- NIAನಿಂದ ಭರ್ಜರಿ ಕಾರ್ಯಾಚರಣೆ ಒಟ್ಟು 5 ಕಡೆ ದಾಳಿ
- ಜೈಲಿನ ಮನೋವೈದ್ಯ ಹಾಗೂ ASI ಸೇರಿ ಮೂವರು ವಶಕ್ಕೆ (NIA raids Bengaluru Kolar)
- ಜೈಲಿನಲ್ಲಿದ್ದುಕೊಂಡೇ ವಿದ್ವಂಸಕ ಕೃತ್ಯಕ್ಕೆ ನಡೆದಿತ್ತು ಪ್ಲಾನ್
Bengaluru: ರಾಜ್ಯದಲ್ಲಿ ಎನ್ಐಎ (NIA) ಅಧಿಕಾರಿಗಳು ಭಾರೀ ದೊಡ್ಡ ಪ್ರಮಾಣದಲ್ಲಿ ದಾಳಿ ಮಾಡಿದ್ದಾರೆ.
ದುರಂತ ಏನಂದ್ರೆ ದೇಶ ಕಾಯ್ತೀವಿ ಅಂತ ಸಂವಿಧಾನದ (Constitution) ಮೇಲೆ ಪ್ರಮಾಣ ಮಾಡಿದ ಪೊಲೀಸ್ ಅಧಿಕಾರಿಯೇ ತಾಯ್ನೆಲಕ್ಕೆ ದ್ರೋಹವೆಸಗಿರುವ ಆರೋಪ ಕೇಳಿಬಂದಿದೆ.
ಈ ಅಧಿಕಾರಿಯ ಜೊತೆಗೆ ಭಯೋತ್ಪಾದನೆಗೆ (terrorism) ಸಹಾಯ ಮಾಡೋ ಕೆಲ ಶಂಕಿತರನ್ನ ಎನ್ಐಎ ಅರೆಸ್ಟ್ ಮಾಡಿದೆ.ರಾಜ್ಯದಲ್ಲಿ ಉಗ್ರವಾದಿಗಳನ್ನು (Extremists) ಹೆಡೆಮುರಿಕಟ್ಟುವ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ.
2008ರ ಜುಲೈ 25ರಂದು ಬೆಂಗಳೂರಲ್ಲಿ 9 (Bangalore) ಸರಣಿ ಬಾಂಬ್ ಸ್ಫೋಟದ ಹಿಂದೆ ಎನ್ಐಎ ಅಧಿಕಾರಿಗಳು ಬಿದ್ದಿದ್ದಾರೆ. ಅವತ್ತಿನಿಂದ ಇವತ್ತಿನವರೆಗೂ ಒಬ್ಬರಾದ್ನೇಲೆ ಒಬ್ಬರನ್ನು ಲಾಕ್ ಮಾಡ್ತಿರುವ ಎನ್ಐಎ ವಿಚಾರಣೆ ಮಾಡ್ತಾ ಬಂದಿದೆ.

ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ ಡಾ. ನಾಗರಾಜ್, (Dr Nagaraj) ಎಎಸ್ಐ ಚಾನ್ಪಾಷಾ, ಕೋಲಾರದ ಅನೀಸಾ ಫಾತೀಮಾ ಬಂಧಿತರು.
ಆರೋಪಿ ಅನಿಸಾ, ತಲೆಮರೆಸಿಕೊಂಡಿರುವ ಉಗ್ರ ಜುನೈದ್ ಅಹಮ್ಮದ್ನ ತಾಯಿ.
ಈ ಮೂವರು ಶಂಕಿತರು ಜೈಲಿನಲ್ಲಿರುವ ಎಲ್ಇಟಿ ಉಗ್ರ ಟಿ.ನಾಸೀರ್ನ ಉಗ್ರ ಚಟುವಟಿಕೆಗಳಿಗೆ ಸಹಕಾರ (cooperation) ನೀಡುತ್ತಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ.
ಕೋಲಾರ (Kolar) ಹಾಗೂ ಬೆಂಗಳೂರು ಸೇರಿದಂತೆ ಐದು ಸ್ಥಳಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದ ಹಣ, ಚಿನ್ನಾಭರಣ, ಎರಡು ವಾಕಿಟಾಕಿ, ಡಿಜಿಟಲ್ ಪರಿಕರಗಳು ಸಿಕ್ಕಿವೆ ಎಂದು ಎನ್ಐಎ ತಿಳಿಸಿದೆ.
ಕೆಲ ವರ್ಷಗಳಿಂದ ಜೈಲಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯ ಡಾ.ನಾಗರಾಜ್, ಉಗ್ರ ನಾಸೀರ್ ಸೇರಿ ಇತರರಿಗೆ ಕಳ್ಳ ಮಾರ್ಗದ ಮೂಲಕ ಮೊಬೈಲ್ ತಲುಪಿಸುತ್ತಿದ್ದರು.
ಈ ಕೃತ್ಯಕ್ಕಾಗಿ ಪವಿತ್ರಾ ಎಂಬಾಕೆ ಸಹಾಯ ಮಾಡುತ್ತಿದ್ದರು. ಸಶಸ್ತ್ರ ಮೀಸಲು ಪಡೆಯ ಎಎಸ್ಐ (ASI) ಚಾನ್ ಪಾಷಾ, 2022ರಿಂದ ಉಗ್ರ ನಾಸೀರ್ಗೆ ಮಾಹಿತಿ ರವಾನಿಸುವುದು,
ಬೇರೆ ಕೋರ್ಟ್ಗಳಿಗೆ ಕರೆದುಕೊಂಡು ಹೋದಾಗ ಸಹಕಾರ ನೀಡುವುದು, ಎಲ್ಇಟಿ ಸಂಘಟನೆ (LeT organization) ಬಲಪಡಿಸಲು ದೇಣಿಗೆ ಸಂಗ್ರಹಿಸಲು ನೆರವಾಗುತ್ತಿದ್ದರು.
ಇದನ್ನು ಓದಿ :ಬೆಂಗಳೂರಿನಲ್ಲಿ 600 ಜನರಿಗೆ ಚೀಟಿ ಹೆಸರಲ್ಲಿ ಚೀಟಿಂಗ್: 40 ಕೋಟಿ ರೂ ಹಣದೊಂದಿಗೆ ದಂಪತಿ ಪರಾರಿ!
ಬೆಂಗಳೂರು ಸೇರಿ ವಿವಿಧೆಡೆ ಎಲ್ಇಟಿ ಸಂಘಟನೆ ಬಲಪಡಿಸುವಿಕೆ ಹಾಗೂ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವಲ್ಲಿ ಪ್ರಧಾನ ಪಾತ್ರ ವಹಿಸಿ ತಲೆಮರೆಸಿಕೊಂಡ ಉಗ್ರ ಜುನೈದ್ ಅಹಮದ್ನ್ ತಾಯಿಯಾಗಿರುವ ಅನಿಸಾ ಕೂಡ ನಾಸೀರ್ಗೆ ಸಹಕಾರ ನೀಡಿದ್ದಾಳೆ ಎಂದು ಎನ್ಐಎ ತಿಳಿಸಿದೆ. (NIA raids Bengaluru Kolar)