- ಕೈಯಲ್ಲಿ ಬಂದೂಕು ಹಿಡಿದ ನಾಲ್ವರು ಶಂಕಿತ ಉಗ್ರರ ರೇಖಾಚಿತ್ರವನ್ನು ಬಿಡುಗಡೆ
- ಕಳೆದ ಕೆಲ ತಿಂಗಳಿನಿಂದ ಪಹಲ್ಗಾಮ್ನಲ್ಲಿ ಬೀಡು ಬಿಟ್ಟಿದ್ದ ಉಗ್ರರು! (Men are only targeted)
- ಎಲ್ಒಸಿ ಮತ್ತು ಜಮ್ಮು ಮತ್ತು ಕಾಶ್ಮೀರದ ಒಳ ಪ್ರದೇಶಗಳಲ್ಲಿ ಹೈ ಅಲರ್ಟ್
ಜಮ್ಮು- ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿ (Terrorist attack in Pahalgam) ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮೂವರು ಶಂಕಿತ ಉಗ್ರರ ರೇಖಾಚಿತ್ರಗಳನ್ನು (Sketches of suspected terrorists) ಭದ್ರತಾ ಪಡೆ ಇಂದು ಏಪ್ರಿಲ್ 23ರಂದು ಬಿಡುಗಡೆ ಮಾಡಿದೆ .ಈ ದಾಳಿಯಲ್ಲಿ 28 ಪ್ರವಾಸಿಗರು ಹತರಾಗಿದ್ದಾರೆ.
ಭದ್ರತಾ ಪಡೆ ಉಗ್ರರ ವಿರುದ್ಧ ಆಲ್ಔಟ್ (Terrorists) ಕಾರ್ಯಾಚರಣೆಗೆ ಮುಂದಾಗಿದ್ದು, ಸರ್ಕಾರ ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ನಿನ್ನೆಯೇ ಶ್ರೀನಗರ ತಲುಪಿದ್ದು, ತುರ್ತು ಸರಣಿ ಸಭೆಗಳನ್ನು ನಡೆಸಿದ್ದಾರೆ. ಇಂದು ಪಹಲ್ಗಾಮ್ನ ಘಟನಾ ಸ್ಥಳಕ್ಕೂ ತೆರಳಿದ್ದಾರೆ.
ಇನ್ನು ಕನಿಷ್ಠ 5-6 ಭಯೋತ್ಪಾದಕರು, ಮುಖ ಮುಚ್ಚಿಕೊಂಡಿದ್ದು ಕುರ್ತಾ-ಪೈಜಾಮಾಗಳನ್ನು (Kurta-pyjamas) ಧರಿಸಿದ್ದರು, ಕಣಿವೆಯ ಸುತ್ತಲಿನ ದಟ್ಟವಾದ ಪೈನ್ ಅರಣ್ಯದಿಂದ ಬೈಸರನ್ ಹುಲ್ಲುಗಾವಲುಗೆ ಬಂದು AK-47 ಗಳಿಂದ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ದಾಳಿ ನಡೆಸಿರುವ ಭಯೋತ್ಪಾದಕರಲ್ಲಿ ರಾಷ್ಟ್ರೀಯ ಭದ್ರತಾ ಪಡೆ (National Security Force) ಮೂವರು ಶಂಕಿತ ಉಗ್ರರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದೆ. ಈ ಶಂಕಿತ ಉಗ್ರರನ್ನು ಆಸಿಫ್ ಫುಜಿ, ಸುಲೇಮಾನ್ ಶಾ (Asif Fuji, Suleman Shah) ಮತ್ತು ಅಬು ತಲ್ಹಾ (Abu Talha) ಎಂದು ಗುರುತಿಸಲಾಗಿದೆ.

ಉಳಿದ ಉಗ್ರರ ಗುರುತಿಸುವಿಕೆ ಮುಂದುವರೆದಿದೆ.ಈ ಶಂಕಿತ ಉಗ್ರರು ದ ರೆಸಿಟ್ಟೆನ್ಸ್ ಫ್ರಂಟ್ (TRF) ಸದಸ್ಯರು.ಪ್ರಾಥಮಿಕ ವಿಧಿವಿಜ್ಞಾನ ವಿಶ್ಲೇಷಣೆ ಮತ್ತು ಬದುಕುಳಿದವರ ಸಾಕ್ಷ್ಯಗಳ ಪ್ರಕಾರ, ಭಯೋತ್ಪಾದಕರು ಮಿಲಿಟರಿ ದರ್ಜೆಯ (Military grade) ಶಸ್ತ್ರಾಸ್ತ್ರಗಳು ಮತ್ತು ಸುಧಾರಿತ ಸಂವಹನ ಸಾಧನಗಳನ್ನು ಬಳಸಿದ್ದಾರೆ.ಕೊಲ್ಲಲ್ಪಟ್ಟವರಲ್ಲಿ ಇಬ್ಬರು ವಿದೇಶಿಯರು (ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ನೇಪಾಳದವರು) ಮತ್ತು ಇಬ್ಬರು ಸ್ಥಳೀಯ ನಿವಾಸಿಗಳು ಸೇರಿದ್ದಾರೆ. 26 ಜನರಲ್ಲಿ 22 ಜನರನ್ನು ಗುರುತಿಸಲಾಗಿದ್ದು, ಉಳಿದವರನ್ನು ಗುರುತಿಸಲಾಗುತ್ತಿದೆ.
ಈ ಸಂಘಟನೆಯು ಪಾಕಿಸ್ತಾನ (Pakistan) ಮೂಲದ ಲಷ್ಕರ್ ಏ ತೊಯ್ಬಾದ ಅಧೀನದಲ್ಲಿದ್ದು ಭಾರತದ ಕಾಶ್ಮೀರದಲ್ಲಿ (Kashmir, India) ವಿದ್ರೋಹ ಚಟುವಟಿಕೆಗಳನ್ನು ನಡೆಸುತ್ತಿದೆ. ಜಮ್ಮು – ಕಾಶ್ಮೀರದ (Jammu and Kashmir) ವಿಶೇಷ ಸ್ಥಾನಮಾನ ರದ್ದುಗೊಳಿಸಿ ಎರಡು ಪ್ರತ್ಯೇಕ ರಾಜ್ಯಗಳನ್ನಾಗಿ ಮಾಡಿದ ಬಳಿಕ ಟಿಆರ್ಎಫ್ ರಚನೆಯಾಗಿದೆ.ದ ರೆಸಿಸ್ಟನ್ಸ್ ಫ್ರಂಟ್ (TRF) ಉಗ್ರರು ಪಹಲ್ಗಾಮ್ನ ಬೈಸಾರಾನ್ ಹುಲ್ಲುಗಾವಲು ಪ್ರದೇಶದಲ್ಲಿ ಪ್ರವಾಸಿಗರ ಮೇಲೆ ಮಂಗಳವಾರ ಅಪರಾಹ್ನ ದಾಳಿ (Afternoon attack) ನಡೆಸಿದ್ದರು.
ದಾಳಿಗೆ ಮುನ್ನ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಅಡಗುತಾಣಗಳನ್ನು ನಿರ್ಮಿಸಿದ್ದರು. ಭಯೋತ್ಪಾದಕರು ಬಾಡಿ ಕ್ಯಾಮೆರಾಗಳನ್ನು ಧರಿಸಿದ್ದರು. ವಿಶೇಷವಾಗಿ ಹೆಲ್ಮೆಟ್ (Especially the helmet) ಅಳವಡಿಸಿದ ಕ್ಯಾಮೆರಾಗಳನ್ನು ಧರಿಸಿ ಕೃತ್ಯವನ್ನು ಸಂಪೂರ್ಣವಾಗಿ ಚಿತ್ರೀಕರಿಸಿದ ವಿಚಾರ ತನಿಖೆಯಲ್ಲಿ ಗೊತ್ತಾಗಿದೆ.
ಇದನ್ನು ಓದಿ : http://ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹೇಶ್ ಬಾಬುಗೆ ಸಂಕಷ್ಟ: ED ನೋಟಿಸ್!
ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಅತ್ಯಂತ ಕ್ರೂರ ದಾಳಿ ಇದಾಗಿದ್ದು .ಕಾಶ್ಮೀರೇತರರನ್ನೇ (Men are only targeted) ಅದರಲ್ಲೂ ವಿಶೇಷವಾಗಿ ಪುರುಷರನ್ನೇ ಟಾರ್ಗೆಟ್ (Target men) ಮಾಡಿ ಉಗ್ರರು ದಾಳಿ ನಡೆಸಿದ್ದರು. ಕರ್ನಾಟಕದ ಮೂವರು ಸೇರಿ 28 ಜನ ಈ ದಾಳಿಯಲ್ಲಿ ಪ್ರಾಣತೆತ್ತಿದ್ದಾರೆ.