• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಹಳ್ಳಿಯ ಜನರ ‘ಮುಲಾಮಿನ ಗಿಡ’ ; ಅಡಿಕೆ ಸೊಪ್ಪಿನ ಗಿಡ ಅಥವಾ ಜಯಂತಿ ಗಿಡದ ಬಗ್ಗೆ ಇಲ್ಲಿದೆ ಮಾಹಿತಿ

Mohan Shetty by Mohan Shetty
in ಆರೋಗ್ಯ, ವಿಶೇಷ ಸುದ್ದಿ
ಹಳ್ಳಿಯ ಜನರ ‘ಮುಲಾಮಿನ ಗಿಡ’ ; ಅಡಿಕೆ ಸೊಪ್ಪಿನ ಗಿಡ ಅಥವಾ ಜಯಂತಿ ಗಿಡದ ಬಗ್ಗೆ ಇಲ್ಲಿದೆ ಮಾಹಿತಿ
0
SHARES
1
VIEWS
Share on FacebookShare on Twitter

Karnataka : ಗ್ರಾಮೀಣ ಪ್ರದೇಶದಲ್ಲಿ ಬದುಕುತ್ತಿರುವ ಜನರಿಗೆ ಅತ್ಯಂತ ಚಿರಪರಿಚಿತವಾದ ಈ ಜಯಂತಿ ಗಿಡ(Medicinal Jayanthi Plant), ಭಾರತದಾದ್ಯಂತ ಕಾಣಸಿಕ್ಕರೂ ಉಷ್ಣ ವಲಯಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಸುಮಾರು ಒಂದೂವರೆ ಅಡಿ ಎತ್ತರಕ್ಕೆ ಬೆಳೆಯುವ ಈ ಸಸ್ಯದ ಎಲೆಗಳು ಗಾಢ ಹಸಿರು ಬಣ್ಣದಲ್ಲಿ ಇರುತ್ತವೆ.

Health Tips
Jyanthi plant

ಈ ಎಲೆಗಳು ನೋಡುವುದಕ್ಕೆ ಗರಗಸದ ಹಲ್ಲಿನ ಆಕಾರದಲ್ಲಿ ಇರುತ್ತವೆ. ಈ ಗಿಡದ ಇನ್ನೊಂದು ವಿಶೇಷತೆಯೆಂದರೆ(Medicinal Jayanthi Plant), ಇದು ಪ್ರತಿಯೊಂದು ಕಾಂಡದಲ್ಲಿಯೂ ಕೇವಲ ಒಂದೇ ಹೂವನ್ನು ಬಿಡುವುದು.

ಸಾಮಾನ್ಯವಾಗಿ ಈ ಹೂವು ಆರರಿಂದ ಎಂಟು ದಳಗಳನ್ನು ಹೊಂದಿದ್ದು, ಅಸಂಖ್ಯಾತ ಕೇಸರಗಳನ್ನು ಹೊಂದಿರುತ್ತವೆ.

ಈ ಹೂವುಗಳು ಪಕ್ವವಾದ ಬಳಿಕ ಕೂದಲಿನ ಎಳೆಗಳ ರೀತಿಯ ರಚನೆ ಹೊಂದಿ, ಗಾಳಿಯಲ್ಲಿ ಹಾರಿಹೋಗುವ ಮೂಲಕ ಬೀಜಗಳ ಪ್ರಸರಣ ಉಂಟಾಗುತ್ತದೆ.

ಈ ಗಿಡದ ಎಲೆಗಳು ನೆಲದ ಮೇಲೆ ಹರಡಿಕೊಂಡು ಇರುತ್ತವೆ, ಇದರ ಮೃದುವಾದ ಕಾಂಡ ಮಾತ್ರ ಎತ್ತರಕ್ಕೆ ಬೆಳೆಯುತ್ತದೆ ಹಾಗೂ ಇದರ ತುದಿಯಲ್ಲಿ ಪುಟ್ಟದಾದ ಹೂವು ಬೆಳೆಯುತ್ತದೆ.

ಇದನ್ನೂ ಓದಿ : https://vijayatimes.com/arvind-bellad-letter-to-cm/


ಇನ್ನು, ಸಾಂಪ್ರದಾಯಿಕ ಔಷಧೀಯ ಸಸ್ಯವಾಗಿರುವ ಈ ಜಯಂತಿ ಗಿಡ ಆಂಟಿ ಇನ್ಫ್ಲಾಮೇಟರಿ, ಆಂಟಿ ಫಂಗಲ್ ಮುಂತಾದ ಗುಣಗಳನ್ನು ಹೊಂದಿದ್ದು, ಈ ಸಸ್ಯದ ಎಲೆಗಳು , ಹೂವುಗಳು ಹಾಗೂ ಕಾಂಡವನ್ನೂ ಸಹ ಔಷಧೀಯ ಉದ್ದೇಶಗಳಿಗಾಗಿ ಬಳಕೆ ಮಾಡಲಾಗುತ್ತದೆ.

ಜಾಂಡೀಸ್, ಹೊಟ್ಟೆಯುರಿ, ಶ್ವಾಸ ನಾಳದ ಸಮಸ್ಯೆ, ಅತಿಸಾರ, ಫೈಲ್ಸ್ ಮುಂತಾದ ಕಾಯಿಲೆಗಳಿಗೆ ಈ ಸಸ್ಯ ಉಪಯುಕ್ತವಾಗಿದೆ.

ಅದೇ ರೀತಿ, ಆಗಾಗ ಕಾಣಿಸಿಕೊಳ್ಳುವ ಗಂಟಲು ನೋವಿಗೂ ಕೂಡ ಈ ಸಸ್ಯ ಪ್ರಯೋಜನಕಾರಿ. ಇನ್ನು, ಬಿದ್ದು ಗಾಯವಾಗಿ ರಕ್ತ ಸುರಿಯುತ್ತಿದ್ದರೆ, ಜಯಂತಿ ಗಿಡದ ರಸವನ್ನು ಹಾಕುವುದರಿಂದ ತಕ್ಷಣ ರಕ್ತದ ಹರಿವು ನಿಲ್ಲುತ್ತದೆ ಹಾಗೂ ದೇಹದಲ್ಲಿ ಯಾವುದೇ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾದರೆ ಇದು ನಿವಾರಣೆ ಮಾಡುತ್ತದೆ.

ಇದನ್ನೂ ಓದಿ : https://vijayatimes.com/supremecourt-about-hate-speech/

ಹಾಗಾಗಿ, ಜಯಂತಿ ಗಿಡದ ಎಲೆಗಳನ್ನು ಸಾಮಾನ್ಯವಾಗಿ ಆಯುರ್ವೇದ ಔಷಧಿಗಳಲ್ಲಿ(Ayurvedic Medicines) ಬಳಕೆ ಮಾಡಲಾಗುತ್ತದೆ.

ಅದೇ ರೀತಿ, ಗಂಟಲು ನೋವು ಮತ್ತು ಕೂದಲು ಉದುರುವ ಸಮಸ್ಯೆ ಇರುವವರೂ ಸಹ, ಜಯಂತಿ ಗಿಡದ ಎಲೆಗಳ ರಸವನ್ನು ಬಳಸುವುದರಿಂದ ಹಲವಾರು ಲಾಭಗಳಿವೆ.

Medicinal Jayanthi Plant
Jayanthi plant

ರೋಗನಿರೋಧಕ ಶಕ್ತಿ ಇದರಲ್ಲಿರುವ ಕಾರಣ, ಇದರಿಂದ ಯಾವುದೇ ಅಡ್ಡಪರಿಣಾಮವಿಲ್ಲ. ತೀವ್ರವಾದ ಕೂದಲು ಉದುರುವ ಸಮಸ್ಯೆಯಿರುವವರು, ಈ ಮನೆಮದ್ದು(Home Remedies) ಬಳಸುವುದರಿಂದ ಉತ್ತಮ ಫಲ ಕಾಣಬಹುದು.

ಹೀಗೆ, ರೋಗನಿರೋಧಕ ಗುಣವುಳ್ಳ, ಸಾಕಷ್ಟು ರೋಗಗಳನ್ನು ನಿವಾರಣೆ ಮಾಡುವ ಔಷಧೀಯ ಸಸ್ಯಗಳು ನಮ್ಮಲ್ಲಿ ಹಲವಾರಿವೆ.

https://fb.watch/g4QbACGx9l/ ಆರ್.ಟಿಎಂ ಅವರು ಮಾಡುವ ಅಕ್ರಮ ಒಂದೆರೆಡಲ್ಲ!

ಯಾವುದೇ ಅಡ್ಡಪರಿಣಾಮವೂ ಇಲ್ಲದ ಕಾರಣ ಪ್ರತಿಯೊಬ್ಬರು ಇಂತಹ ಔಷಧೀಯ ಸಸ್ಯಗಳ ಲಾಭವನ್ನು ಪಡೆಯಬಹುದು.

ಆದರೆ ಒಂದು ವಿಷಯ ಗಮನದಲ್ಲಿರಲಿ, ಯಾವುದೇ ಆಯುರ್ವೇದ ಅಥವಾ ಮನೆಮದ್ದು ಮಾಡುವ ಮುನ್ನ ಒಮ್ಮೆ ಆಯುರ್ವೇದ ಪಂಡಿತರು ಅಥವಾ ವೈದ್ಯರ ಸಲಹೆ ಮೇರೆಗೆ ಅದನ್ನು ಅನುಸರಿಸುವುದು ಸೂಕ್ತ. ಏಕೆಂದರೆ, ಕೆಲವರ ದೇಹಕ್ಕೆ ಕೆಲವು ಮನೆಮದ್ದು ಅಥವಾ ನಾಟಿ ಔಷಧಿಗಳು ಒಗ್ಗದಿರುವ ಸಾಧ್ಯತೆಗಳೂ ಇವೆ.

  • ಪವಿತ್ರ
Tags: Healthhealth tipsJayanthi Medicinal Plant

Related News

ಚಳಿಗಾಲದಲ್ಲಿ ಮುಖದ ಕಾಂತಿಯನ್ನು ಹೆಚ್ಚಿಸುವುದು ಹೇಗೆ
ಆರೋಗ್ಯ

ಚಳಿಗಾಲದಲ್ಲಿ ಮುಖದ ಕಾಂತಿಯನ್ನು ಹೆಚ್ಚಿಸುವುದು ಹೇಗೆ

February 1, 2023
ಅವರೇ ಕಾಳಲ್ಲಿ ಅಡಗಿದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಪರೂಪದ ಸತ್ವ
ಆರೋಗ್ಯ

ಅವರೇ ಕಾಳಲ್ಲಿ ಅಡಗಿದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಪರೂಪದ ಸತ್ವ

January 28, 2023
ಬದನೆಕಾಯಿ ತಿಂದ್ರೆ ಬೊಜ್ಜು ಕರಗುತ್ತೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ ಗೊತ್ತಾ?
ಆರೋಗ್ಯ

ಬದನೆಕಾಯಿ ತಿಂದ್ರೆ ಬೊಜ್ಜು ಕರಗುತ್ತೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ ಗೊತ್ತಾ?

January 26, 2023
ಪುಟ್ಟ ಮಕ್ಕಳಲ್ಲಿ ಹೆಚ್ಚುತ್ತಿದೆ ಹೃದಯಾಘಾತ : ಈ ಸಡನ್‌ ಬೆಳವಣಿಗೆಗೆ ಕೊರೋನಾ ಕಾರಣನಾ.. ಹೇಗೆ…
ಆರೋಗ್ಯ

ಪುಟ್ಟ ಮಕ್ಕಳಲ್ಲಿ ಹೆಚ್ಚುತ್ತಿದೆ ಹೃದಯಾಘಾತ : ಈ ಸಡನ್‌ ಬೆಳವಣಿಗೆಗೆ ಕೊರೋನಾ ಕಾರಣನಾ.. ಹೇಗೆ…

January 25, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.