- ಮಾರ್ಚ್ನಲ್ಲಿ ಐದು ಪಾಲಿಕೆ ಹಾಗೂ ಜಿಪಂ-ತಾಪಂ ಚುನಾವಣೆ ನಡೆಯುವ ಸಾಧ್ಯತೆ ಇದೆ
- ಸಿಎಂ ಸಿದ್ದರಾಮಯ್ಯಅವರಿಂದ ಸಿದ್ಧತೆ ಆರಂಭಕ್ಕೆ ಸೂಚನೆ
- ಪ್ರಚಾರಕ್ಕಿಂತ ಸೇವೆ ಮತ್ತು ಫಲಿತಾಂಶ ಜನರ ಮುಂದಿರಲಿ ಎಂದ ಸಿಎಂ
Bengaluru: ರಾಜ್ಯದ ರಾಜಕೀಯ ವಾತಾವರಣ ಮತ್ತೊಮ್ಮೆ ಚುರುಕುಗೊಳ್ಳುವ ಎಲ್ಲಾ ಸೂಚನೆಗಳು ಕಾಣಿಸುತ್ತಿವೆ. (Municipal elections in march.)
ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಗ್ರೇಟರ್ ಬೆಂಗಳೂರು (Greater Bangalore) ವ್ಯಾಪ್ತಿಯ ಐದು ಹೊಸ ಪಾಲಿಕೆಗಳ ಚುನಾವಣೆಗಳು, ಜೊತೆಗೆ ಜಿಲ್ಲಾ ಪಂಚಾಯತ್ (ಜಿಪಂ) ಮತ್ತು ತಾಲೂಕು ಪಂಚಾಯತ್ (ತಾಪಂ) ಚುನಾವಣೆಗಳು ನಡೆಯುವ ಸಾಧ್ಯತೆ ಬಲವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಈಗಾಗಲೇ ಸಚಿವರಿಗೆ ಚುನಾವಣಾ ಸಿದ್ಧತೆಗಳ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಸರ್ಕಾರದ ವಲಯಗಳಿಂದ ಲಭ್ಯವಾಗಿದೆ.

ಸೋಮವಾರ ರಾತ್ರಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಸಚಿವರಿಗಾಗಿ ಆಯೋಜಿಸಿದ್ದ ಔತಣ ಸಭೆಯಲ್ಲೇ ಈ ಮಹತ್ವದ ಸೂಚನೆ ನೀಡಲಾಗಿದೆ.
ಆ ಸಂದರ್ಭದಲ್ಲಿ ಅವರು ಮುಂಬರುವ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳುವಂತೆ ಸಚಿವರಿಗೆ ಕಿವಿಮಾತು ನೀಡಿದರೆಂದು ಮೂಲಗಳು ಹೇಳುತ್ತವೆ.(Municipal elections in march.)
ಇನ್ನು ಈ ಬಾರಿ ಚುನಾವಣೆಗಳು ಕೇವಲ ಒಂದು ರಾಜಕೀಯ ಪ್ರಕ್ರಿಯೆಯಲ್ಲ, ಸರ್ಕಾರದ ಜನಪರ ನಿಲುವು ಮತ್ತು ನಮ್ಮ ಆಡಳಿತದ ವಿಶ್ವಾಸಾರ್ಹತೆಯನ್ನು ತೋರಿಸುವ ಅವಕಾಶವೂ ಆಗಿದೆ.
ಆದ್ದರಿಂದ ಎಲ್ಲ ಸಚಿವರು ತಮ್ಮ ಇಲಾಖೆಯ ಸಾಧನೆ ಮತ್ತು ಗ್ಯಾರಂಟಿ (Guarantee) ಯೋಜನೆಗಳ ಫಲಾನುಭವಿಗಳನ್ನು ನೇರವಾಗಿ ಜನರ ಬಳಿ ತಲುಪಿಸುವ ಕೆಲಸಕ್ಕೆ ತೊಡಗಬೇಕು ಎಂದು ಸಿಎಂ ತಿಳಿಸಿದ್ದಾರೆ ಎನ್ನಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳು ನಡೆಯದೇ ಬಾಕಿಯಾಗಿದ್ದವು. ಹಾಗೆಯೇ, ಗ್ರೇಟರ್ ಬೆಂಗಳೂರು ಪ್ರದೇಶದ ಪುನರ್ರಚನೆ ಹಿನ್ನೆಲೆಯಲ್ಲಿ ಪಾಲಿಕೆ ಚುನಾವಣೆಯೂ ಅನೇಕ ಬಾರಿ ಮುಂದೂಡಲ್ಪಟ್ಟಿತ್ತು.
ಇದೀಗ ನಗರವನ್ನು ಐದು ಹೊಸ ಆಡಳಿತ ಘಟಕಗಳಾಗಿ ವಿಭಜಿಸಿ, ಪ್ರತ್ಯೇಕ ಪಾಲಿಕೆಗಳನ್ನು ರಚಿಸಿರುವ ಹಿನ್ನೆಲೆಯಲ್ಲಿ, ಪ್ರತಿ ಪಾಲಿಕೆಯಿಗೂ ಪ್ರತ್ಯೇಕ ಚುನಾವಣೆ ನಡೆಸುವ ತಯಾರಿ ನಡೆಯುತ್ತಿದೆ.
ಈ ಹೊಸ ವ್ಯವಸ್ಥೆಯಲ್ಲಿ ಪ್ರತಿ ಪಾಲಿಕೆಯು ತನ್ನದೇ ಆದ ಸ್ವಾಯತ್ತ ಅಧಿಕಾರವನ್ನು ಹೊಂದಿದ್ದು, ಸ್ಥಳೀಯ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ನಿರೀಕ್ಷೆಯಿದೆ.
ಇನ್ನು ಸಿದ್ಧರಾಮಯ್ಯ ಅವರು ಸಭೆಯಲ್ಲಿ ಸಚಿವರಿಗೆ, ಈ ಐದು ಪಾಲಿಕೆಗಳನ್ನೂ ಗೆಲ್ಲುವುದು ಸರ್ಕಾರದ ಗೌರವದ ವಿಷಯವಾಗಿದೆ. ಈಗಿನಿಂದಲೇ ಬೂತ್ ಮಟ್ಟದ ಸಿದ್ಧತೆ ಆರಂಭಿಸಬೇಕು.
ಪಕ್ಷದ ಕಾರ್ಯಕರ್ತರು, ಜನಪ್ರತಿನಿಧಿಗಳು, ಮತ್ತು ಸ್ಥಳೀಯ ನಾಯಕರ ನಡುವೆ ಸಮನ್ವಯ ಬೆಳೆಸಬೇಕು,ಎಂದು ಸೂಚಿಸಿದ್ದಾರೆ.
ಐದು ಹೊಸ ಪಾಲಿಕೆಗಳಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಪ್ರಾಬಲ್ಯ ಕಾಯ್ದುಕೊಳ್ಳಲು ಪ್ರಬಲ ಯತ್ನ ನಡೆಸುತ್ತಿದೆ.
ಬಿಜೆಪಿ (BJP) ಮತ್ತು ಜೆಡಿಎಸ್ (JDS) ಪಕ್ಷಗಳೂ ಈ ಚುನಾವಣೆಗಳನ್ನು ಮುಂದಿನ ಅಸೆಂಬ್ಲಿ ಚುನಾವಣೆಗಳ ಮುನ್ನೋಟವಾಗಿ ನೋಡುತ್ತಿವೆ. ಹೀಗಾಗಿ ಸ್ಪರ್ಧೆ ಬಿಗಿಯಾಗುವ ಸಾಧ್ಯತೆ ಇದೆ.
ಸಿಎಂ ಅವರು ಸಚಿವರಿಗೆ ಮತ್ತೊಂದು ಪ್ರಮುಖ ಸಂದೇಶ ನೀಡಿದ್ದು, ಪ್ರಚಾರಕ್ಕಿಂತಲೂ ಜನರೊಂದಿಗೆ ನೇರ ಸಂಪರ್ಕ ಹೆಚ್ಚಿಸುವತ್ತ ಗಮನಹರಿಸಬೇಕೆಂದು.
ಗ್ಯಾರಂಟಿ ಯೋಜನೆಗಳು – ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ, ಯುವ ನಿದಿ ಮುಂತಾದವುಗಳ ಫಲಾನುಭವಿಗಳನ್ನು ಜನತೆಗೆ ನೆನಪಿಸಬೇಕು.
ಈ ಯೋಜನೆಗಳ ಮೂಲಕ ಸರ್ಕಾರ ಜನರಿಗೆ ನೀಡಿದ ಭರವಸೆಯನ್ನು ನೇರವಾಗಿ ತಲುಪಿಸುತ್ತಿದೆ ಎಂಬ ನಂಬಿಕೆ ಮೂಡಬೇಕು.
ನಾವು ಮಾಡಿದ ಕೆಲಸಗಳೆಲ್ಲಾ ಜನರಿಗೆ ತಿಳಿದರೆ ಗೆಲುವು ನಮ್ಮದೇ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಅವರು ಪ್ರಚಾರಕ್ಕಿಂತಲೂ ಕಾರ್ಯನಿರ್ವಹಣೆಯ ಸತ್ಯಾಸತ್ಯತೆಯನ್ನು ಜನರ ಮುಂದೆ ಪ್ರದರ್ಶಿಸುವುದು ಮುಖ್ಯ ಎಂದು ಬಿಂಬಿಸಿದ್ದಾರೆ.