ಮೈಸೂರು, ಜ. 11: ಸದ್ಯದ ಆರ್ಥಿಕ ಪರಿಸ್ಥಿತಿ ನಡುವೆಯೂ ರೈತರನ್ನು ಆಲೋಚನೆಯಲ್ಲಿ ಇಟ್ಟುಕೊಂಡು ಮಾರ್ಚ್ ಮೊದಲ ವಾರ ಬಜೆಟ್ ಅಧಿವೇಶನ ನಡೆಸಲಾಗುವುದು ಎಂದರು.
ಸುತ್ತೂರಿನ ಹೆಲಿಪ್ಯಾಡ್ ನಲ್ಲಿ ಮಾದ್ಯಮಗಳ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ಸಚಿವ ಸಂಪುಟ ವಿಸ್ತರಣೆ ೧೩ ಮಧ್ಯಾಹ್ನ ಅಮಾವಾಸ್ಯೆ ಬಳಿಕ ಸಚಿವ ಸಂಪುಟ ಕಾರ್ಯ ಆಗಲಿದೆ. ವಿಸ್ತರಣೆ ಅಥವಾ ಪುನರ್ ರಚನೆಯೂ ಕಾದು ನೋಡಿ ಎಂದರು.
ಸಚಿಚ ಎಸ್.ಟಿ.ಸೋಮಶೇಖರ್, ಶಾಸಕ ಎಸ್.ಎ.ರಾಮದಾಸ್, ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.