ರಾಜ್ಯದ ಮೀನುಗಾರರಿಗೆ ಒಂದು ಗುಡ್ನ್ಯೂಸ್
ನಾಡಿನ ಹತ್ತು ಸಾವಿರ ಮೀನುಗಾರರಿಗೆ ವಸತಿ ಭಾಗ್ಯ
ಕಳೆದ ಬಜೆಟ್ನಲ್ಲಿ ಫೋಷಣೆ ಮಾಡಿದ ಯೋಜನೆ (news project proves for fishermen)
ಮೀನುಗಾರಿಕೆ ಇಲಾಖೆಯಿಂದ ಯೋಜನೆ ಜಾರಿ
Karnataka: ರಾಜ್ಯದ ಮೀನುಗಾರರಿಗೆ ರಾಜ್ಯ ಸರ್ಕಾರ (State government for fishermen) ಸಿಹಿ ಸುದ್ದಿಯನ್ನು ನೀಡಿದೆ. ನಾಡಿನ ಹತ್ತು ಸಾವಿರ ವಸತಿ ರಹಿತ ಮೀನುಗಾರರಿಗೆ ಮನೆಗಳನ್ನು (Houses for fishermen) ನಿರ್ಮಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆಯು ಈ ವರ್ಷದಿಂದಲೇ ಜಾರಿಗೆ ಬರಲಿದ್ದು, ಅರ್ಹ ಫಲಾನುಭವಿಗಳನ್ನು ಕೂಡಲೇ ಗುರುತಿಸಿ ಅವರಿಗೆ ವಸತಿಯ ಭಾಗ್ಯ (Housing fate) ಕಲ್ಪಿಸಲಾಗುವುದು ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ್ ಎಸ್ ವೈದ್ಯ (Mankal S. Doctor) ತಿಳಿಸಿದರು.
ಕಳೆದ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹತ್ತುಸಾವಿರ ಮೀನುಗಾರರಿಗೆ ವಸತಿ ನಿರ್ಮಿಸಿಕೊಡಲಾಗುವುದು ಎಂದು ಘೋಷಿಸಿದ್ದರು. ಆ ಘೋಷಣೆ ಈಗ ಅನುಷ್ಠಾನಕ್ಕೆ ಬರಲಿದೆ. ವಸತಿ ಹೀನ ಮೀನುಗಾರರಿಗೆ ಮನೆ ನಿರ್ಮಿಸಿಕೊಡುವ ಭರವಸೆಯನ್ನು (promise of building a house) ಒಂದೇ ವರ್ಷದಲ್ಲಿ ಈಡೇರಿಸುತ್ತಿದ್ದೇವೆ ಎಂದು ಸಚಿವರಾದ ಮಂಕಾಳ್ ವೈದ್ಯ ತಿಳಿಸಿದರು.
ರಾಜ್ಯಸರ್ಕಾರದ ವಿವಿಧ ಯೋಜನಗಳಡಿಯಲ್ಲಿ (Under various schemes) ಮನೆಗಳನ್ನ ನಿರ್ಮಿಸಲು ಸಹಾಯಧನ ನೀಡಲು ರಾಜ್ಯಸರ್ಕಾರ ಮುಂದಾಗಿದೆ. ವಸತಿ ನಿರ್ಮಾಣ ಯೋಜನೆಯನ್ನು ಮೀನುಗಾರಿಕಾ ಇಲಾಖೆಯ ಅಂಗ ಸಂಸ್ಥೆಯಾದ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ, ಮಂಗಳೂರು (Manglore) ಮುಖಾಂತರ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

10,000 ಮನೆಗಳನ್ನು ವಿವಿಧ ವಿಧಾನಸಭಾ ಕ್ಷೇತ್ರವಾರು (Various Assembly Constituencies) ಹಂಚಿಕೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಪ್ರತಿ ಕ್ಷೇತ್ರದಲ್ಲಿ ಅಲ್ಲಿನ ಶಾಸಕರ ನೇತೃತ್ವದಲ್ಲಿ (Led by legislators) ಒಂದು ಸಮಿತಿ ರಚಿಸಲಾಗುವುದು, ಈ ಸಮಿತಿಯು ತಮ್ಮ ಕ್ಷೇತ್ರದ ವಸತಿರಹಿತ ಮೀನುಗಾರರನ್ನು ಗುರುತಿಸಿ (Identify the fishermen) ಅರ್ಹ ಫಲಾನುಭವಿಗಳ ಪಟ್ಟಿಯನ್ನು ಮೂರು ತಿಂಗಳೊಳಗೆ ಇಲಾಖೆಗೆ ತಲುಪಿಸಬೇಕು. ಒಂದು ವೇಳೆ ನಿಗದಿತ ಅವಧಿಯೊಳಗೆ ಅರ್ಹ ಫಲಾನುಭವಿಗಳ (Beneficiaries) ಹೆಸರನ್ನು ಕಳುಹಿಸದಿದ್ದರೆ ಈ ಸೌಲಭ್ಯ ರದ್ದಾಗಲಿದೆ.
ಹಾಗಾಗಿ ಈ ಸಮಿತಿಯು ಅರ್ಹ ಅಭ್ಯರ್ಥಿಗಳನ್ನು (Eligible candidates) ಆಯ್ಕೆ ಮಾಡಿ, ವಸತಿ ಹೀನರಿಗೇ ಮನೆ ಸಿಗುವ ಹಾಗೆ ಮಾಡಬೇಕು ಅನ್ನೋ ಉದ್ದೇಶದಿಂದ ಇಂಥಾ ಒಂದು ಪಾರದರ್ಶಕ ವ್ಯವಸ್ಥೆಯನ್ನು (transparent system) ರೂಪಿಸಲಾಗಿದೆ.ಈ ಯೋಜನೆಯ ವಿಶೇಷತೆ ಅಂದ್ರೆ ಬೆಳಗಾವಿ. ಬಾಗಲಕೋಟೆ, ಕಲಬುರಗಿ, ಯಾದಗಿರಿ, ಬೀದರ್ (Bagalkot, Kalaburagi, Yadgir, Bidar) ಸೇರಿ ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿರುವ ವಸತಿರಹಿತ ಮೀನುಗಾರರಿಗೆ ವಸತಿ ನಿರ್ಮಾಣಕ್ಕೆ ಧನಸಹಾಯ ನೀಡಲು ಸರ್ಕಾರ ತೀರ್ಮಾನಿಸಿದೆ(news project proves for fishermen) .
ಇದನ್ನು ಓದಿ : http://ಉಗ್ರರನ್ನು ಮಟ್ಟ ಹಾಕೋಕೆ ಕೇಂದ್ರದ ಜೊತೆಯಾಗಿ ನಾವಿರುತ್ತೇವೆ: ಸಿಎಂ ಸಿದ್ದರಾಮಯ್ಯ
ಕೂಡಲೇ ವಸತಿ ಹೀನ ಮೀನುಗಾರರ ಆಯ್ಕೆ (Fisherman’s Choice) ಪ್ರಕ್ರಿಯೆ ನಡೆಯಲಿದ್ದು, ಶೀಘ್ರವೇ ಅರ್ಹ ಫಲಾನುಭವಿಗಳ ಪಟ್ಟಿಯನ್ನು (List of eligible beneficiaries) ತಯಾರಿಸಲಾಗುವುದು ಎಂದು ಸಚಿವರು ತಿಳಿಸಿದರು.