ಬೆಂಗಳೂರು,ಜೂ.26: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ.
ನಿನ್ನೆ ಬೆಳಗ್ಗೆ ರೇಖಾ ಅವರ ಸಹಚರರಾದ ಪೀಟರ್ ಮತ್ತು ಸೂರ್ಯನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದರು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೆಪನ್, ಅಜಯ್ ಹಾಗೂ ಪುರುಷೋತ್ತಮ್ ಎಂಬುವವರನ್ನು ಬಂಧಿಸಿದ್ದು, ವಿಚಾರ ಮುಂದುವರಿದಿದೆ.
ಈ ನಡುವೆ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಅವರ ಹತ್ಯೆಗೆ ಕುಟುಂಬಸ್ಥರಿಂದಲೇ ಪ್ಲ್ಯಾನ್ ನಡೆದಿರೋದು ತನಿಖೆಯಿಂದ ಬೆಳಕಿಗೆ ಬಂದಿದೆ. ಮೂರು ವರ್ಷಗಳ ಹಿಂದೆ ಕೊಲೆಯಾದ ಕದಿರೇಶ್ ಅಕ್ಕ ಮಾಲಾರಿಂದ ರೇಖಾ ಹತ್ಯೆಗೆ 25 ಲಕ್ಷ ಹಣಕ್ಕೆ ಸುಪಾರಿ ಕೊಟ್ಟಿದ್ದರು ಎಂಬ ಆಘಾತಕಾರಿ ಅಂಶ ತನಿಖೆಯಿಂದ ತಿಳಿದುಬಂದಿದೆ.