ಬೆಂಗಳೂರು, ನ. 24: ಫ್ರೀಡಂ ಫಾರ್ಕ್ ಬಳಿ ವೃತ್ತಿಪರ ನೇಕಾರರ ವಿಧಾನಸೌಧ ಚಲೋ ಪ್ರತಿಭಟನೆಗೆ ಸಂಭಂದಪಟ್ಟಂತೆ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪನವರೊಂದಿಗೆ ಸಭೆಯಲ್ಲಿ ಮಾತನಾಡಿ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.
ಈ ಸಭೆಯಲ್ಲಿ ನೇಕಾರರಿಗೆ ಆಗುತ್ತಿರುವ ತಾರತಮ್ಯ ನೀತಿಯನ್ನು ಸರಿಪಡಿಸಬೇಕು ಈ ಗಿರುವ ಯೋಜನೆಗಳು ಸಮರ್ಪಕವಾಗಿ ತಲುಪಬೇಕು ಜಾರಿಯಾಗಬೇಕು, ಕಟ್ಟಡ ಕಾರ್ಮಿಕರಿಗಿರುವ ಸೌಲಭ್ಯಗಳನ್ನು ನೇಕಾರರಿಗೆ ಜಾರಿ ಮಾಡಬೇಕು ಎನ್ನುವ ಹೋರಾಟಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಸಮಯಾವಕಾಶವನ್ನು ನೀಡುವಂತೆ ನೇಕಾರರ ಬಳಿ ಕೋರಿ, ಶೀಘ್ರದಲ್ಲಿ ನಿಮ್ಮ ಬೇಡಿಕೆಗಳನ್ನು ಪೂರೈಸುತ್ತೇವೆ ಎಂಬ ಭರವಸೆಯನ್ನು ನೀಡಿದ್ದಾರೆ.
ಶ್ರೀ ಶಿವಶಂಕರ ಸ್ವಾಮಿಜಿಯವರು ನಿಗಮದ ಅಧ್ಯಕ್ಷ ಸ್ಥಾನವನ್ನು ನೇಕಾರ ಸಮುದಾಯಕ್ಕೆ ಕೊಡದೆ ಇರುವುದು ನಮಗೆ ವಂಚನೆಯಾಗಿದೆ ಎಂದು ನೇರವಾಗಿ ಆರೋಪಿಸಿದರು ಇದಕ್ಕೆ ಉತ್ತರ ನೀಡಿದ ಅವರು ನ್ಯಾಯವದಗಿಸುವುದಾಗಿ ನೇಕಾರ ಮತ್ತು ರೈತರಪರವಾಗಿದ್ದೇನೆಂದು ಸಮರ್ಥಿಸಿಕೊಂಡು ನ್ಯಾಯಒದಗಿಸುವ ಭರವಸೆ ನೀಡಿ ಗುರುಗಳೊಂದಿಗೆ ಸಮುದಾಯದೊಂದಿಗೆ ಇರುತ್ತೇನೆಂದು ಪೂಜ್ಯ ಶ್ರೀ ಘನಲಿಂಗ ಸ್ವಾಮೀಜಿಯವರು ಮತ್ತು ಶ್ರೀ ರೇವನಸಿದ್ದ ಸ್ವಾಮಿಗಳು ಮುಖ್ಯಮಂತ್ರಿಯವರಿಗೆ ಸನ್ಮಾನ ಮಾಡಿ, ರಾಜ್ಯದ ಎಲ್ಲಾ ನೇಕಾರರ ಪರವಾಗಿ ಗುರುಗಳು ಅಭಿನಂದಿಸಿದರು