ಕಾರ ಸಿಕ್ಕಿಲ್ಲ, ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ಇದನ್ನು ಓದಿ : ವಡೋದರಾ ಸೇತುವೆ ಕುಸಿತ ದುರಂತ: 4 ಎಂಜಿನಿಯರ್ಗಳ ಅಮಾನತು
ಅಬ್ಬಾ ಕೇಳ್ತಿದ್ರೆ ಅದೆಷ್ಟು ಭಯಂಕರ ಅನ್ಸುತ್ತೆ ಅಲ್ವಾ. (Man appears court) ಇವರು ಕೊಟ್ಟ ದೂರಿನ ಆಧಾರದಲ್ಲಿ FIR ದಾಖಲಾಗಿದೆ.