ಚಿನ್ನದ ಬಳಿಕ ಇದೀಗ ಇನ್ನಷ್ಟು (New strategy to save rupee value) ವಸ್ತುಗಳ ಮೇಲೆ ಸರ್ಕಾರದ ಕಣ್ಣು
ವಿದೇಶಿ ಆಮದುಗಳಿಗೆ ಕಡಿವಾಣ ಹಾಕಿ ಸ್ವದೇಶಿ ಉತ್ಪಾದನೆಗೆ ಉತ್ತೇಜನ ನೀಡಲು ಕೇಂದ್ರದ ಸಿದ್ಧತೆ
ರೂಪಾಯಿ ಮೌಲ್ಯ ಕುಸಿತ ತಡೆಗೆ ಕೇಂದ್ರದ ಕಸರತ್ತು
New Delhi: ಭಾರತೀಯ ರೂಪಾಯಿ ಮೌಲ್ಯ ಇತ್ತೀಚಿನ ದಿನಗಳಲ್ಲಿ ನಿರಂತರ ಕುಸಿತ (New strategy to save rupee value) ಅನುಭವಿಸುತ್ತಿದ್ದು, ಡಾಲರ್ (Dollar) ಎದುರು ರೂಪಾಯಿ ಐತಿಹಾಸಿಕ ಕನಿಷ್ಠ ಮಟ್ಟ ತಲುಪಿರುವುದು ಕೇಂದ್ರ ಸರ್ಕಾರದ ಚಿಂತೆಯನ್ನು ಹೆಚ್ಚಿಸಿದೆ.
ಆಮದು ವೆಚ್ಚ ಹೆಚ್ಚಳ, ವ್ಯಾಪಾರ ಕೊರತೆ ಮತ್ತು ವಿದೇಶಿ ವಿನಿಮಯದ ಮೇಲಿನ ಒತ್ತಡದಿಂದಾಗಿ ದೇಶದ ಆರ್ಥಿಕ ಸಮತೋಲನಕ್ಕೆ ಸವಾಲು ಎದುರಾಗಿದೆ.
ಈ ಹಿನ್ನೆಲೆಯಲ್ಲಿ ರೂಪಾಯಿಯನ್ನು ಬಲಪಡಿಸಲು ಮತ್ತು ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಪರಿಗಣಿಸುತ್ತಿದೆ.

ಚಿನ್ನದ ಆಮದು ನಿಯಂತ್ರಣದ ನಂತರ ಇದೀಗ ಅನಗತ್ಯ ವಿದೇಶಿ ವಸ್ತುಗಳ ಆಮದು ಮೇಲೆ ನಿರ್ಬಂಧ ಅಥವಾ ಹೆಚ್ಚುವರಿ ಸುಂಕ ವಿಧಿಸುವ ಕುರಿತು ಚರ್ಚೆಗಳು ಆರಂಭವಾಗಿವೆ.
ದೇಶದ ಆಮದು ವೆಚ್ಚ ಹೆಚ್ಚುತ್ತಿರುವುದು ರೂಪಾಯಿ ಮೌಲ್ಯ ಕುಸಿತಕ್ಕೆ ಪ್ರಮುಖ (New strategy to save rupee value) ಕಾರಣವೆಂದು ಸರ್ಕಾರದ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ಅನೇಕ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆಗಳ ಮೇಲೆ ಅವಲಂಬಿತವಾಗಿರುವುದರಿಂದ ಡಾಲರ್ ಬೇಡಿಕೆ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ರೂಪಾಯಿ ಮೇಲೆ ಹೆಚ್ಚುವರಿ
ಒತ್ತಡ ನಿರ್ಮಾಣವಾಗುತ್ತಿದೆ. ಕಳೆದ ಕೆಲ ತಿಂಗಳುಗಳಿಂದ ವ್ಯಾಪಾರ ಕೊರತೆ ಕೂಡ ಏರಿಕೆಯಾಗಿದ್ದು, ವಿದೇಶಿ ವಿನಿಮಯ ಮೀಸಲುಗಳ ಮೇಲೂ ಪರಿಣಾಮ ಬೀರಿದೆ.
ಆರ್ಬಿಐ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ರೂಪಾಯಿ ಸ್ಥಿರತೆ ಸಾಧಿಸಲು ಇನ್ನಷ್ಟು ಗಟ್ಟಿಯಾದ ನೀತಿಗಳ ಅಗತ್ಯವಿದೆ ಎಂದು ಸರ್ಕಾರ ಅಂದಾಜಿಸಿದೆ.
ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರ ಈಗ ದೇಶದಲ್ಲೇ ತಯಾರಿಸಬಹುದಾದ ವಸ್ತುಗಳ ಆಮದು ಕಡಿಮೆ ಮಾಡುವತ್ತ ಗಮನ ಹರಿಸಿದೆ. ಅಗತ್ಯವಲ್ಲದ ಹಾಗೂ ದೇಶೀಯವಾಗಿ
ಉತ್ಪಾದಿಸಬಹುದಾದ ಸರಕುಗಳ ಮೇಲೆ ಹೆಚ್ಚುವರಿ ಆಮದು ಸುಂಕ ವಿಧಿಸುವುದು ಅಥವಾ ನೇರ ನಿರ್ಬಂಧ ಜಾರಿಗೊಳಿಸುವ ಸಾಧ್ಯತೆಗಳ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ.
ಆದರೆ ಅಗತ್ಯ ವಸ್ತುಗಳ ಪೂರೈಕೆ ಸರಪಳಿ ಅಥವಾ ಕೈಗಾರಿಕೆಗಳಿಗೆ ತೊಂದರೆ ಉಂಟಾಗದಂತೆ ಯಾವುದೇ ಕ್ರಮವನ್ನು ಎಚ್ಚರಿಕೆಯಿಂದ ಜಾರಿಗೆ ತರಲಾಗುತ್ತದೆ ಎಂದು ತಿಳಿಸಲಾಗಿದೆ. ದೇಶೀಯ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದರ ಜೊತೆಗೆ ಸ್ವದೇಶಿ ಉತ್ಪಾದನೆಯನ್ನು ಹೆಚ್ಚಿಸುವುದೇ ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ಇದೇ ವೇಳೆ ಚಿನ್ನದ ಆಮದು ನಿಯಂತ್ರಣಕ್ಕೂ ಸರ್ಕಾರ ಈಗಾಗಲೇ ದೊಡ್ಡ ಮಟ್ಟದ ಕ್ರಮ ಕೈಗೊಂಡಿದೆ. ಚಿನ್ನದ ಮೇಲಿನ ಕಸ್ಟಮ್ಸ್ (Customs) ಸುಂಕವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಇದರಿಂದ ಚಿನ್ನದ ಆಮದು ಪ್ರಮಾಣ ಕಡಿಮೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.
ಸರ್ಕಾರದ ಲೆಕ್ಕಾಚಾರದ ಪ್ರಕಾರ, ಚಿನ್ನ ಸೇರಿದಂತೆ ಅನಗತ್ಯ ಆಮದುಗಳನ್ನು ಕಡಿಮೆ ಮಾಡಿದರೆ ವಿದೇಶಿ ವಿನಿಮಯ ಮೀಸಲುಗಳ ಮೇಲಿನ ಒತ್ತಡ ತಗ್ಗಿ ರೂಪಾಯಿ ಮೌಲ್ಯಕ್ಕೆ ಬೆಂಬಲ ಸಿಗಲಿದೆ.
ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಕೂಡ ದೇಶದಲ್ಲಿ ಸುಲಭವಾಗಿ ತಯಾರಿಸಬಹುದಾದ ವಸ್ತುಗಳನ್ನು ವಿದೇಶಗಳಿಂದ ತರಬಾರದು ಎಂದು ಉದ್ಯಮ ವಲಯಕ್ಕೆ
ಕರೆ ನೀಡಿದ್ದಾರೆ. ಅಗ್ಗದ ಮತ್ತು ಕಳಪೆ ಗುಣಮಟ್ಟದ ವಿದೇಶಿ ವಸ್ತುಗಳು ದೇಶೀಯ ಕೈಗಾರಿಕೆಗಳಿಗೆ ಹಾನಿಕಾರಕವಾಗುತ್ತಿವೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಮುಂದಿನ ವಾರ ಸಚಿವರ ಮಟ್ಟದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಆಮದು ನಿಯಂತ್ರಣ, ರೂಪಾಯಿ ಬಲವರ್ಧನೆ ಮತ್ತು ದೇಶೀಯ ಉತ್ಪಾದನೆ ಹೆಚ್ಚಿಸುವ ಕುರಿತಂತೆ ಮಹತ್ವದ ತೀರ್ಮಾನಗಳು ಕೈಗೊಳ್ಳುವ ಸಾಧ್ಯತೆ ಇದೆ.
ಹಣಕಾಸು, ವಾಣಿಜ್ಯ ಹಾಗೂ ಮೂಲಸೌಕರ್ಯ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ದೇಶದ ಆರ್ಥಿಕ ಸ್ಥಿರತೆ ಕಾಪಾಡುವುದು, ರೂಪಾಯಿ ಮೌಲ್ಯವನ್ನು ಬಲಪಡಿಸುವುದು ಮತ್ತು ಸ್ವದೇಶಿ ಕೈಗಾರಿಕೆಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ.
ಮುಂದಿನ ದಿನಗಳಲ್ಲಿ ಆಮದು ಅವಲಂಬನೆ ಕಡಿಮೆ ಮಾಡಿ “ಮೇಕ್ ಇನ್ ಇಂಡಿಯಾ”ಗೆ ಮತ್ತಷ್ಟು ಬಲ ನೀಡುವ ದಿಸೆಯಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ.