- ಗ್ರಾಮೀಣ ಉದ್ಯೋಗ ಯೋಜನೆಗೆ (MGNREGA replaced to VB G RAM G) ಮರುನಾಮಕರಣ: MGNREGA ಬದಲು VB G RAM G
- 100ರಿಂದ 125 ದಿನಗಳಿಗೆ ಉದ್ಯೋಗ ವಿಸ್ತರಣೆ, ಬಯೋಮೆಟ್ರಿಕ್ಸ್ ಮೂಲಕ ಪಾರದರ್ಶಕತೆ
- 125 ದಿನಗಳ ಉದ್ಯೋಗ ಖಾತರಿ, ವೇಗವಾದ ಪಾವತಿ ಮತ್ತು ವಿಕ್ಷಿತ್ ಭಾರತ್ 2047 ಗುರಿಯೊಂದಿಗೆ ಸರ್ಕಾರದ ಹೊಸ ಮಸೂದೆ
New delhi: ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ (MGNREGA replaced to VB G RAM G) ಉದ್ಯೋಗ ಖಾತರಿ ಯೋಜನೆ (MGNREGA)ಗೆ ಬೃಹತ್ ಬದಲಾವಣೆ ತರಲು ಮುಂದಾಗಿದೆ.

2005ರಲ್ಲಿ ಯುಪಿಎ ಸರ್ಕಾರ ಆರಂಭಿಸಿದ್ದ ಈ ಮಹತ್ವದ ಗ್ರಾಮೀಣ ಉದ್ಯೋಗ ಯೋಜನೆಯನ್ನು ಇದೀಗ ಮರುನಾಮಕರಣ ಮಾಡುವ ಪ್ರಸ್ತಾವವನ್ನು ಸರ್ಕಾರ ಮುಂದಿಟ್ಟಿದೆ.
ಹೊಸ ಮಸೂದೆಯ ಪ್ರಕಾರ, MGNREGA ಯೋಜನೆಯ ಹೆಸರನ್ನು “ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ)” ಎಂದು ಬದಲಿಸಲಾಗುತ್ತದೆ.
ಇದನ್ನು ಸಂಕ್ಷಿಪ್ತವಾಗಿ VB G RAM G ಎಂದು ಕರೆಯಲಾಗುತ್ತದೆ. ಈ ಮಹತ್ವದ ಮಸೂದೆನ್ನು (MGNREGA replaced to VB G RAM G) ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ಮಂಡಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ.
ಈ ಹೊಸ ಯೋಜನೆ, ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ “ವಿಕ್ಷಿತ್ ಭಾರತ್ 2047” ದೃಷ್ಟಿಕೋನಕ್ಕೆ ಅನುಗುಣವಾಗಿ ರೂಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಗ್ರಾಮೀಣ ಭಾರತದ ಆರ್ಥಿಕ, ಸಾಮಾಜಿಕ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವುದು ಇದರ ಮುಖ್ಯ ಗುರಿಯಾಗಿದೆ.
MGNREGA ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಒದಗಿಸುವುದಷ್ಟೇ ಅಲ್ಲದೆ, ದೀರ್ಘಕಾಲಿಕ ಜೀವನೋಪಾಯ ಹಾಗೂ ಗ್ರಾಮೀಣ ಸ್ವಾವಲಂಬನೆಯನ್ನು ನಿರ್ಮಿಸುವ ಉದ್ದೇಶವನ್ನು VB G RAM G ಹೊಂದಿದೆ ಎಂದು ಸರ್ಕಾರ ವಾದಿಸಿದೆ.
ಹೊಸ ಮಸೂದೆಯಲ್ಲಿನ ಪ್ರಮುಖ ಬದಲಾವಣೆ ಎಂದರೆ ಉದ್ಯೋಗ ಖಾತರಿ ದಿನಗಳ ಹೆಚ್ಚಳ.
ಇದುವರೆಗೆ MGNREGA ಅಡಿಯಲ್ಲಿ ವರ್ಷಕ್ಕೆ 100 ದಿನಗಳ ಉದ್ಯೋಗ ಖಾತರಿ ನೀಡಲಾಗುತ್ತಿತ್ತು.
ಆದರೆ VB G RAM G ಯೋಜನೆಯಲ್ಲಿ ಈ ಮಿತಿಯನ್ನು 125 ದಿನಗಳಿಗೆ ಹೆಚ್ಚಿಸಲಾಗುತ್ತದೆ.
ಇದರಿಂದ ಗ್ರಾಮೀಣ ಕಾರ್ಮಿಕರಿಗೆ ಹೆಚ್ಚು ದಿನಗಳ ಉದ್ಯೋಗ ದೊರಕುವ ಸಾಧ್ಯತೆ ಇದೆ.
ಜೊತೆಗೆ ಕೆಲಸ ಪೂರ್ಣಗೊಂಡ ಬಳಿಕ 7 ರಿಂದ 15 ದಿನಗಳೊಳಗೆ ವೇತನ ಪಾವತಿ ಕಡ್ಡಾಯ ಎಂಬ ನಿಯಮವನ್ನು ಹೊಸ ಮಸೂದೆ ಒಳಗೊಂಡಿದೆ.
ನಿಗದಿತ ಅವಧಿಯಲ್ಲಿ ವೇತನ ಪಾವತಿಯಾಗದಿದ್ದರೆ, ಕಾರ್ಮಿಕರಿಗೆ ನಿರುದ್ಯೋಗ ಭತ್ಯೆ ನೀಡುವ ವ್ಯವಸ್ಥೆ ಕೂಡ ಇರಲಿದೆ ಎಂಬುದು ಮಹತ್ವದ ಅಂಶವಾಗಿದೆ.
VB G RAM G ಯೋಜನೆಯಡಿ ಕೈಗೊಳ್ಳುವ ಕೆಲಸಗಳನ್ನು ನಾಲ್ಕು ಪ್ರಮುಖ ವಿಭಾಗಗಳಾಗಿ ವಿಂಗಡಿಸಲಾಗಿದೆ.
ಮೊದಲನೆಯದು ನೀರಿನ ಭದ್ರತೆ – ಕೆರೆ, ಹೊಂಡ, ಜಲಾಶಯ, ಮಳೆನೀರು ಸಂಗ್ರಹಣೆ ಮುಂತಾದ ಯೋಜನೆಗಳು ಇದರಲ್ಲಿ ಸೇರಿವೆ.
ಎರಡನೆಯದು ಗ್ರಾಮೀಣ ಮೂಲಸೌಕರ್ಯ – ರಸ್ತೆ, ಸೇತುವೆ, ಸಾರ್ವಜನಿಕ ಕಟ್ಟಡಗಳು ಮೊದಲಾದವು.
ಮೂರನೆಯದು ಜೀವನೋಪಾಯ ಮೂಲಸೌಕರ್ಯ – ಕೃಷಿ ಆಧಾರಿತ ಕೆಲಸಗಳು, ಸಣ್ಣ ಉದ್ಯಮಗಳಿಗೆ ಸಂಬಂಧಿಸಿದ ಕಾಮಗಾರಿಗಳು.
ನಾಲ್ಕನೆಯ ವಿಭಾಗ ವಿಪತ್ತು ನಿರ್ವಹಣೆ – ಪ್ರವಾಹ, ಬರ, ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ತುರ್ತು ಕೆಲಸಗಳನ್ನು ಕೈಗೊಳ್ಳುವ ವ್ಯವಸ್ಥೆ.
ಈ ವರ್ಗೀಕರಣದ ಮೂಲಕ ಯೋಜನೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶ ಸರ್ಕಾರದ್ದಾಗಿದೆ.
ಯೋಜನೆಯಲ್ಲಿ ಪಾರದರ್ಶಕತೆ ಹಾಗೂ ದುರುಪಯೋಗ ತಡೆಗಟ್ಟಲು ಬಯೋಮೆಟ್ರಿಕ್ಸ್ ಮತ್ತು ಜಿಯೋಟ್ಯಾಗಿಂಗ್ ತಂತ್ರಜ್ಞಾನ ಬಳಕೆಗೆ ಆದ್ಯತೆ ನೀಡಲಾಗಿದೆ.
ಕೃಷಿ ಋತುವಿನಲ್ಲಿ ಕೃಷಿಕರು ಯೋಜನೆಯಡಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ವ್ಯವಸ್ಥೆ ಸಹಕಾರಿಯಾಗಲಿದೆ.
ವೆಚ್ಚ ಹಂಚಿಕೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ಹಣಕಾಸು ಒದಗಿಸಲಿವೆ.
ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳಿಗೆ 90:10 ಅನುಪಾತ, ಕೇಂದ್ರಾಡಳಿತ ಪ್ರದೇಶಗಳಿಗೆ 100% ಕೇಂದ್ರ ನೆರವು ನೀಡಲಾಗುತ್ತದೆ.
ಯೋಜನೆಗಾಗಿ ವಾರ್ಷಿಕವಾಗಿ 1.51 ಲಕ್ಷ ಕೋಟಿ ರೂ. ವೆಚ್ಚ ಅಂದಾಜಿಸಲಾಗಿದ್ದು, ಇದರಲ್ಲಿ ಕೇಂದ್ರ ಸರ್ಕಾರವೇ 95,692 ಕೋಟಿ ರೂ. ಒದಗಿಸಲಿದೆ.
ಈ ಮೂಲಕ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಹೊಸ ರೂಪ, ಹೊಸ ಗುರಿ ಮತ್ತು ಹೊಸ ದಿಕ್ಕು ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.