- ಗಡಿಯಲ್ಲಿ ಅಪ್ರಚೋದಿತ ದಾಳಿ ಮುಂದುವರಿಸಿದ ಪಾಕ್;
- ಪಾಕಿಸ್ತಾನದ ಶೆಲ್ ದಾಳಿಯಲ್ಲಿ ಯೋಧ ಹುತಾತ್ಮ
- ಭಾರತ ಸೇನೆಯಿಂದ ತಕ್ಕ ತಿರುಗೇಟು
New delhi: ಪಾಕಿಸ್ತಾನ ಸೇನೆ ಜಮ್ಮು ಮತ್ತು ಕಾಶ್ಮೀರದ (Jammu and Kashmir) ನಾಲ್ಕು ವಲಯಗಳಲ್ಲಿರುವ ಗಡಿ ನಿಯಂತ್ರಣ (Naik Dinesh Kumar martyred) ರೇಖೆಯುದ್ದಕ್ಕೂ ಶೆಲ್ ದಾಳಿ ಮುಂದುವರಿಸಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆ (Operation Vermilion) ಭಾಗವಾಗಿ ಭಾರತ ನಡೆಸಿದ ಕ್ಷಿಪಣಿ ದಾಳಿಯ ಬೆನ್ನಲ್ಲೇ, ಪಾಕ್ ಸೇನೆ ಜಮ್ಮು ಮತ್ತು ಕಾಶ್ಮೀರದ ಗ್ರಾಮಗಳನ್ನು ಗುರಿಯಾಗಿಸಿ ಫಿರಂಗಿ (Aim the cannon) , ಶೆಲ್ ದಾಳಿ ನಡೆಸಿತ್ತು.
ಬುಧವಾರಕ್ಕೆ ಹೋಲಿಸಿದರೆ, ಇಂದು ಗಡಿಯಾಚಿನ ಗುಂಡಿನ ದಾಳಿಯ ತೀವ್ರತೆ ಕಡಿಮೆಯಾಗಿದ್ದು (Intensity is reduced) , ನಾಲ್ಕು ವಲಯಗಳಲ್ಲಿ ಮಾತ್ರ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಪಾಕಿಸ್ತಾನ ಸೇನೆಯು (Pakistan Army) ಮೇ 7 ರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ, ಬಾರಾಮುಲ್ಲಾ, ಉರಿ ಮತ್ತು ಅಖ್ನೂರ್ (Uri and Akhnoor) ವಲಯಗಳಲ್ಲಿನ ಎಲ್ಒಸಿಯುದ್ದಕ್ಕೂ ಲಘು ಶಸ್ತ್ರಾಸ್ತ್ರಗಳು ಮತ್ತು ಫಿರಂಗಿಗಳನ್ನು ಬಳಸಿ ಅಪ್ರಚೋದಿತ ದಾಳಿ ನಡೆಸಿದೆ. ಭಾರತೀಯ ಸೇನೆ, ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸಿದೆ ಎಂದು ಜಮ್ಮುವಿನಲ್ಲಿರುವ ರಕ್ಷಣಾ ಇಲಾಖೆಯ (Defense Department in Jammu) ವಕ್ತಾರರು ಮಾಹಿತಿ ನೀಡಿದ್ದಾರೆ.
ಬಾರಾಮುಲ್ಲಾದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನಿ ಪಡೆಗಳು ಬುಧವಾರ ನಡೆಸಿದ ಭಾರೀ ಶೆಲ್ ದಾಳಿಯಲ್ಲಿ ಭಾರತೀಯ ಸೇನಾ (Indian Army) ಯೋಧರೊಬ್ಬರು ಹುತಾತ್ಮರಾಗಿದ್ದಾರೆ.ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ (WKC) ಪ್ರಕಾರ, 5 ಫೀಲ್ಡ್ ರೆಜಿಮೆಂಟ್ನ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಅವರು ಪಾಕಿಸ್ತಾನ ಸೇನೆಯ ಶೆಲ್ (Army shell) ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ್ದಾರೆ.

ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಅಡಗುತಾಣಗಳ ಮೇಲೆ ಭಾರತ ಕ್ಷಿಪಣಿ ದಾಳಿ (India missile attack) ನಡೆಸಿದ ಬೆನ್ನಲ್ಲೇ ಗಡಿಯಲ್ಲಿ ಪಾಕ್ ಸೇನೆ ತೀವ್ರ ಅಪ್ರಚೋದಿತ ದಾಳಿ ಮಾಡಿತ್ತು.
ಹರಿಯಾಣದ ಪಲ್ವಾಲ್ ಜಿಲ್ಲೆಯ ಸೈನಿಕ ದಿನೇಶ್ ಹುತಾತ್ಮರಾದವರು (Soldier Dinesh was martyred) . ದಿನೇಶ್ ಅವರ ಸಾವಿನ ವಿಚಾರ ತಿಳಿದು ಅವರ ಮನೆಯಲ್ಲಿ ಶೋಕ ಆವರಿಸಿದ್ದು, ಕುಟುಂಬದ ಆಕ್ರಂದನ (Family violence) ಮುಗಿಲು ಮುಟ್ಟಿದೆ. ಇಂದು ಹುತಾತ್ಮ ದಿನೇಶ್ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ತರಲಾಗುತ್ತಿದೆ. ಅಲ್ಲಿಯೇ ಸರ್ಕಾರಿ ಸಕಲ (Govt) ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.ದಿನೇಶ್ ಅವರು ಬಾರಾಮುಲ್ಲಾದಲ್ಲಿ ಸೇವೆಗೆ ನಿಯೋಜನೆಗೊಂಡಿದ್ದರು.
ಪಾಕಿಸ್ತಾನ ಪಡೆಗಳಿಂದ (Pakistan forces) ಗುಂಡಿನ ದಾಳಿ ಆರಂಭವಾದ ತಕ್ಷಣವೇ ದಿನೇಶ್ ಹಾಗೂ ನಮ್ಮ ಭದ್ರತಾ ಪಡೆ (Our security forces) ಪ್ರತಿದಾಳಿಯನ್ನು ಆರಂಭಿಸಿದ್ದರು. ಈ ವೇಳೆ ಪಾಕಿಸ್ತಾನದಿಂದ ಹಾರಿಸಲಾದ ಮೋರ್ಟಾರ್ ಗುಂಡು ತಗುಲಿ ದಿನೇಶ್ ಜೊತೆ ಇತರ 5 ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೇ ದಿನೇಶ್ ಹುತಾತ್ಮರಾಗಿದ್ದಾರೆ.
ಇದನ್ನು ಓದಿ : http://ಅಪರೇಷನ್ ಸಿಂಧೂರ ಮೂಲಕ ಉಗ್ರರ ಅಂತ್ಯ ಆರಂಭ: ಸಂತ್ರಸ್ತರ ಕಣ್ಣಲ್ಲಿ ಆನಂದ ಭಾಷ್ಪ
ಇನ್ನು ಜಮ್ಮು ಮತ್ತು ಕಾಶ್ಮೀರದ ಎಲ್ಒಸಿ ಉದ್ದಕ್ಕೂ (LoC in Jammu and Kashmir) ಇರುವ ಹಳ್ಳಿಗಳನ್ನು ಗುರಿಯಾಗಿಸಿಕೊಂಡ ಪಾಕಿಸ್ತಾನ (Naik Dinesh Kumar martyred) ಸೇನೆ ಬುಧವಾರ ನಡೆಸಿರುವ ಫಿರಂಗಿ ಮತ್ತು ಮೋರ್ಟಾರ್ ಶೆಲ್ ದಾಳಿಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ ಮತ್ತು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.