Yadgiri: ಡಬಲ್ಎಂಜಿನ್ ಸರ್ಕಾರ ಇದ್ದರೆ ಎಲ್ಲ ಕ್ಷೇತ್ರಗಳಲ್ಲಿಯೂ ಡಬಲ್ ಅಭಿವೃದ್ದಿಯಾಗುತ್ತದೆ. ಅದರ ಜೊತೆಗೆ ಎಲ್ಲ ವರ್ಗದ ಜನರ ಕಲ್ಯಾಣವಾಗುತ್ತದೆ. ದೇಶವನ್ನು ಆಳಿದ ಹಿಂದಿನ ಸರ್ಕಾರಗಳು (Narendra modi yadgiri speech) ಮತಬ್ಯಾಂಕ್ ಆಧಾರಿತ ರಾಜಕೀಯ ಮಾಡಿದವೇ ಹೊರತು,
ಅಭಿವೃದ್ದಿ ರಾಜಕೀಯ ಮಾಡಲಿಲ್ಲ. ಆದರೆ ನಮ್ಮ ಸರ್ಕಾರ ವಿಕಾಸಕ್ಕೆ ಪ್ರಾಧಾನ್ಯತೆ ನೀಡುತ್ತಿದೆ ಎಂದು ಪ್ರಧಾನಿ ಮೋದಿ(Narendra modi) ಹೇಳಿದ್ದಾರೆ.
ಯಾದಗಿರಿ(Yadgiri) ಜಿಲ್ಲೆಯ ಕೊಡೆಕಲ್ನಲ್ಲಿ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯನ್ನು ಪುನಶ್ಚೇತನಗೊಳಿಸಿ 4.5 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು (Narendra modi yadgiri speech) ಕೈಗೊಂಡಿರುವ 4,699 ಕೋಟಿ ರೂ.
ಮೊತ್ತದ ಆಧುನೀಕರಣ ಯೋಜನೆಯನ್ನು, ಜಲ್ ಜೀವನ್ ಮಿಷನ್ ಅಡಿ 15.84 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರು ಯೋಜನೆಯ
ಕಾಮಗಾರಿಗೆ ಚಾಲನೆ ಮತ್ತು ಸೂರತ್-ಚೆನ್ನೈ(Surat-chennai) ಎಕ್ಸ್ಪ್ರೆಸ್ವೇಗೆ ಶಂಕುಸ್ಥಾಪನೆ ನೆರವೇರಿಸಿ ಪ್ರಧಾನಿ ಮೋದಿ ಮಾತನಾಡಿದರು.
ಇದನ್ನೂ ಓದಿ: https://vijayatimes.com/siddaramaiah-criticized-about-modi/
ರೈತರ ಅಭಿವೃದ್ದಿಗಾಗಿಯೇ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆ(PM Kisan scheme) ಜಾರಿಗೆ ತಂದಿದೆ. ಕೇಂದ್ರ ಸರ್ಕಾರ 6 ಸಾವಿರ ರೂ.ಗಳನ್ನು ನೀಡಿದರೆ, ಈ ನಿಧಿಗೆ ರಾಜ್ಯ ಸರ್ಕಾರ 4 ಸಾವಿ ರೂ. ನೀಡುತ್ತಿದೆ.
ಸರ್ಕಾರಿ ಯೋಜನೆಗಳಿಂದ ವಂಚಿತರಾದವರಿಗೆ ನಮ್ಮ ಸರ್ಕಾರ ಸಹಾಯ ಮಾಡುತ್ತದೆ. ಎಲ್ಲ ಜನರ ಅಭಿವೃದ್ದಿಗೆ ಬಿಜೆಪಿ ಸರ್ಕಾರ(BJP Government) ಬದ್ದವಾಗಿದೆ ಎಂದರು.
ರಾಷ್ಟ್ರೀಯ ಜಲ ಜೀವನ್ ಮಿಷನ್ ಆರಂಭವಾದಾಗ ದೇಶದಲ್ಲಿ ಕೇವಲ 3 ಕೋಟಿ ಗ್ರಾಮೀಣ ಕುಟುಂಬಗಳು ಮಾತ್ರ ಕುಡಿಯುವ ನೀರಿನ ಸಂಪರ್ಕವನ್ನು ಹೊಂದಿದ್ದವು.
ಇಂದು ದೇಶದ 11 ಕೋಟಿ ಗ್ರಾಮೀಣ ಕುಟುಂಬಗಳು ಕುಡಿಯುವ ನೀರಿನ ಸಂಪರ್ಕ ಹೊಂದಿವೆ. ನಮ್ಮ ಸರ್ಕಾರದ ಅವಧಿಯಲ್ಲಿ ಎಲ್ಲ ಕಾಮಗಾರಿಗಳು ತ್ವರಿತ ಮತ್ತು ಅತ್ಯಂತ ವೇಗವಾಗಿ ನಡೆಯುತ್ತಿವೆ.
ಹಿಂದಿನ ಸರ್ಕಾರಗಳ ರೀತಿ ದಶಕಗಳ ಕಾಲ ಕಾಮಗಾರಿಗಳನ್ನು ನಮ್ಮ ಸರ್ಕಾರ ನಡೆಸುವುದಿಲ್ಲ. ಇನ್ನು ಸೂರತ್ ಚೆನ್ನೈ ಎಕ್ಸ್ಪ್ರೆಸ್ ವೇ ಇಲ್ಲಿಯೇ ಹಾದು ಹೋಗುತ್ತದೆ.
ಇದರಿಂದ ವ್ಯವಹಾರ, ಸಾರಿಗೆ ಸಂಪರ್ಕ ಹೆಚ್ಚಾಗಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ನೆರವಾಗಲಿದೆ ಎಂದು ಹೇಳಿದರು.