- ಒಂದೇ ವರ್ಷದಲ್ಲಿ 4.8 ಲಕ್ಷ ಅಪಘಾತ, ದಿನಕ್ಕೆ 473 ಸಾ*
- ಸಾ*ನ ಪ್ರಮಾಣ 2022ಕ್ಕೆ ಹೋಲಿಸಿದರೆ ಏರಿಕೆ
- ಕರ್ನಾಟಕ 5ನೇ ಸ್ಥಾನ
ಭಾರತದಲ್ಲಿ ರಸ್ತೆ ಅಪಘಾತಗಳ(Road accidents) ಸಂಖ್ಯೆಯೇ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಅದು ಈಗ ಗಂಭೀರ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಯಾಗಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಬಿಡುಗಡೆ ಮಾಡಿದ 2023ರ ಅಂಕಿಅಂಶಗಳು ಈ ದುರಂತದ ನಿಜವಾದ ಚಿತ್ರವನ್ನು ತೋರಿಸುತ್ತವೆ.ವರದಿ ಪ್ರಕಾರ,
2023ರಲ್ಲಿ ದೇಶಾದ್ಯಂತ 4,80,583 ರಸ್ತೆ ಅಪಘಾತಗಳು ದಾಖಲಾಗಿವೆ. ಇವುಗಳಲ್ಲಿ 1,72,000 ಕ್ಕೂ ಹೆಚ್ಚು ಜನರು ಸಾ*ಗೀಡಾಗಿದ್ದಾರೆ. ಅಂದರೆ, ಸರಾಸರಿ ದಿನಕ್ಕೆ 473 ಜನರು ರಸ್ತೆಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಅಂಕಿಅಂಶಗಳನ್ನು ತಾಸಿನ ಲೆಕ್ಕದಲ್ಲಿ ನೋಡುವುದಾದರೆ, ಪ್ರತಿ ಗಂಟೆಗೆ 20ಕ್ಕೂ ಹೆಚ್ಚು ಜೀವಗಳು ರಸ್ತೆಗಳಲ್ಲಿ ಪ್ರಾಣ ಬಿಟ್ಟಿದ್ದಾರೆ.
ಇನ್ನು ಇದು ಕೇವಲ ಸಂಖ್ಯೆಗಳ ವಿಷಯವಲ್ಲ – ಪ್ರತಿಯೊಂದು ಸಾವೂ ಒಂದು ಕುಟುಂಬದ ಕನಸುಗಳನ್ನು, ಮಕ್ಕಳ ಭವಿಷ್ಯವನ್ನು ಹಾಗೂ ವೃದ್ಧರ ಆರೈಕೆಯನ್ನು ಕುಸಿಯುವಂತೆ ಮಾಡುತ್ತಿದೆ.
2022ರ ಹೋಲಿಕೆಯಲ್ಲಿ 2023ರಲ್ಲಿ ಅಪಘಾತಗಳ ಸಂಖ್ಯೆ 4.2% ಹೆಚ್ಚಾಗಿದೆ, ಸಾ*ನ ಸಂಖ್ಯೆ 2.6% ಹೆಚ್ಚಳ ಕಂಡಿದೆ. ಇದು ಸುರಕ್ಷತಾ ಅಭಿಯಾನಗಳು, ಜಾಗೃತಿ ಕಾರ್ಯಕ್ರಮಗಳು ನಡೆದಿದ್ದರೂ ಸಾಕಷ್ಟು ಪರಿಣಾಮ
ಬೀರುವಂತಿಲ್ಲ ಎಂಬುದನ್ನು ತೋರಿಸುತ್ತದೆ.ಹೆಚ್ಚಿನ ಸಾ*ಗಳು ಪಾದಚಾರಿಗಳು, ಸೈಕ್ಲಿಸ್ಟ್ಗಳು ಮತ್ತು ದ್ವಿಚಕ್ರ ವಾಹನ ಸವಾರರು ಸೇರಿದಂತೆ ದುರ್ಬಲ ರಸ್ತೆಗಳಿಂದಾಗಿ ಒಟ್ಟಾರೆ ಸಾ*ನಲ್ಲಿ ಶೇಕಡಾ 68ರಷ್ಟು ಏರಿದೆ.
ಇದರಲ್ಲಿ ಮಾತ್ರ 35,000ಕ್ಕೂ ಹೆಚ್ಚು ಪಾದಚಾರಿಗಳು 2023ರಲ್ಲಿ ತಮ್ಮ ಜೀವ ಕಳೆದುಕೊಂಡಿದ್ದಾರೆ.

ಇನ್ನು ಒಟ್ಟಾರೆ ಅಪಘಾತಗಳಲ್ಲಿ:
- 31.2% (1,50,177) ರಾಷ್ಟ್ರೀಯ ಹೆದ್ದಾರಿಗಳಲ್ಲಿ
- 22% (1,05,622) ರಾಜ್ಯ ಹೆದ್ದಾರಿಗಳಲ್ಲಿ
- 46.8% (2,24,744) ಇತರ ರಸ್ತೆಗಳಲ್ಲಿ ನಡೆದಿವೆ.
ಇದರರ್ಥ ನೀವು ಯಾವ ರೀತಿಯ ರಸ್ತೆಗಳಲ್ಲಿ ಪ್ರಯಾಣಿಸಿದರೂ ಅಪಾಯ ಅಡಗಿದೆ. ವಿಶೇಷವಾಗಿ ಹೆದ್ದಾರಿಗಳಲ್ಲಿ ಹೆಚ್ಚಿನ ವೇಗ ಮತ್ತು ನಿರ್ಲಕ್ಷ್ಯವೇ ಅಪಘಾತಗಳಿಗೆ ಕಾರಣವಾಗುತ್ತವೆ.
ಅಪಘಾತಗಳು ಹಾಗೂ ಸಾವುಗಳ ದೃಷ್ಟಿಯಿಂದ ಕೆಲವು ರಾಜ್ಯಗಳ ಮಾಹಿತಿ ಇಲ್ಲಿ ನೀಡಲಾಗಿದೆ.
- ತಮಿಳುನಾಡು: 67,213 ಅಪಘಾತಗಳೊಂದಿಗೆ ಮೊದಲ ಸ್ಥಾನ.
- ಕರ್ನಾಟಕ: 43,440 ಅಪಘಾತಗಳೊಂದಿಗೆ 5ನೇ ಸ್ಥಾನ.
- ಗುಜರಾತ್: 16,349 ಅಪಘಾತಗಳೊಂದಿಗೆ 10ನೇ ಸ್ಥಾನ.
ಹೆಚ್ಚು ಸಾವುಗಳು ಆಗಿರುವ ರಾಜ್ಯಗಳೆಂದರೆ: - ಉತ್ತರ ಪ್ರದೇಶ: 23,652 ಸಾವುಗಳೊಂದಿಗೆ 1ನೇ ಸ್ಥಾನ.
- ಕರ್ನಾಟಕ: 12,321 ಸಾವುಗಳೊಂದಿಗೆ 5ನೇ ಸ್ಥಾನ.
- ತೆಲಂಗಾಣ: 7,660 ಸಾವುಗಳೊಂದಿಗೆ 10ನೇ ಸ್ಥಾನ.
ಇದರರ್ಥ ಕೆಲ ರಾಜ್ಯಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚು, ಮತ್ತೆ ಕೆಲ ರಾಜ್ಯಗಳಲ್ಲಿ ಸಾವುಗಳ ಪ್ರಮಾಣವೇ ಹೆಚ್ಚಾಗಿದೆ. ದಕ್ಷಿಣ ಭಾರತದ ರಾಜ್ಯಗಳು – ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣ – ಎರಡೂ ಅಂಕಿಅಂಶಗಳಲ್ಲಿ ಗಮನಾರ್ಹ ಸ್ಥಾನದಲ್ಲಿವೆ.
ಇನ್ನು ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿ ತಿಳಿದುಬಂದಿರುವವು:
- ಅತಿ ವೇಗದಲ್ಲಿ ವಾಹನ ಚಲಾಯಿಸುವುದು
- ಮದ್ಯಪಾನದ ನಂತರ ಚಾಲನೆ
- ಹೆಲ್ಮೆಟ್ ಅಥವಾ ಸೀಟ್ಬೆಲ್ಟ್ ಬಳಸದೇ ಹೋಗುವುದು
- ಸಂಚಾರ ನಿಯಮಗಳ ನಿರ್ಲಕ್ಷ್ಯ
- ರಸ್ತೆಯ ಮೂಲಸೌಕರ್ಯದ ಕೊರತೆ
- ಹೆಚ್ಚು ಕಠಿಣ ಕಾನೂನು ಜಾರಿ
- ರಸ್ತೆ ಮೂಲಸೌಕರ್ಯ ಸುಧಾರಣೆ
- ತಂತ್ರಜ್ಞಾನ ಬಳಕೆ (ಸಿಸಿಟಿವಿ, ಸ್ಪೀಡ್ ಮಾನಿಟರಿಂಗ್)
ಸಾಮಾನ್ಯವಾಗಿ ಒಂದು ಕ್ಷಣದ ಅಜಾಗರೂಕತೆಯೇ ಕುಟುಂಬವನ್ನು ದುರಂತದತ್ತ ಕೊಂಡೊಯ್ಯುತ್ತದೆ. ಭಾರತ ಸರ್ಕಾರವು(Government of India) 2030ರೊಳಗೆ ರಸ್ತೆ ಅಪಘಾತದಿಂದಾಗುವ ಸಾ* ಮತ್ತು ಗಾಯಗಳ ಸಂಖ್ಯೆಯನ್ನು ಕನಿಷ್ಠ 50% ಕಡಿಮೆ ಮಾಡುವ ಗುರಿ ಹೊಂದಿದೆ.
ಇದನ್ನು ಓದಿ : BMTC ಬಸ್ ಚಾಲಕರೇ ರ್ಯಾಶ್ ಡ್ರೈವ್ ಮಾಡುವ ಮುನ್ನ ಹುಶಾರ್.
ಹಾಗಾಗಿ. ಮುಂದಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳು ಅಗತ್ಯವೆಂದು ಪರಿಣಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.