ಬೆಂಗಳೂರು, ಜು. 20: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕಸರತ್ತು ನಡೆಯುತ್ತಿರುವ ಬೆನ್ನಲ್ಲೇ, ಸಿಎಂ ಸ್ಥಾನದ ಆಕಾಂಕ್ಷಿ ಎನ್ನಲಾಗಿರುವ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಅಶ್ಲೀಲ ಸಿಡಿ ತಯಾರಿಕೆ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಉದ್ಯಮಿ ಆಲಂ ಪಾಷ, ಸಚಿವ ಮರುಗೇಶ್ ನಿರಾಣಿ ಒಬ್ಬ ಸಿಡಿ ಬಾಬಾ. ಅವರ ಬಳಿ 500 ಸಿಡಿಗಳಿವೆ ಎಂದು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಮುರುಗೇಶ್ ನಿರಾಣಿ ಬಳಿ ಸಾಕಷ್ಟು ರಾಜಕಾರಣಿಗಳು, ಪ್ರಮುಖ ನಾಯಕರ ಆಶ್ಲೀಲ ಸಿಡಿಗಳು ಸಿಡಿಗಳು ಇವೆ. ಅವಗಳನ್ನು ಇಟ್ಟುಕೊಂಡು ನಿರಾಣಿ ಬ್ಲ್ಯಾಕ್ ಮೇಲ್ ಮಾಡುತ್ತಾ ತಮ್ಮ ಕೆಲಸ ಸಾಧಿಸುತ್ತಿದ್ದಾರೆ ಎಂದು ಹೇಳಿದ್ದಾರೆ.ರಾಜ್ಯದ ಮಂತ್ರಿಗಳ ಸಿಡಿ ಇದೆ ನಿರಾಣಿಗೆ ಭಯ ಪಟ್ಟು ಕೋರ್ಟ್ ನಿಂದ ಸ್ಟೇ ತರುತ್ತಿದ್ದಾರೆ ಎಂದು ಆರೋಪಿಸಿದರು.
ಸಚಿವರ ಬಳಿ ಇರುವ ಸಿಡಿಗಳನ್ನು ಮಾಧ್ಯಮಗಳು ಕಂಡು ಹಿಡಿಯಲೇಬೇಕು. ನಾವು ಕಾನೂನು ಪ್ರಕಾರ ನಿರಾಣಿ ವಿರುದ್ದ ಹೋರಾಟ ಮಾಡುತ್ತೇವೆ ಎಂದಿದ್ದಾರೆ. ಉದ್ಯಮಿ ಆಲಂ ಪಾಷ ಅವರು ಈ ಹಿಂದೆಯೂ ಸಚಿವ ನಿರಾಣಿ ವಿರುದ್ಧ ಆರೋಪ ಮಾಡಿದ್ದರು. ಒಟ್ಟಾರೆ ಮುಖ್ಯಮಂತ್ರಿ ಹುದ್ದೆಗೆ ನಿರಾಣಿ ಯತ್ನಿಸುತ್ತಿದ್ದಾರೆ ಎಂಬ ಚರ್ಚೆ ಬೆನ್ನಲ್ಲೇ ಇದೀಗ ಆಲಂ ಪಾಷ ಸಚಿವ ನಿರಾಣಿ ವಿರುದ್ಧ ಮಾಡಿರುವ ಆರೋಪ ಮಹತ್ವ ಪಡೆದುಕೊಂಡಿದೆ.