ಪುತ್ತೂರು,ಫೆ.19 : ಅಡವಿಟ್ಟ ಮನೆಯ ಸಾಲ ತೀರಿಸಲಾಗದಾಗ ಅದರ ಮುಟ್ಟುಗೋಲಿಗೆ ಬಂದ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ ಕಣ್ಣ ಮುಂದೆಯೇ ಮನೆ ಮಾಲಕಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮನ ಕಲಕುವ ಘಟನೆ ಪುತ್ತೂರಿನಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹಾರಾಡಿ ರೈಲ್ವೆ ಗೇಟ್ ಬಳಿಯ ನಿವಾಸಿಗಳಾದ ರಘುವೀರ್ ಪ್ರಭು, ಪುತ್ತೂರಿನ ಕೆನರಾ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದರು. ಸಾಲ ತೀರಿಸಲಾಗದ್ದರಿಂದ ಮನೆ ಮುಟ್ಟುಗೋಲಿಗೆ ಬ್ಯಾಂಕ್ ಅಧಿಕಾರಿಗಳು ಆಗಮಿಸಿದ್ದರು.
ಇದರಿಂದಾಗಿ ಮಾನ ಮರ್ಯಾದೆಗೆ ಹೆದರಿದ ಹಾಗೂ ಸಾಲ ಮರುಪಾವತಿಸಲು ಅಶಕ್ತರಾಗಿದ್ದ ರಘುವೀರ್ ಪ್ರಭು ಅವರ ಪತ್ನಿ ಪ್ರಾರ್ಥನಾ ಪ್ರಭು ಅವರು, ಮನೆಯೊಳಗೆ ಹೋಗಿ ಚಿಲಕ ಹಾಕಿ ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬ್ಯಾಂಕ್ ಅಧಿಕಾರಿಗಳ ಕಣ್ ಮುಂದೆಯೇ ಸಾವಿಗೀಡಾಗಿದ್ದಾರೆ. ನೇಣುಬಿಗಿದ ಸ್ಥಿತಿಯಲ್ಲಿದ್ದಂತ ಪ್ರಾರ್ಥನಾ ಪ್ರಭು ಅವರನ್ನು ಕೂಡಲೆ ಪೊಲೀಸರು ಆಸ್ಪತ್ರೆಗೆ ಕರೆದೊಯ್ದರೂ ಅಚ್ಟರಲ್ಲೇ ಪ್ರಾರ್ಥನಾ ಪ್ರಭು ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.