- ಮಾದಕದ್ರವ್ಯ ಜಾಲ ಭೇದಿಸಲು ಸರ್ಕಾರದ ಹೊಸ ಸ್ಟ್ರೈಕ್ ಫೋರ್ಸ್
- 66 ಮಂದಿ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ಹೊಸ ಟೀಮ್ ರಚನೆ (New weapon against drug gangs)
- ಮಾದಕವಸ್ತು ನಿರ್ಮೂಲನೆ ಆಗಸ್ಟ್ 1 ರಿಂದ ಹೊಸ ಯೋಜನೆ ರೂಪಿಸಿದ ಸರ್ಕಾರ
Bengaluru: ಕೆಲ ದಿನಗಳ ಹಿಂದಷ್ಟೇ ಮೈಸೂರಿನಲ್ಲಿ(Mysore) ಪತ್ತೆ ಹಚ್ಚಿದ ಮಾದಕ ದ್ರವ್ಯ ತಯಾರಿಕಾ ಘಟಕ ಒಂದರಲ್ಲಿ 390 ಕೋಟಿ ಮೌಲ್ಯದ ಎಂಡಿಎಂಎ (MDMA) ಎಂಬ ಭಯಾನಕ ಡ್ರಗ್ಸ್ ತಯಾರಿಸಲಾಗುತ್ತಿತ್ತು.
ಅದರ ಬೆನ್ನಲ್ಲೇ ಇದೀಗ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಾದಕವಸ್ತುಗಳ ಜಾಲ(Drug network) ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರ ಗಂಭೀರ ಕ್ರಮಕ್ಕೆ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ, ಮೊದಲ ಬಾರಿಗೆ ನಶೆಪದಾರ್ಥಗಳ ವಿರುದ್ಧದ ಕಾರ್ಯಾಚರಣೆಯನ್ನು‘ಆಂಟಿ ನಾರ್ಕೋಟಿಕ್ಸ್ ಟಾಸ್ಕ್ ಫೋರ್ಸ್’ (ANTF) ಎನ್ನುವ ವಿಶೇಷ ಪಡೆಗೆ ಜನ್ಮ ನೀಡಲಾಗಿದೆ.
ಈ ಹೊಸ ಘಟಕವು ಮಾದಕವಸ್ತುಗಳ(drugs) ವಹಿವಾಟು, ಕಳ್ಳಸಾಗಣೆ ಹಾಗೂ ಬಳಕೆಯನ್ನು ಕಡಿವಾಣ ಹಾಕುವ ಉದ್ದೇಶ ಹೊಂದಿದೆ.2025ರ ಆಗಸ್ಟ್ 1ರಂದು ರಾಜ್ಯ ಸರ್ಕಾರದಿಂದ(State Govt) ಹೊರಬಿದ್ದ ಆದೇಶದಂತೆ,

ಈ ಘಟಕವು ಪೊಲೀಸ್ ಮಹಾನಿರ್ದೇಶಕರಾದ ಪ್ರಣವ್ ಮೊಹಂತಿ(Pranav Mohanty) ಅವರಿಗೆ ನೇರವಾಗಿ ಲೆಕ್ಕಪತ್ರ ಸಲ್ಲಿಸಲಿದೆ.
ಟಾಸ್ಕ್ ಫೋರ್ಸ್ಗಾಗಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) ಹುದ್ದೆಯೂ ನಿರ್ಮಾಣಗೊಂಡಿದೆ, ಇದು ಘಟಕದ ನಿರ್ವಹಣೆಗೆ ಹೆಚ್ಚುವರಿ ಶಕ್ತಿ ನೀಡಲಿದೆ.
ಇನ್ನು ಈ ತಂಡದಲ್ಲಿ ಒಟ್ಟು 66 ಮಂದಿ ಅಧಿಕಾರಿಗಳನ್ನೊಳಗೊಂಡ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.
ಈ ಪೈಕಿ 56 ಮಂದಿ ನಕ್ಸಲ್ ವಿರೋಧಿ ಪಡೆ (ANF) ಯಿಂದ ಸ್ಥಳಾಂತರಗೊಂಡಿದ್ದು, ಇವರು ಈಗ ಮಾದಕವಸ್ತು ವಿರುದ್ಧದ ಕಾರ್ಯಪಡೆಗೆ ಸೇರ್ಪಡೆಯಾಗಿದ್ದಾರೆ.
ಉಳಿದ 10 ಹೊಸ ಹುದ್ದೆಗಳಿಗಾಗಿ ಕಛೇರಿ ಸಿಬ್ಬಂದಿಯ ನೇಮಕಾತಿ ಮಾಡಲಾಗಿದೆ.ವಿಶೇಷ ಪಡೆಯಲ್ಲಿ ಇಬ್ಬರು ಹೆಚ್ಚುವರಿ ಎಸ್ಪಿಗಳು(SP), ಒಬ್ಬ ಡಿಸಿಪಿ(DCP), ಸಹಾಯಕ ಆಡಳಿತಾಧಿಕಾರಿ,
ವಿವಿಧ ಮಟ್ಟದ ಅಧಿಕಾರಿ ವರ್ಗದ ಸಿಬ್ಬಂದಿ ಇದ್ದಾರೆ. ನಕ್ಸಲ್ ಪಡೆ ಯಿಂದ ವರ್ಗಾಯಿಸಲಾದ ಸಿಬ್ಬಂದಿಯ ಪೈಕಿ ಇಬ್ಬರು ಇನ್ಸ್ಪೆಕ್ಟರ್ಗಳು,
ನಾಲ್ವರು ಎಸ್ಐಗಳು, 20 ಹೆಡ್ ಕಾನ್ಸ್ಟೆಬಲ್ಗಳು ಹಾಗೂ 30 ಕಾನ್ಸ್ಟೆಬಲ್ಗಳು ಸೇರಿದ್ದಾರೆ.
ಈ ಹೊಸ ಪಡೆ, ರಾಜ್ಯದ ಎಲ್ಲ ಜಿಲ್ಲೆಗಳ ಮಧ್ಯೆ ಸಮನ್ವಯ ಸಾಧಿಸುವ ಮೂಲಕ ಸಂಘಟಿತ ಮಾದಕವಸ್ತು ಚಟುವಟಿಕೆಗಳನ್ನು ಪತ್ತೆಹಚ್ಚುವ ಗುರಿಯನ್ನು ಹೊಂದಿದೆ.
ಕೇಂದ್ರ ಮತ್ತು ಗುಪ್ತಚರ ವಿಭಾಗಗಳೊಂದಿಗೆ ಸಕಾಲಿಕ ಮಾಹಿತಿ ವಿನಿಮಯ ನಡೆಯುವಂತೆ ವ್ಯವಸ್ಥೆ ರೂಪಿಸಲಾಗುತ್ತದೆ. ಈ ಮೂಲಕ ಮಾದಕವಸ್ತು ವ್ಯಸನದ ಚಕ್ರವ್ಯೂಹವನ್ನು ಭೇದಿಸಲು ಸಾಧ್ಯವಾಗಲಿದೆ.
ಇನ್ನು ಹೆಚ್ಚುತ್ತಿರುವ ಮಾದಕ ವ್ಯಸನ ಮತ್ತು ಯುವ ಸಮುದಾಯದ ಮೇಲೆ ಅದರ ಬೀರುತ್ತಿರುವ ದುಷ್ಪರಿಣಾಮಗಳನ್ನು ಅರಿತ ರಾಜ್ಯ ಸರ್ಕಾರ,
ಇದೀಗ ಕ್ರಮಬದ್ಧವಾಗಿ ಮುನ್ನಡೆಯುತ್ತಿದೆ. ಈ ಕಾರ್ಯಪಡೆಯ ಸ್ಥಾಪನೆಯೊಂದಿಗೆ, ಮಾದಕದ್ರವ್ಯ ಜಾಲವನ್ನುಬುಡ ಸಮೇತ ಕಿತ್ತುಹಾಕುವ ಹೋರಾಟಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಇದನ್ನು ಓದಿ : ಡ್ರಗ್ಸ್ ಜಾಲದ ಬೆನ್ನುಬಿದ್ದ ಮಂಗಳೂರು ಪೊಲೀಸರು: ಬೀದರ್ ಮೂಲದ ವೈದ್ಯನ ಬಂಧನ
ಇನ್ನು ಈ ಕುರಿತಾಗಿ ಹೆಚ್ಚುವರಿ ಪೊಲೀಸ್ ಅಧಿಕಾರಿಯೊಬ್ಬರು ANTF ನ ಉದ್ದೇಶವು ಕೇವಲ ಪ್ರಕರಣಗಳನ್ನು ದಾಖಲಿಸುವುದಲ್ಲ, ಬದಲಾಗಿ ಮಾದಕವಸ್ತು ಜಾಲವನ್ನು ಬೇರು ಸಹಿತ ನಾಶಮಾಡುವುದು ಎಂದು ಹೇಳಿದ್ದಾರೆ. (New weapon against drug gangs)