ಕೇಂದ್ರವು ಇಲ್ಲಿಯವರೆಗೂ ವಿಧಿಸಿರುವ ಎಲ್ಲಾ ಕೋವಿಡ್ ನಿರ್ಬಂಧಗಳನ್ನು ಮಾರ್ಚ್ 31 ರಂದು ತೆಗೆದು ಹಾಕಲು ನಿರ್ಧರಿಸಿದೆ. ಹೌದು, ಮಾರ್ಚ್ 31ರ ಬುಧವಾರದಂದು ಗೃಹ ವ್ಯವಹಾರಗಳ ಸಚಿವಾಲಯವು ಕೋವಿಡ್ ಸುರಕ್ಷತಾ ಕ್ರಮಗಳಿಗಾಗಿ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಇನ್ನು ಮುಂದೆ ಅನ್ವಯಿಸುವುದಿಲ್ಲ ಎಂದು ಹೇಳಿದೆ. ಆದಾಗ್ಯೂ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿರಲಿದೆ. ವಿಪತ್ತು ನಿರ್ವಹಣಾ ಕಾಯ್ದೆಯನ್ನು ಮಾತ್ರ ರಿಯಾಯಿತಿಯೇ ವಿನಃ ಮಾಸ್ಕ್ ಧರಿಸುವುದಕ್ಕಲ್ಲ ಎಂದು ಹೇಳಿದೆ.

ಕೋವಿಡ್ ನಿಯಂತ್ರಣ ಕ್ರಮಗಳಿಗಾಗಿ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಅನ್ವಯಿಸುವ ಅಗತ್ಯವಿಲ್ಲ ಎಂದು ಎಂ.ಹೆಚ್.ಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಕೋವಿಡ್ ಸುರಕ್ಷತೆಗಾಗಿ ಕೇಂದ್ರದ ಕ್ರಮಗಳು ಮಾರ್ಚ್ 31 ರಂದು ಮುಕ್ತಾಯಗೊಳ್ಳುತ್ತವೆ. ಚೀನಾ, ದಕ್ಷಿಣ ಕೊರಿಯಾ, ವಿಯೆಟ್ನಾಂ, ಫ್ರಾನ್ಸ್ ಮತ್ತು ಜರ್ಮನಿಯಲ್ಲಿ BA.2 ಒಮಿಕ್ರಾನ್ನ ರೂಪಾಂತರದ ಪ್ರಕರಣಗಳು ಹೆಚ್ಚುತ್ತಿರುವ ಮಾಹಿತಿ ದೊರೆತಿದ್ದು, ಈ ಸಮಯದಲ್ಲಿ ಕೇಂದ್ರ ದೃಢ ನಿರ್ಧಾರ ಕೈಗೊಂಡಿದೆ.
ಆದಾಗ್ಯೂ, ಈ ರೋಗವನ್ನು ಎದುರಿಸಲು ಭಾರತವು ಉತ್ತಮ ಸ್ಥಾನದಲ್ಲಿದೆ. ಹೀಗಾಗಿ ಮಾರ್ಚ್ 23ರ ಬುಧವಾರದವರೆಗೆ 1,81,89,15,234 ಜನರು ಲಸಿಕೆ ಹಾಕಿಸುವ ಮೂಲಕ ಭಾರತದ ಲಸಿಕೆ ಅಭಿಯಾನವು ಮತ್ತಷ್ಟು ಪ್ರಬಲವಾಗಿದೆ. ಕೋವಿಡ್ 19 ಲಸಿಕೆಯನ್ನು ಮೊದಲ ಕೋವಿಡ್ ವೈರಸ್ ತದನಂತರ ಎಂಟರಿಂದ 16 ವಾರಗಳ ನಂತರ ತೆಗೆದುಕೊಳ್ಳಬಹುದು.

ಪ್ರಸ್ತುತ, ಕೋವಿಶೀಲ್ಡ್ನ ಎರಡನೇ ಡೋಸ್ ಅನ್ನು ರಾಷ್ಟ್ರೀಯ ಕೋವಿಡ್-19 ವ್ಯಾಕ್ಸಿನೇಷನ್ ಸ್ಟ್ರಾಟಜಿ ಅಡಿಯಲ್ಲಿ ಮೊದಲ ಡೋಸ್ ನಂತರ 12 ರಿಂದ 16 ವಾರಗಳ ನಡುವೆ ನೀಡಲಾಗುತ್ತದೆ. ಭಾರತವು ಪ್ರಸ್ತುತ 12 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಈಗ ಲಸಿಕೆ ನೀಡುತ್ತಿದೆ ಎಂದು ವರದಿಯಲ್ಲಿ ತಿಳಿಸಿದೆ.