• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ಇಂದಿರಾ ಕ್ಯಾಂಟೀನ್: ಹಳೆಯದನ್ನು ನಿರ್ವಹಣೆ ಮಾಡದೆ 20 ಕೋಟಿ ವೆಚ್ಚದಲ್ಲಿ ಹೊಸದನ್ನು ನಿರ್ಮಿಸಲು ಹೊರಟ BBMP

Shwetha Mohan by Shwetha Mohan
in Vijaya Time
ಇಂದಿರಾ ಕ್ಯಾಂಟೀನ್: ಹಳೆಯದನ್ನು ನಿರ್ವಹಣೆ ಮಾಡದೆ 20 ಕೋಟಿ ವೆಚ್ಚದಲ್ಲಿ ಹೊಸದನ್ನು ನಿರ್ಮಿಸಲು ಹೊರಟ BBMP
0
SHARES
23
VIEWS
Share on FacebookShare on Twitter
  • ಹಳೆಯ ಇಂದಿರಾ ಕ್ಯಾಂಟೀನ್ ನಿರ್ವಹಣೆ ಇಲ್ಲ, ಹೊಸದನ್ನು ಮಾಡಲು ಬಿಬಿಎಂಪಿ ಪ್ಲಾನ್
  • ಬರೋಬ್ಬರಿ ₹20 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಲು ಬಿಬಿಎಂಪಿ ತೀರ್ಮಾನ
  • ಮೊದಲು ಸರ್ಕಾರಿ ಶಾಲೆಗಳಿಗೆ ಉತ್ತಮ ಸೌಲಭ್ಯ ನೀಡಲು ಜನಸಾಮಾನ್ಯರ ಬೇಡಿಕೆ

Bengaluru: ಬೆಂಗಳೂರು ನಗರದಲ್ಲಿ ಬಡ ಜನತೆಗೆ ನಿತ್ಯ ಆಹಾರ ಸಿಗಲಿ ಎಂಬ ಉತ್ತಮ ಉದ್ದೇಶದಿಂದ ಆರಂಭವಾಗಿದ್ದು, ಇಂದಿರಾ ಕ್ಯಾಂಟೀನ್ ಯೋಜನೆ ಈಗ ಜನರ ಕೆಂಗಣ್ಣಿಗೆ ಗುರಿಯಾಗಿದೆ.

ಅಷ್ಟಕ್ಕೂ ಅದಕ್ಕೆ ಕಾರಣವೇನೆಂದರೆ ಈಗಾಗಲೇ ಸರಿಯಾಗಿ ನಿರ್ವಹಣೆ ಆಗದ ಹಳೆಯ ಕ್ಯಾಂಟೀನ್‌ಗಳನ್ನು ಬಿಟ್ಟು ಬಿಬಿಎಂಪಿ (BBMP) ಹೊಸದಾಗಿ ₹20 ಕೋಟಿ ರೂಪಾಯಿ ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ನಿರ್ಮಿಸಲು ಮುಂದಾಗಿದೆ!

ಹೌದು, 2017ರಲ್ಲಿ ಪ್ರತಿ ವಾರ್ಡ್‌ಗೆ ಒಂದರಂತೆ 198 ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸುವ ಗುರಿ ಇಟ್ಟುಕೊಂಡರೂ, ಜಾಗದ ಕೊರತೆಯಿಂದಾಗಿ 174 ಶಾಶ್ವತ ಹಾಗೂ 24 ಮೊಬೈಲ್ ಕ್ಯಾಂಟೀನ್‌ಗಳಷ್ಟೇ ಕಾರ್ಯರೂಪಕ್ಕೆ ಬಂದಿದ್ದವು.

New Indira Canteen
Indira Canteen

ಈ ಪೈಕಿ ಸದ್ಯಕ್ಕೆ 160 ಕ್ಯಾಂಟೀನ್‌ಗಳು ಮಾತ್ರ ಸಕ್ರಿಯವಾಗಿವೆ. ಉಳಿದ ಕ್ಯಾಂಟೀನ್‌ಗಳು ಬಾಕಿಯಾದ ಬಿಲ್‌ಗಳು, ನಿರ್ವಹಣಾ ಕೊರತೆ ಮತ್ತು ಉದ್ಯೋಗಿಗಳ ಬಾಕಿ ವೇತನದ ಕಾರಣದಿಂದ ಈಗಾಗಲೇ ಮುಚ್ಚಲ್ಪಟ್ಟಿವೆ.

ಇಂತಹ ಗಂಭೀರ ಸಮಸ್ಯೆಗಳ ನಡುವೆಯೇ BBMP ಹೊಸ 52 ಕ್ಯಾಂಟೀನ್‌ಗಳನ್ನು ಆರಂಭಿಸಲು ಪ್ಲಾನ್ ಮಾಡಿದ್ದು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದಲ್ಲಿ ಈಗಾಗಲೇ ಹಲವೆಡೆ ಇಂದಿರಾ ಕ್ಯಾಂಟೀನ್‌ಗಳಿಗೆ ಬೀಗ ಹಾಕಲಾಗಿದೆ, ಅಲ್ಲಿ ಆಹಾರದ ಗುಣಮಟ್ಟದ ಕುರಿತು ಕೂಡ ಹಲವಾರು ದೂರುಗಳು ಬಂದಿವೆ.

ಮೆನು ಬದಲಾವಣೆ ಕೂಡ ವಿಳಂಬವಾಗಿದೆ. ಇವೆಲ್ಲಾ ಎಡವಟ್ಟನ್ನು ಸರಿಪಡಿಸದೇ, ಹೊಸ ಯೋಜನೆಗೆ ಅಡ್ಡಬಿದ್ದಿರುವ ಜನರು, ಈ ನಿರ್ಧಾರವನ್ನು ಅಗತ್ಯವಿಲ್ಲದ ತುರ್ತು ವೆಚ್ಚ ಎಂದು ಜನಸಾಮಾನ್ಯರು ಕಿಡಿ ಕಾರಿದ್ದಾರೆ.

ಹೆಚ್ಚಿದ ವಾರ್ಡ್‌ಗಳ ಸಂಖ್ಯೆಗೆ ತಕ್ಕಂತೆ ಹೊಸ ಕ್ಯಾಂಟೀನ್‌ಗಳನ್ನು ಒದಗಿಸುವ ಬಗ್ಗೆ ಸರ್ಕಾರದಿಂದ ಆದೇಶ ಬಂದ ಕಾರಣ BBMP ಈ ಯೋಜನೆಯನ್ನು ಮುಂದಿಟ್ಟಿದೆ.

ಈಗಾಗಲೇ ಸ್ಥಳ ಗುರುತಿಸುವ ಕಾರ್ಯ ಬಹುತೇಕ ಮುಗಿದಿದ್ದು, ಗುತ್ತಿಗೆದಾರರ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.

ಮುಂದಿನ ವಾರಗಳಲ್ಲಿ ಕಾಮಗಾರಿಗೆ ಚಾಲನೆ ಸಿಗಲಿದೆ ಎನ್ನಲಾಗಿದೆ.ಆದರೆ ಸಾರ್ವಜನಿಕರು ಈ ನಿರ್ಧಾರವನ್ನು ಸುಲಭವಾಗಿ ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ.

“ಹಳೆಯದು ಸರಿಯಾಗಿ ನಡೀತಿಲ್ಲ, ಹೊಸದೇಕೆ?” ಎಂಬ ಪ್ರಶ್ನೆ ಎತ್ತುತ್ತಿದ್ದಾರೆ. ಹಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನವನ್ನು ಹಂಚಿಕೊಂಡಿದ್ದಾರೆ.

ಶಾಲೆಗಳಿಗೆ ಸರಿಯಾದ ಶೌಚಾಲಯ, ಕುಡಿಯುವ ನೀರು, ಬಾಗಿಲು, ಛಾವಣಿ,ಕಿಟಕಿ ಇಲ್ಲದ ಸ್ಥಿತಿಯಲ್ಲಿರುವುದು ಗಮನಾರ್ಹ.

ಇಂಥ ಸಂದರ್ಭದಲ್ಲೂ ಶಾಲೆಗಳ ಬದಲು ಕ್ಯಾಂಟೀನ್‌ಗಳಿಗೆ ಮಿಲಿಯನ್‌ ಕೋಟಿ ವೆಚ್ಚ ಮಾಡುವುದು ಸರಿಯೇ ಎಂಬ ಪ್ರಶ್ನೆ ಎದ್ದಿದೆ.

ಇದನ್ನು ಓದಿ : ಓಲಾ, ಊಬರ್ ಮಾದರಿಯಲ್ಲೇ ಆ್ಯಂಬುಲೆನ್ಸ್ ಬುಕಿಂಗ್‌ ಜಾರಿ, ರಾಜ್ಯ ಸರ್ಕಾರ ಮಹತ್ವದ ನಿರ್ಧಾರ

ಇತ್ತ BBMP ವಿರುದ್ಧ ಭದ್ರ ನಿರ್ವಹಣೆಯ ಕೊರತೆಯ ಆರೋಪ, ಅತ್ತ ಸರ್ಕಾರದ ಸಾರ್ವಜನಿಕ ಹಣದ ದುರುಪಯೋಗದ ಬಗ್ಗೆ ಚರ್ಚೆ – ಈ ಎರಡರ ನಡುವೆ ಈಗಾಗಲೇ ಇರುವ ಇಂದಿರಾ ಕ್ಯಾಂಟೀನ್ ಮರುಜೀವನ ಪಡೆಯುತ್ತದೆಯೋ, ಅಥವಾ ಹೊಸದು ಆರಂಭವಾಗುತ್ತದೆಯೋ ಕಾದು ನೋಡಬೇಕಿದೆ. (New Indira Canteen)

Related News

ಮೇಕೆದಾಟು ವಿವಾದಕ್ಕೆ ಹೊಸ ತಿರುವು: ಕರ್ನಾಟಕದ ಪರ ಕೇಂದ್ರ ಸರ್ಕಾರದ ನಿಲುವು
Vijaya Time

ಮೇಕೆದಾಟು ವಿವಾದಕ್ಕೆ ಹೊಸ ತಿರುವು: ಕರ್ನಾಟಕದ ಪರ ಕೇಂದ್ರ ಸರ್ಕಾರದ ನಿಲುವು

July 28, 2026
ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ಕೇಂದ್ರದ ಮಹತ್ವದ ಹೆಜ್ಜೆ: ನಂದನ್ ನೀಲೆಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಟಾಸ್ಕ್ ಫೋರ್ಸ್ ರಚನೆ
Vijaya Time

ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ಕೇಂದ್ರದ ಮಹತ್ವದ ಹೆಜ್ಜೆ: ನಂದನ್ ನೀಲೆಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಟಾಸ್ಕ್ ಫೋರ್ಸ್ ರಚನೆ

July 27, 2026
ರಾಜ್ಯಾದ್ಯಂತ ಇಂದಿನಿಂದ SIR ಪ್ರಕ್ರಿಯೆ ಆರಂಭ: ಪ್ರತಿಯೊಬ್ಬರೂ ಎನ್ಯುಮರೇಶನ್ ಅರ್ಜಿ ತುಂಬಿ,ಮತದಾನದ ಹಕ್ಕು ಉಳಿಸಿಕೊಳ್ಳಿ ಎಂದ ಸಿಎಂ
Vijaya Time

ರಾಜ್ಯಾದ್ಯಂತ ಇಂದಿನಿಂದ SIR ಪ್ರಕ್ರಿಯೆ ಆರಂಭ: ಪ್ರತಿಯೊಬ್ಬರೂ ಎನ್ಯುಮರೇಶನ್ ಅರ್ಜಿ ತುಂಬಿ,ಮತದಾನದ ಹಕ್ಕು ಉಳಿಸಿಕೊಳ್ಳಿ ಎಂದ ಸಿಎಂ

June 30, 2026
ಇರಾನ್‌ಗೆ ಪ್ರಯಾಣ ಬೇಡ, ಅಲ್ಲಿರುವ ಭಾರತೀಯರು ತಕ್ಷಣ ವಾಪಸ್ ಬನ್ನಿ: ಭಾರತೀಯ ರಾಯಭಾರಿ ಕಚೇರಿಯಿಂದ ತುರ್ತು ಸೂಚನೆ
Vijaya Time

ಇರಾನ್‌ಗೆ ಪ್ರಯಾಣ ಬೇಡ, ಅಲ್ಲಿರುವ ಭಾರತೀಯರು ತಕ್ಷಣ ವಾಪಸ್ ಬನ್ನಿ: ಭಾರತೀಯ ರಾಯಭಾರಿ ಕಚೇರಿಯಿಂದ ತುರ್ತು ಸೂಚನೆ

June 8, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.