- ವಾಣಿಜ್ಯ ನಗರಿ ಮುಂಬೈಗೆ ವರುಣಾಘಾತ
- ಭಾರೀ ಮಳೆಯಿಂದಾಗಿ ಅಕ್ಷರಶಃ ಸ್ತಬ್ಧವಾದ ಮುಂಬೈ ನಗರ
- ಇಂದು ಆರೆಂಜ್ ಅಲರ್ಟ್ ಜಾರಿ ಮಾಡಿದ ಹವಾಮಾನ ಇಲಾಖೆ
Mumbai: ಕಳೆದೆರಡು ದಿನಗಳಿಂದ ಎಡಬಿಡದೆ ಅಬ್ಬರಿಸುತ್ತಿರುವ ಮುಂಗಾರು ಮಳೆ ಹಲವೆಡೆ ಹಾನಿ ಮಾಡಿದೆ.
ಸೋಮವಾರ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಮುಂಬೈನ ತಗ್ಗು ಪ್ರದೇಶಗಳು ಮುಳುಗಿ ಜನ ಜೀವನ ಅಸ್ತವ್ಯಸ್ತ ಉಂಟಾಗಿದೆ.
ಇನ್ನು ನಗರದ ಕೆಲವು ಭಾಗಗಳಲ್ಲಿ ವಾಹನ ಸಂಚಾರ ಕೂಡ ಬಂದ್ ಆಗಿದ್ದು ಅಂಧೇರಿ ರೈಲು ಸುರಂಗ ಮಾರ್ಗದಲ್ಲಿ ಮಳೆ ನೀರು ನುಗ್ಗಿದ್ದರಿಂದ ಸಂಚಾರ ಕೂಡ ಸ್ಥಗಿತವಾಗಿದೆ.
ಮುಂಬೈ ನಗರ ಜುಲೈ ತಿಂಗಳ ಆರಂಭದಲ್ಲಿ ಸಾಧಾರಣ ಮಳೆ ಕಂಡಿತ್ತು. ಬಳಿಕ ಕೆಲವು ದಿನಗಳಿಂದ ತೀವ್ರವಾದ ಬಿಸಿಲು ಮತ್ತು ಸೆಕೆಯ ವಾತಾವರಣ ಇತ್ತು.
ಆದರೆ, ಭಾನುವಾರದಿಂದ ಶುರುವಾದ ಮಳೆ ಸೋಮವಾರ ರಾತ್ರಿಯಿಡೀ ಸುರಿದಿದ್ದರಿಂದ ಮಹಾನಗರವು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಭಾರಿ ಮಳೆಯ ಕಾರಣದಿಂದಾಗಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಏರ್ಪೋರ್ಟ್ನಲ್ಲಿ ತೊಂದರೆ ಉಂಟಾಗಿದ್ದು
ಕೇರಳದ ಕೊಚ್ಚಿಯಿಂದ ಮುಂಬೈ ಏರ್ಪೋರ್ಟ್ಗೆ ಬಂದು ಲ್ಯಾಂಡಿಂಗ್ ಆಗುತ್ತಲಿದ್ದ ಏರ್ ಇಂಡಿಯಾ ವಿಮಾನವೊಂದು ರನ್ ವೇಯಿಂದ ಸ್ಕಿಡ್ ಆಗಿದ್ದು ಲ್ಯಾಂಡಿಂಗ್ ಮಾಡುವಾಗ ಮಳೆಯ ಕಾರಣದಿಂದಾಗಿ ವಿಮಾನ ರನ್ ವೇಯಿಂದ ಸ್ಕಿಡ್ ಆಗಿದೆ.

ಅದೃಷ್ಟವಶಾತ್ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ.
ಈ ಘಟನೆ ಸಂಭವಿಸಿದ ತಕ್ಷಣವೇ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ರೆಸ್ಪಾನ್ಸ್ ಆ್ಯಕ್ಟೀವ್ ಮಾಡಲಾಗಿತ್ತು.
ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದು ಜಾಗರೂಕತೆಯಿಂದ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ. ಆದರೆ ವಿಮಾನದ ಇಂಜಿನ್ ಭಾಗಕ್ಕೆ ಸ್ಪಲ್ಪ ಡ್ಯಾಮೇಜ್ ಆಗಿದೆ ಎಂದು ಹೇಳಲಾಗುತ್ತಿದೆ.
ಸ್ಪೈಸ್ ಜೆಟ್,ಇಂಡಿಗೋ ಸೇರಿದಂತೆ ಹಲವು ಏರ್ ಲೈನ್ಸ್ ಗಳು ವಿಮಾನ ಪ್ರಯಾಣಿಕರಿಗೆ ಕೆಲವೊಂದು ಸಲಹೆಗಳನ್ನು ಪಾಲಿಸಲು ಸೂಚನೆ ನೀಡಿವೆ.
ಭಾರಿ ಮಳೆಯಿಂದಾಗಿ ಏರ್ಪೋರ್ಟ್ಗೆ ಹೋಗುವ ಬಹಳಷ್ಟು ರಸ್ತೆಗಳಲ್ಲಿ ನಿಧಾನಗತಿಯ ಟ್ರಾಫಿಕ್ ಇರುವ ಕಾರಣದಿಂದಾಗಿ ನೀವು ವಿಮಾನದಲ್ಲಿ ಪ್ರಯಾಣ ಮಾಡುವವರಾಗಿದ್ದರೇ, ಮುಂಚಿತವಾಗಿಯೇ ಪ್ಲ್ಯಾನ್ ಮಾಡಿಕೊಂಡು ಸ್ಪಲ್ಪ ಬೇಗ ಮನೆಯಿಂದ ಹೊರಟು ಬನ್ನಿ.
ಮನೆಯಿಂದ ಹೊರಡುವ ಮುನ್ನವೇ ನಿಮ್ಮ ವಿಮಾನದ ಟೇಕಾಫ್ ಸಮಯವನ್ನು ಹಾಗೂ ವೆಬ್ಸೈಟ್, ಕಂಪನಿಯ ಆ್ಯಪ್ನಲ್ಲಿ ಪರಿಶೀಲಿಸಿ ಕೊಂಡು ಏರ್ಪೋರ್ಟ್ಗೆ ಬನ್ನಿ.
ಇಲ್ಲವಾದಲ್ಲಿ ಮಳೆ ನಿಮ್ಮ ಪ್ರಯಾಣದ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಕೆ ನೀಡಿವೆ.
ಈ ವಾರದ ಕೊನೆಯವರೆಗೂ ಮುಂಬೈನಲ್ಲಿ ಧಾರಾಕಾರವಾಗಿ ಮಳೆ ಬೀಳುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದ್ದು ನಾಳೆ ಮುಂಜಾನೆ ಸಮಯದಲ್ಲಿ ಮುಂಬೈನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆಯ ಹೊತ್ತಿಗೆ ಗುಡುಗು ಮಿಂಚು ಸಹಿತ ಮಳೆಯಾಗಲಿದೆ.
ಜುಲೈ 23 ರಿಂದ 26ರಂದು ವರುಣಾರ್ಭಟ ವಾಡಿಕೆಗಿಂತ ಹೆಚ್ಚು ಇರಲಿದೆ . ಈಗಾಗಲೇ ಮುಂಬೈನ ಹಾಗೂ ನಗರದ ಸುತ್ತಮುತ್ತಲ ಜನರು ಸಮುದ್ರದ ತೀರಕ್ಕೆ ಹೋಗದಂತೆ ಹಾಗೂ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಐಎಂಡಿ ಸಲಹೆ ನೀಡಿದೆ.
ಅನಗತ್ಯ ಸಂಚಾರ ಕೈಗೊಳ್ಳಬೇಡಿ ಸಾಧ್ಯವಾದಷ್ಟು ಮನೆಯಲ್ಲಿಯೇ ಇರಿ ಎಂದಿರುವ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮುಂಬೈನ ಬೊರಿವಿಲಿ,ಗೋರೆಗಾಂವ್, ಥಾಣೆ, ಅಂಧೇರಿ- ಘಟಕೋಪರ, ಚೆಂಬುರ್ ,ಮಲಾಡ್, ಖಾಂಡಿವಲಿ, ಬಿಕೆಸಿ, ಕುರ್ಲಾ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.
ಇನ್ನು ಭಾರತೀಯ ಹವಾಮಾನ ಇಲಾಖೆಯು ಮುಂಬೈ ನಗರ ಹಾಗೂರು ರಾಯಘಡ ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ಆರೇಂಜ್ ಆಲರ್ಟ್ ನೀಡಿದ್ದು
ಮುಂದಿನ 24 ಗಂಟೆಗಳ ಕಾಲ ಮುಂಬೈ ಮತ್ತು ಇತರ ಜಿಲ್ಲೆಗಳಿಗೆ ಹೆಚ್ಚಿನ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಯೆಲ್ಲೋ ಆಲರ್ಟ್ ನೀಡಿದೆ.
ಮುಂಬೈ ಹಾಗೂ ಕೊಂಕಣ್ ಪ್ರದೇಶದಲ್ಲಿ ಮುಂದಿನ 24 ಗಂಟೆಗಳ ಕಾಲ ಭಾರೀ ಮಳೆ ಮುಂದುವರಿಯಲಿದೆ ಎಂದು ಐಎಂಡಿ ವರದಿ ಮಾಡಿದೆ.