Bengaluru : ಪ್ರಧಾನಿ ನರೇಂದ್ರ ಮೋದಿ(Narendra Modi) ಹತ್ಯೆಗೆ(Murder) ಸಂಚು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ, ತಮಿಳುನಾಡು ಮತ್ತು ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಶೋಧ ನಡೆಸಿದೆ.

ಬಿಹಾರದ ನಳಂದ, ಕತಿಹಾರ್, ಅರಾರಿಯಾ, ಮಧುಬನಿ, ಪಾಟ್ನಾ, ವೈಶಾಲಿ, ದರ್ಬಂಗಾ, ಮುಜಾಫರ್ಪುರ ಮತ್ತು ಸರನ್ ಸೇರಿದಂತೆ ಬಿಹಾರದ 9 ಜಿಲ್ಲೆಗಳಲ್ಲಿ ಆರೋಪಿಗಳು ಮತ್ತು ಶಂಕಿತರೊಂದಿಗೆ ಸಂಬಂಧ ಹೊಂದಿರುವ 20 ಸ್ಥಳಗಳಲ್ಲಿ ಎನ್ಐಎ(NIA) ಶೋಧ ನಡೆಸಿತು.
ಇದೇ ವೇಳೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಶಿವಗಂಗಾ ಮತ್ತು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶೋಧ ನಡೆಸಲಾಗಿದೆ ಎಂದು ಎನ್ಐಎ (NIA)ತಿಳಿಸಿದೆ.
ಇದನ್ನೂ ಓದಿ : https://vijayatimes.com/congress-slams-bc-patil/
ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಮುಖಂಡ ರಿಯಾಜ್ ಫರಂಗಿಪೇಟೆ ಅವರ ಮನೆ ಮೇಲೆ ದಾಳಿ ನಡೆಸಿದಾಗ, ಸ್ಥಳೀಯರು “ಗೋ-ಬ್ಯಾಕ್ ಎನ್ಐಎ” (GO BACK NIA) ಎಂದು ಘೋಷಣೆ ಕೂಗಿದ್ದಾರೆ ಎಂದು ವರದಿಯಾಗಿದೆ.
ಇನ್ನು ಎನ್ಐಎ ತನಿಖೆಯ ನೆಪದಲ್ಲಿ ನನ್ನ ಮನೆಗೆ ಬಂದು ದಾಖಲೆಗಳನ್ನು ಕೇಳಿತು ಮತ್ತು ವಿವರಗಳನ್ನು ತೆಗೆದುಕೊಂಡಿತು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ತನಿಖಾ ಸಂಸ್ಥೆಗಳು ರಾಜಕೀಯ ಪ್ರೇರಿತವಾಗಿರುವುದರಿಂದ ಎನ್ಐಎ ಪಕ್ಷಾತೀತವಾಗಿರಬೇಕು.

ಇನ್ನು ನಾನು ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರಿಂದ ಬಿಹಾರದಲ್ಲಿ ನಡೆದ ಪಕ್ಷದ ಹಲವು ಸಮಾವೇಶಗಳಲ್ಲಿ ಭಾಗವಹಿಸಿದ್ದೇನೆ.
ಆದರೆ ಯಾವುದೇ ಸಂಚು ರೂಪಿಸಿಲ್ಲ ಎಂದು ರಿಯಾಜ್ ಫರಂಗಿಪೇಟೆ ತಿಳಿಸಿದ್ದಾರೆ. ಇನ್ನು ಪ್ರಧಾನಿ ಮೋದಿ ಹತ್ಯೆಯ ಸಂಚು ಮತ್ತು ಪ್ರವೀಣ ನೆಟ್ಟಾರು ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ, ಬೆಳ್ಳಾರೆ,