• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ನಾಳೆಯಿಂದ ದುಬಾರಿ ದುನಿಯಾ: ವಿದ್ಯುತ್, ನೀರು, ಟೋಲ್ ಸೇರಿ ಹಲವು ಸೇವೆಗಳ ದರ ಏರಿಕೆ ,ಜನರ ಜೇಬಿಗೆ ಮತ್ತೆ ಕತ್ತರಿ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ನಾಳೆಯಿಂದ ದುಬಾರಿ ದುನಿಯಾ: ವಿದ್ಯುತ್, ನೀರು, ಟೋಲ್ ಸೇರಿ ಹಲವು ಸೇವೆಗಳ ದರ ಏರಿಕೆ ,ಜನರ ಜೇಬಿಗೆ ಮತ್ತೆ ಕತ್ತರಿ
0
SHARES
8
VIEWS
Share on FacebookShare on Twitter

ಹೊಸ ಆರ್ಥಿಕ ವರ್ಷ ಆರಂಭಕ್ಕೂ (new financial year price hike ) ಮುನ್ನ ದರ ಏರಿಕೆ ಶಾಕ್

ವಿದ್ಯುತ್, ನೀರು, ಟೋಲ್ ದರ ಏರಿಕೆ – ದಿನನಿತ್ಯ ಜೀವನ ವೆಚ್ಚ ಹೆಚ್ಚಳ

ರಾಜ್ಯದಲ್ಲಿ ಹಲವಾರು ಸೇವೆಗಳ ಪರಿಷ್ಕೃತ ದರ ಜಾರಿ

Bengaluru: ರಾಜ್ಯದ ಜನರಿಗೆ ಈಗಾಗಲೇ ದುಬಾರಿ ಜೀವನದ ಹೊರೆ ಹೆಚ್ಚಾಗಿರುವ ನಡುವೆಯೇ (new financial year price hike) ಏಪ್ರಿಲ್ 1ರಿಂದ ಮತ್ತಷ್ಟು ಬೆಲೆ ಏರಿಕೆ ಬಿಸಿ ತಟ್ಟಲಿದ್ದು, ಜನಸಾಮಾನ್ಯರ ಮಾಸಿಕ ಖರ್ಚು ಮತ್ತಷ್ಟು ಹೆಚ್ಚಾಗಲಿದೆ.

ಹೊಸ ಆರ್ಥಿಕ ವರ್ಷದ ಆರಂಭದ ಹಿನ್ನೆಲೆ ಹಲವು ಸೇವೆಗಳು ಮತ್ತು ವಸ್ತುಗಳ ದರ ಪರಿಷ್ಕರಣೆ ಜಾರಿಯಾಗುತ್ತಿದೆ. ವಿದ್ಯುತ್ ದರ, ನೀರಿನ ದರ, ರಾಷ್ಟ್ರೀಯ ಹೆದ್ದಾರಿ ಟೋಲ್ ಶುಲ್ಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದರ ಏರಿಕೆ ಘೋಷಣೆ ಮಾಡಲಾಗಿದ್ದು, ಇದರ ನೇರ ಪರಿಣಾಮ ಜನರ ಜೇಬಿನ ಮೇಲೆ ಬೀಳಲಿದೆ.

new financial year price hike

ದಿನನಿತ್ಯದ ಜೀವನಕ್ಕೆ ಅಗತ್ಯವಿರುವ ಸೇವೆಗಳ ದರ ಏರಿಕೆಯಿಂದ ಮಧ್ಯಮ ವರ್ಗ ಮತ್ತು ಬಡ ವರ್ಗದ ಜನರು ಹೆಚ್ಚು ಸಂಕಷ್ಟ ಎದುರಿಸುವ ಸಾಧ್ಯತೆ ಇದೆ.

ವಿದ್ಯುತ್ ದರ ಏರಿಕೆ ಸಂಬಂಧವಾಗಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು 2025-26ನೇ ಸಾಲಿನ ಹೊಸ ದರ ಪಟ್ಟಿಯನ್ನು ಪ್ರಕಟಿಸಿದೆ.

ಈ ಹೊಸ ದರಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿದ್ದು, ಕೈಗಾರಿಕಾ ಹಾಗೂ ವಾಣಿಜ್ಯ ಬಳಕೆಯ (new financial year price hike) ವಿದ್ಯುತ್ ದರದಲ್ಲಿ ಹೆಚ್ಚಳ ಮಾಡಲಾಗಿದೆ. ಕೈಗಾರಿಕಾ ವಲಯಕ್ಕೆ ವಿದ್ಯುತ್ ದರ ಹೆಚ್ಚಳದಿಂದ ಉತ್ಪಾದನಾ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ.

ಇದರ ಪರಿಣಾಮವಾಗಿ ಉತ್ಪನ್ನಗಳ ಬೆಲೆಗಳೂ ಏರಿಕೆಯಾಗುವ ಸಾಧ್ಯತೆ ಇದ್ದು, ಇದು ಅಂತಿಮವಾಗಿ ಗ್ರಾಹಕರ ಮೇಲೆಯೇ ಹೊರೆ ಬೀಳಲಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳು ಈ ದರ ಏರಿಕೆಯಿಂದ ಆರ್ಥಿಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಬೆಂಗಳೂರಿನ ನೀರಿನ ದರವನ್ನೂ ಏರಿಕೆ ಮಾಡಲಾಗಿದ್ದು, ಬೆಂಗಳೂರು ಜಲಮಂಡಳಿ ನೀರಿನ ದರವನ್ನು ಸುಮಾರು 3 ಶೇಕಡಾ ಹೆಚ್ಚಳ ಮಾಡುವುದಾಗಿ ತಿಳಿಸಿದೆ.

ಇದರಿಂದ ಬೆಂಗಳೂರಿನ ನಿವಾಸಿಗಳ ಮಾಸಿಕ ನೀರಿನ ಬಿಲ್ ಹೆಚ್ಚಾಗಲಿದೆ. ಈಗಾಗಲೇ ಮನೆ ಬಾಡಿಗೆ, ವಿದ್ಯುತ್, ಆಹಾರ ಸಾಮಗ್ರಿಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ನಗರ ನಿವಾಸಿಗಳಿಗೆ ಇದು ಮತ್ತೊಂದು ಹೊರೆ ಆಗಲಿದೆ.

ವಿಶೇಷವಾಗಿ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರು ಮತ್ತು ನೀರಿನ ಬಳಕೆ ಹೆಚ್ಚು ಇರುವ ಕುಟುಂಬಗಳಿಗೆ ಹೆಚ್ಚುವರಿ ವೆಚ್ಚ ಎದುರಾಗಲಿದೆ. ನಗರ ಜೀವನದ ವೆಚ್ಚ ದಿನೇದಿನೇ ಹೆಚ್ಚಾಗುತ್ತಿರುವುದು ಜನರಲ್ಲಿ ಆತಂಕ ಉಂಟುಮಾಡಿದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರಗಳನ್ನೂ ಹೆಚ್ಚಳ ಮಾಡಲಾಗಿದೆ. ಪ್ರತಿ ವರ್ಷ ಸಗಟು ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ಟೋಲ್ ದರ ಪರಿಷ್ಕರಣೆ ಮಾಡಲಾಗುತ್ತದೆ.

ಈ ವರ್ಷವೂ ಶೇಕಡಾ 3 ರಿಂದ 5 ರಷ್ಟು ಟೋಲ್ (Toll) ದರ ಹೆಚ್ಚಳ ಮಾಡಲಾಗಿದೆ. ಲಘು ವಾಹನಗಳಾದ ಕಾರು ಮತ್ತು ಜೀಪುಗಳಿಗೆ ಕನಿಷ್ಠ 5 ರಿಂದ 10 ರೂ.ವರೆಗೆ ಹೆಚ್ಚಳವಾಗಿದ್ದು, ಲಾರಿ, ಬಸ್ ಸೇರಿದಂತೆ ದೊಡ್ಡ ವಾಣಿಜ್ಯ ವಾಹನಗಳಿಗೆ 15 ರಿಂದ 40 ರೂ.ವರೆಗೆ ಹೆಚ್ಚಳ ಮಾಡಲಾಗಿದೆ.

ಇದರಿಂದ ಪ್ರಯಾಣ ವೆಚ್ಚ ಹೆಚ್ಚಾಗಲಿದ್ದು, ಸಾರಿಗೆ ವೆಚ್ಚ ಹೆಚ್ಚಳದಿಂದ ವಸ್ತುಗಳ ಬೆಲೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದರ ನಡುವೆ ಬೆಲೆ ಏರಿಕೆ ವಿಚಾರವಾಗಿ ರಾಜಕೀಯ ವಾಗ್ವಾದವೂ ಜೋರಾಗಿದೆ. ತೈಲ ಅಭಾವ, ಔಷಧಿಗಳ ಬೆಲೆ ಏರಿಕೆ, ಜಿಎಸ್‌ಟಿ ಹೆಚ್ಚಳ ಸೇರಿದಂತೆ ಹಲವು ವಿಷಯಗಳನ್ನು ಉಲ್ಲೇಖಿಸಿ ರಾಜ್ಯ ಸರ್ಕಾರದ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ.

ಕಬ್ಬಿಣ, ಸಿಮೆಂಟ್, ಏರ್ ಕಂಡಿಷನರ್ (Air Conditioner) , ಕೂಲರ್, ವಿಮಾನ ಟಿಕೆಟ್ ಸೇರಿದಂತೆ ಹಲವಾರು ವಸ್ತುಗಳ ಬೆಲೆ ಏರಿಕೆ ಜನರ ಜೀವನ ವೆಚ್ಚ ಹೆಚ್ಚಿಸುತ್ತಿದೆ ಎಂದು ಆರೋಪಿಸಲಾಗಿದೆ.

ಒಟ್ಟಾರೆ ಏಪ್ರಿಲ್ 1ರಿಂದ ಜಾರಿಗೆ ಬರುತ್ತಿರುವ ದರ ಏರಿಕೆಗಳು ಜನಸಾಮಾನ್ಯರ ಜೀವನವನ್ನು ಇನ್ನಷ್ಟು ದುಬಾರಿಯಾಗಿಸುವುದು ಸ್ಪಷ್ಟವಾಗಿದ್ದು, ಮುಂದಿನ ದಿನಗಳಲ್ಲಿ ದುಬಾರಿ ಜೀವನದಿಂದ ಜನರು ಇನ್ನಷ್ಟು ಸಂಕಷ್ಟ ಎದುರಿಸಬೇಕಾಗುವ ಸಾಧ್ಯತೆ ಇದೆ.

ಇದನ್ನು ಓದಿ : https://vijayatimes.com/fines-for-not-segregating-garbage/

Tags: costlyexpensesKarnatakapricehike

Related News

ಬೆಂಗಳೂರಿಗೆ ದಕ್ಷಿಣ ಆಫ್ರಿಕಾದಿಂದ ನಾಲ್ಕು ಚೀತಾಗಳ ಆಗಮನ: ಬನ್ನೇರುಘಟ್ಟ ಮೃಗಾಲಯಕ್ಕೆ ಹೊಸ ಕಳೆ
ಪ್ರಮುಖ ಸುದ್ದಿ

ಬೆಂಗಳೂರಿಗೆ ದಕ್ಷಿಣ ಆಫ್ರಿಕಾದಿಂದ ನಾಲ್ಕು ಚೀತಾಗಳ ಆಗಮನ: ಬನ್ನೇರುಘಟ್ಟ ಮೃಗಾಲಯಕ್ಕೆ ಹೊಸ ಕಳೆ

April 18, 2026
ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯಿಂದ ಸುರಕ್ಷಿತ ಉಳಿತಾಯ : ಮಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದ ಯೋಜನೆ
ಪ್ರಮುಖ ಸುದ್ದಿ

ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯಿಂದ ಸುರಕ್ಷಿತ ಉಳಿತಾಯ : ಮಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದ ಯೋಜನೆ

April 18, 2026
ಹೈಕೋರ್ಟ್ ಸೂಚನೆ ಬೆನ್ನಲ್ಲೇ ರಾಜ್ಯದಲ್ಲಿ ವೇತನಸಹಿತ ಋತುಸ್ರಾವ ರಜೆ ಜಾರಿಗೆ ಸರ್ಕಾರ ಸಜ್ಜು
ಪ್ರಮುಖ ಸುದ್ದಿ

ಹೈಕೋರ್ಟ್ ಸೂಚನೆ ಬೆನ್ನಲ್ಲೇ ರಾಜ್ಯದಲ್ಲಿ ವೇತನಸಹಿತ ಋತುಸ್ರಾವ ರಜೆ ಜಾರಿಗೆ ಸರ್ಕಾರ ಸಜ್ಜು

April 18, 2026
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಸೋಲು: NDAಗೆ ನಿರಾಸೆ
ದೇಶ-ವಿದೇಶ

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಸೋಲು: NDAಗೆ ನಿರಾಸೆ

April 18, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.