• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಕವರ್‌ ಸ್ಟೋರಿ

ಅಂಗನವಾಡಿ ಆಹಾರ ರಹಸ್ಯ ಬಯಲು ! ಆಹಾರ ಸುರಕ್ಷತಾ ಸರ್ಟಿಫಿಕೇಟ್‌ ಇಲ್ಲದೆಯೇ ಮಕ್ಕಳ ಆಹಾರ ತಯಾರಿಕೆ. ವಿಜಯಟೈಮ್ಸ್‌ ರಿಯಾಲಿಟಿ ಚೆಕ್‌ನಲ್ಲಿ ಬಯಲಾಯ್ತು ಆಹಾರ ಸೀಕ್ರೆಟ್ಸ್.

Sharadhi by Sharadhi
in ಕವರ್‌ ಸ್ಟೋರಿ
Featured Video Play Icon
0
SHARES
22
VIEWS
Share on FacebookShare on Twitter

ಈ ಬಾರಿ ವಿಜಯಟೈಮ್ಸ್‌ ಕವರ್‌ಸ್ಟೋರಿ ತಂಡ ನುಗ್ಗಿದ್ದು ಅಂಗನವಾಡಿ ಮಕ್ಕಳ ಆಹಾರ ತಯಾರಿಸೋ ಘಟಕಗಳ ಒಳಗೆ. ಯಾಕಂದ್ರೆ ನಮ್ಮ ಅಂಗನವಾಡಿಯಲ್ಲಿ ಸರಬರಾಜಾಗೋ ಕೆಲ ಆಹಾರ ಪದಾರ್ಥಗಳು ತಿನ್ನಲು ಯೋಗ್ಯ ಇಲ್ಲ ಅಂತ ಮಕ್ಕಳ ಹೆತ್ತವರು ಪದೇ ಪದೇ ದೂರು ನೀಡುತ್ತಿದ್ದಾರೆ.

ಅದ್ರಲ್ಲೂ ಹಾಸನ ಭಾಗದ ಮಂದಿ ಅಂಗನವಾಡಿಯಲ್ಲಿ ಸರಬರಾಜಾಗೋ ಪೌಷ್ಟಿಕ ಆಹಾರ  ಪುಡಿಯನ್ನು ಹಸುಗಳಿಗೆ ಹಾಕ್ತಿದ್ದಾರೆ ಅನ್ನೋ ದೂರು ಕೂಡ ಬರುತ್ತಿದೆ. ಇದಕ್ಕೆ ಇಲ್ಲಿನ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯಲ್ಲಿ ಮೂವತ್ತು ವರ್ಷಗಳಿಂದ ಝಾಂಡಾ ಊರಿರುವ ಕೆಲ  ಅಧಿಕಾರಿಗಳ ಕಮಿಷನ್ ದಂಧೆ, ಅರ್ಹತೆಯೇ ಇಲ್ಲದೆ ನಿಯಮಮೀರಿ ಉಪನಿರ್ದೇಶಕ ಸ್ಥಾನದಲ್ಲಿ ಕೂತಿರುವ ಅಧಿಕಾರಿ ಲಂಚಕ್ಕಾಗಿ ಮಾಡ್ತಿರೋ ಲಜ್ಜೆಗೆಟ್ಟ ವ್ಯವಹಾರಗಳೇ ಕಾರಣ ಅನ್ನೋ ಆರೋಪ ಬಲವಾಗಿ ಕೇಳಿ ಬರುತ್ತಿದೆ.

ಈ  ದೂರಿನ ಸತ್ಯಾಸತ್ಯತೆ ಏನು? ನಮ್ಮ ಕರುನಾಡಿನ ಕಂದಮ್ಮಗಳು ತಿನ್ನೋ ಆಹಾರ ಎಷ್ಟು ಸ್ವಚ್ಫವಾಗಿ, ಸುರಕ್ಷಿತವಾಗಿ ತಯಾರಾಗುತ್ತವೆ ಅನ್ನೋದನ್ನ ಪತ್ತೆ ಹಚ್ಚಲು ಕವರ್‌ಸ್ಟೋರಿ ತಂಡ ಹಾಸನ ಜಿಲ್ಲೆಗೆ ಹೊರಟಿತು. ಜಿಲ್ಲೆಯಲ್ಲಿ ಅಂಗನವಾಡಿ ಆಹಾರ ತಯಾರಿಸೋ ಪ್ರಮುಖ ಎಂಎಸ್‌ಪಿಟಿಸಿ ಘಟಕಗಳಲ್ಲಿ ರಿಯಾಲಿಟಿ ಚೆಕ್‌ ಮಾಡಿದೆವು. ಮೊದಲಿಗೆ ನಾವು ನಮ್ಮ ರಿಯಾಲಿಟಿ ಚೆಕ್‌ ಪ್ರಾರಂಭ ಮಾಡಿದ್ದು ಅರಕಲಗೂಡು ಎಂಎಸ್‌ಪಿಟಿಸಿಯಿಂದ

ಅರಕಲಗೂಡಿನ ಎಂಎಸ್‌ಪಿಟಿಸಿಯಲ್ಲಿ ರಿಯಾಲಿಟಿ ಚೆಕ್‌ ಮಾಡಲು ಹೋದಾಗ ಅಲ್ಲಿ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಅಧಿಕಾರಿ ಕೃಷ್ಣಮೂರ್ತಿಯವರು ಇದ್ರು. ನಮ್ಮನ್ನು ನೋಡಿ ಅಲ್ಲಿಂದ ಕಳ್ಳರಂತೆ ಕಾಲ್ಕಿತ್ರು. ಯಾಕೆ ಅಂತ ನಮಗೆ ಗೊತ್ತಾಗಿಲ್ಲ.

ಇಲ್ಲಿಂದ ನಾವು ನೇರವಾಗಿ ಹೊಳೆನರಸೀಪುರದ ಎಂಎಸ್‌ಪಿಟಿಸಿಗೆ ರಿಯಾಲಿಟಿ ಚೆಕ್ ಮಾಡ್ತಾ ಎಂಟ್ರಿ ಕೊಟ್ಟೆವು. ಈ ಕೇಂದ್ರದಲ್ಲಿ ಅದೇ ಕತೆ. ಮಾಸ್ಕ್‌ ಇಲ್ಲ, ಗ್ಲೌಸ್‌ ಇಲ್ಲ. ಸ್ವಚ್ಫತೆ, ಶುಭ್ರತೆಗೆ ಮಾನ್ಯತೆಯೇ ಇಲ್ಲ. ಯಾಕೆ ಹೀಗೆ ಅಂತ ಕೇಳಿದ್ರೆ ನೂರಾರು ಕಾರಣಗಳನ್ನ ಕೊಟ್ರು.

ಮುಂದೆ ನಮ್ಮ ತಂಡದ ಸದಸ್ಯ ಶ್ರೀನಿವಾಸ್‌ ಅವರು ಬಾಳ್ಳುಪೇಟೆಯ ಎಂಎಸ್‌ಪಿಟಿಸಿಯಲ್ಲೂ ರಿಯಾಲಿಟಿ ಚೆಕ್‌ ಮಾಡಿದ್ರು. ಆಗ ಕಂಡಂಥಾ ಸತ್ಯ ಚಿತ್ರಣ ಇಲ್ಲಿದೆ

ಹಾಸನದ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯಲ್ಲಿ ಮಕ್ಕಳಿಗೆ ಕಳಪೆ  ಆಹಾರ ಸರಬರಾಜು,  ಕಮಿಷನ್‌ ದಂಧೆ ಮಾತ್ರ ನಡೀತಿಲ್ಲ ಬದಲಾಗಿ ಅಂಗನವಾಡಿಗೆ ಸಾಮಾಗ್ರಿ ಖರೀದಿಸುವ ವ್ಯವಹಾರದಲ್ಲೂ ಭಾರೀ ಅವವ್ಯವಹಾರ ಮಾಡಿದೆ. ಇಲಾಖೆ ಡಿಡಿ ಆಗಿರುವ ದಿಲೀಪ್ ಕಾನೂನು ನಿಯಮಗಳನ್ನ ಮೀರಿ ಕಿಯೋನಿಕ್ಸ್‌ ಎಂಸಿಎಯಿಂದ ವಸ್ತುಗಳನ್ನು ಖರೀದಿಸಿ ಭಾರೀ ಬಿಲ್‌ ಗೋಲ್ಮಾಲ್ ಮಾಡಿರುವುದಕ್ಕೆ ಸ್ಪಷ್ಟ ದಾಖಲೆಗಳಿವೆ. ಕೆಲ ವಸ್ತುಗಳು ಬರೀ ಬಿಲ್ಲಲ್ಲಿ ಮಾತ್ರ ಇವೆ ಅಂಗನವಾಡಿಗೆ ತಲುಪಲೇ ಇಲ್ಲ. ಇವರ ಆರೋಪ ನಿಜನಾ ಸುಳ್ಳಾ ಅಂತ ತಿಳಿದುಕೊಳ್ಳಲು ನಾವು ನಾನಾ ಅಂಗನವಾಡಿಗಳಿಗೆ ಹೋಗಿ ರಿಯಾಲಿಟಿ ಚೆಕ್‌ ಮಾಡಿದೆವು. ಆಗ ಇವರ ಆರೋಪಕ್ಕೆ ತಕ್ಕುದಾದ ಪ್ರೂಫ್‌ ಸಿಕ್ಕಿದವು.

ಈ ರೀತಿ ಒಂದಲ್ಲ ಎರಡಲ್ಲ ಸಾಕಷ್ಟು ಹಗರಣಗಳು ಹಾಸನದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನಡೆಯುತ್ತಿದೆ. ಆದ್ರೆ ಹಾಸನ ಜಿಲ್ಲಾಧಿಕಾರಿಗಳು ಮಾತ್ರ ಈ ಇಲಾಖೆಯನ್ನು ಭ್ರಷ್ಟಾಚಾರದ ಕೂಪವನ್ನಾಗಿಸಿರುವ ಅಧಿಕಾರಿಗಳ ವಿರುದ್ಧ ಯಾವ ಕ್ರಮವನ್ನು ಕೈಗೊಳ್ಳದೇ ಇರುವುದು ಹಲವು ಅನುಮಾನಗಳನ್ನ ಮೂಡಿಸಿವೆ. ಅಲ್ಲದೆ ಶಾಸಕ ಪ್ರೀತಮ್ ಗೌಡ ಅವರ ಹೆಸರನ್ನು ಬಳಸಿ ಇಲ್ಲಿನ ಅಧಿಕಾರಿಗಳು ದಂಧೆ ಮಾಡುತ್ತಿರುವುದು ಶಾಸಕರ ಗಮನಕ್ಕೆ ಯಾಕೆ ಬಂದಿಲ್ಲ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ. ಹಾಗಾಗಿ ತಕ್ಷಣ ಈ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ಅಂಗನವಾಡಿ ಕಂದಮ್ಮಗಳನ್ನು ರಕ್ಷಿಸಬೇಕಾಗಿ ವಿಜಯಟೈಮ್ಸ್ ಮನವಿ ಮಾಡುತ್ತಿದೆ.

Related News

ಮಂಗಳೂರಿನ ಮರಳು ಮಾಫಿಯಾಗೆ ಬಿಗ್ ಶಾಕ್: ಇದು ವಿಜಯಟೈಮ್ಸ್ ವರದಿ  ಇಂಪಾಕ್ಟ್
ಕವರ್‌ ಸ್ಟೋರಿ

ಮಂಗಳೂರಿನ ಮರಳು ಮಾಫಿಯಾಗೆ ಬಿಗ್ ಶಾಕ್: ಇದು ವಿಜಯಟೈಮ್ಸ್ ವರದಿ  ಇಂಪಾಕ್ಟ್

October 10, 2024
ಆಪರೇಷನ್ ಕೋಲಾರ RTO ಸಕ್ಸಸ್‌ , Vijaya Times Impact: ಹಗರಣದ ಐವರು ಆರೋಪಿಗಳ ಬಂಧನ
Vijaya Time

ಆಪರೇಷನ್ ಕೋಲಾರ RTO ಸಕ್ಸಸ್‌ , Vijaya Times Impact: ಹಗರಣದ ಐವರು ಆರೋಪಿಗಳ ಬಂಧನ

July 14, 2023
Featured Video Play Icon
ಕವರ್‌ ಸ್ಟೋರಿ

ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಯನ್ನು ಬಯಲಿಗೆಳದ `ವಿಜಯ ಟೈಮ್ಸ್’ ತಂಡ!

February 12, 2022
coverstory
ಕವರ್‌ ಸ್ಟೋರಿ

`ಡೊನೇಷನ್‌’ ಹೆಸರಿನಲ್ಲಿ ಮುಗ್ದ ಜನರನ್ನು ಯಾಮಾರಿಸುತ್ತಿದ್ದ ಗ್ಯಾಂಗ್ ಅನ್ನು ಬಯಲಿಗೆಳೆದ ವಿಜಯ ಟೈಮ್ಸ್ ತಂಡ!

February 4, 2022

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.