- ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೂ ದಂಡ ಇಲ್ಲ: 72 ಕೋಟಿ (no minimum balance for bank accounts) ಖಾತೆದಾರರಿಗೆ ನಿರಾಳ ಸುದ್ದಿ ನೀಡಿದ ಸರ್ಕಾರ
- ಜನಧನ್ ಸೇರಿ BSBD ಖಾತೆದಾರರಿಗೆ ದಂಡದಿಂದ ಸಂಪೂರ್ಣ ವಿನಾಯಿತಿ ನೀಡಿದ ಕೇಂದ್ರ ಸರ್ಕಾರ
- ಕೆಲವು ಶೂನ್ಯ ಬ್ಯಾಲೆನ್ಸ್ ಖಾತೆಗಳಿಗೆ ಯಾವುದೇ ದಂಡ ವಿಧಿಸಲಾಗುವುದಿಲ್ಲ ಎಂದ ನಿರ್ಮಲಾ ಸೀತಾರಾಮನ್
New delhi: ಭಾರತದ ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಮಹತ್ವದ ಸ್ಪಷ್ಟನೆ ನೀಡಿರುವ (no minimum balance for bank accounts) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜನಧನ್ ಯೋಜನೆ ಸೇರಿದಂತೆ ದೇಶದ ಸುಮಾರು 72 ಕೋಟಿಗೂ ಹೆಚ್ಚು ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪಾಸಿಟ್ (BSBD) ಖಾತೆಗಳಿಗೆ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಈ ಖಾತೆಗಳಲ್ಲಿ ಕನಿಷ್ಠ ಮೊತ್ತ ಉಳಿಸದಿದ್ದರೂ ಸಹ ಯಾವುದೇ ರೀತಿಯ ದಂಡ ವಿಧಿಸಲಾಗುವುದಿಲ್ಲ ಎಂಬುದನ್ನು ಅವರು ಲೋಕಸಭೆಯಲ್ಲಿ ಲಿಖಿತ
ಉತ್ತರದ ಮೂಲಕ ಸ್ಪಷ್ಟಪಡಿಸಿದ್ದಾರೆ. ಈ ಘೋಷಣೆ ದೇಶದ ಕೋಟ್ಯಂತರ ಸಾಮಾನ್ಯ ಖಾತೆದಾರರಿಗೆ ದೊಡ್ಡ ನಿರಾಳತೆಯನ್ನು ನೀಡುವಂತಾಗಿದೆ.

ಭಾರತದಲ್ಲಿ ಹಲವು ಜನರು ತಮ್ಮ ವೇತನ, ವಿದ್ಯಾರ್ಥಿಗಳ ವಿದ್ಯಾರ್ಥಿವೇತನ, ರೈತರಿಗೆ ಸರ್ಕಾರದಿಂದ ಸಿಗುವ ಸಹಾಯಧನ, ಮಹಿಳಾ ಯೋಜನೆಗಳ ಹಣ ಹಾಗೂ
ಹಿರಿಯ ನಾಗರಿಕರ ಪಿಂಚಣಿ ಪಡೆಯಲು ಬ್ಯಾಂಕ್ ಖಾತೆಗಳನ್ನು ಬಳಸುತ್ತಾರೆ.
ಸಾಮಾನ್ಯವಾಗಿ ಬ್ಯಾಂಕುಗಳು ಖಾತೆ ನಿರ್ವಹಣೆಗೆ ಸಂಬಂಧಿಸಿದಂತೆ ವಾರ್ಷಿಕ ಶುಲ್ಕ, ಎಟಿಎಂ ಬಳಕೆ ಶುಲ್ಕ, ಡೆಬಿಟ್ ಕಾರ್ಡ್ ಶುಲ್ಕ (Debit card) , ಚೆಕ್ ಬುಕ್ ಶುಲ್ಕ
ಮತ್ತು ಪಾಸ್ಬುಕ್ ಶುಲ್ಕಗಳನ್ನು ವಿಧಿಸುತ್ತವೆ. ಇದರ ಜೊತೆಗೆ ಖಾತೆಯಲ್ಲಿ ನಿಗದಿತ ಕನಿಷ್ಠ ಮೊತ್ತವನ್ನು ಉಳಿಸದಿದ್ದರೆ ದಂಡ ವಿಧಿಸುವ ವ್ಯವಸ್ಥೆಯೂ ಇದೆ.
ಆದರೆ ಜನಧನ್ ಮತ್ತು ಬಿಎಸ್ಬಿಡಿ (BSBD) ಖಾತೆಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಸಚಿವರ ಮಾಹಿತಿಯ ಪ್ರಕಾರ, ದೇಶದಾದ್ಯಂತ ತೆರೆಯಲಾಗಿರುವ ಜನಧನ್ ಖಾತೆಗಳು (no minimum balance for bank accounts) ಸೇರಿದಂತೆ ಸುಮಾರು 72 ಕೋಟಿ ಮೂಲ ಉಳಿತಾಯ ಖಾತೆಗಳಿಗೆ ಕನಿಷ್ಠ ಬ್ಯಾಲೆನ್ಸ್ ನಿಯಮ ಅನ್ವಯಿಸುವುದಿಲ್ಲ.
ಈ ಖಾತೆಗಳಲ್ಲಿ ಹಣ ಜಮೆ ಮಾಡುವುದು, ಹಣ ಹಿಂಪಡೆಯುವುದು ಹಾಗೂ ಎಟಿಎಂ ಸೇವೆಗಳನ್ನು ಬಳಸುವುದು ಮುಂತಾದ ಮೂಲ ಬ್ಯಾಂಕಿಂಗ್ ಸೇವೆಗಳಿಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಬಾರದು ಎಂಬ ನಿಯಮವೂ ಇದೆ.
ಬ್ಯಾಂಕಿಂಗ್ ಸೇವೆಗಳು ದೇಶದ ಪ್ರತಿಯೊಬ್ಬ ನಾಗರಿಕನಿಗೂ ತಲುಪಬೇಕು ಎಂಬ ಉದ್ದೇಶದಿಂದಲೇ ಸರ್ಕಾರ ಈ ಶೂನ್ಯ ಬ್ಯಾಲೆನ್ಸ್ ಖಾತೆ ವ್ಯವಸ್ಥೆಯನ್ನು ಪರಿಚಯಿಸಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕೆ ವಿರುದ್ಧವಾಗಿ ಸಾಮಾನ್ಯ ಉಳಿತಾಯ ಖಾತೆಗಳನ್ನು ಹೊಂದಿರುವ ಗ್ರಾಹಕರು ಬ್ಯಾಂಕುಗಳು ನಿಗದಿಪಡಿಸಿರುವ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳಬೇಕು.
ಆ ಮೊತ್ತವನ್ನು ನಿರ್ವಹಿಸದಿದ್ದರೆ ಬ್ಯಾಂಕುಗಳು ತಮ್ಮ ಬೋರ್ಡ್ ಅನುಮೋದಿಸಿದ ನಿಯಮಗಳು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾರ್ಗಸೂಚಿಗಳ
ಪ್ರಕಾರ ದಂಡ ವಸೂಲಿ ಮಾಡಬಹುದು. ಆದರೆ ಈ ಶುಲ್ಕಗಳು ಅತಿರೇಕವಾಗಿರಬಾರದು ಮತ್ತು ತರ್ಕಬದ್ಧವಾಗಿರಬೇಕು ಎಂದು ಹಣಕಾಸು ಸಚಿವೆ ಸ್ಪಷ್ಟಪಡಿಸಿದ್ದಾರೆ.
ಅಂದರೆ ಸಾಮಾನ್ಯ ಖಾತೆದಾರರಿಗೆ ಕನಿಷ್ಠ ಬ್ಯಾಲೆನ್ಸ್ ನಿಯಮ ಇನ್ನೂ ಅನ್ವಯವಾಗುತ್ತದೆ.
ಅಂಕಿಅಂಶಗಳ ಪ್ರಕಾರ, ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಕನಿಷ್ಠ ಮೊತ್ತ ನಿರ್ವಹಿಸದ ಕಾರಣಕ್ಕೆ ಸುಮಾರು ₹8,000
ಕೋಟಿಗೂ ಅಧಿಕ ದಂಡವನ್ನು ವಸೂಲಿ ಮಾಡಿವೆ. ಆದರೆ ಇದು ಬ್ಯಾಂಕುಗಳ ಒಟ್ಟು ಆದಾಯದಲ್ಲಿ ಕೇವಲ ಶೇ.0.23ರಷ್ಟೇ ಎಂದು ತಿಳಿಸಲಾಗಿದೆ.
ಈ ಮೊತ್ತವನ್ನು ಲಾಭಕ್ಕಾಗಿ ಅಲ್ಲದೆ ಖಾತೆ ನಿರ್ವಹಣೆಯ ವೆಚ್ಚಗಳನ್ನು ಸಮತೋಲನಗೊಳಿಸಲು ಬಳಸಲಾಗುತ್ತದೆ ಎಂದು ಬ್ಯಾಂಕುಗಳು ವಿವರಿಸಿವೆ.
ಇದರ ಜೊತೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ 2020ರ ಮಾರ್ಚ್ನಿಂದ ಉಳಿತಾಯ ಖಾತೆಗಳ ಕನಿಷ್ಠ ಬ್ಯಾಲೆನ್ಸ್ ನಿಯಮವನ್ನು ತೆಗೆದುಹಾಕಿದೆ.
2025ರಲ್ಲಿ ಇನ್ನೂ 9 ಸರ್ಕಾರಿ ಬ್ಯಾಂಕುಗಳು ಈ ದಂಡ ನಿಯಮವನ್ನು ರದ್ದುಗೊಳಿಸಿದ್ದು, ಉಳಿದ ಕೆಲವು ಬ್ಯಾಂಕುಗಳು ತಮ್ಮ ಶುಲ್ಕಗಳನ್ನು ಪರಿಷ್ಕರಿಸಿವೆ.
ಇದನ್ನು ಓದಿ : https://vijayatimes.com/government-doctors-strike-in-karnataka/