- ಇದು ಕಳವಳಕಾರಿ ದಾಳಿಯೆಂದು ಹೇಳಿದ ಪಾಕಿಸ್ತಾನ
- ಪ್ರವಾಸಿಗರ ಸಾವಿಗೆ ಪಾಕಿಸ್ತಾನ ಸಂತಾಪ (Pakistan mourns death of tourists)
- ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಕೆ
Islamabad: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಬಲಿತೆಗೆದುಕೊಂಡ ಪ್ರವಾಸಿಗರ ಸಾವಿಗೆ ಪಾಕಿಸ್ತಾನ ಸಂತಾಪ ಸೂಚಿಸಿದೆ.ಜಮ್ಮು-ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ (Anantnag district) ನಡೆದ ದಾಳಿಯಲ್ಲಿ ಪ್ರವಾಸಿಗರು ಉಗ್ರರ ಗುಂಡಿನ ದಾಳಿಗೆ ಮೃತಪಟ್ಟ ಬಗ್ಗೆ ನಾವು ಕಳವಳ ವ್ಯಕ್ತಪಡಿಸುತ್ತೇವೆ.
ಮೃತರ ಕುಟುಂಬಸ್ಥರು ಮತ್ತು ಸಮೀಪ ಬಂಧುಗಳಿಗೆ (Close relatives) ಸಂತಾಪ ಸೂಚಿಸುತ್ತೇವೆ, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ ಎಂದು ದಾಳಿಯ ಕುರಿತು ಮಾಧ್ಯಮ ಪ್ರಶ್ನೆಗಳಿಗೆ (Media queries) ಪ್ರತಿಕ್ರಿಯಿಸಿದ ವಿದೇಶಾಂಗ ಕಚೇರಿಯ ವಕ್ತಾರರು ತಿಳಿಸಿದ್ದಾರೆ.
ಇನ್ನು ಈ ಕುರಿತು ಖಾಸಗಿ ಚಾನಲ್ಗೆ (Private channel) ನೀಡಿರುವ ಸಂದರ್ಶನದಲ್ಲಿ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸೀಫ್ (Khawaja Asif) ಆರೋಪವನ್ನು ನಿರಾಕರಿಸಿದ್ದಾರೆ.ಪಹಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ಪಾಕಿಸ್ತಾನಕ್ಕೂ (Pakistan) ಯಾವುದೇ ನಂಟು ಇಲ್ಲ. ನಮ್ಮ ಮೇಲೆ ಆರೋಪ ಹೊರಿಸಬೇಡಿ. ಭಯೋತ್ಪಾದನೆಯನ್ನು ನಾವು ಬೆಂಬಲಿಸುವುದಿಲ್ಲ.

ಈ ಸಂಬಂಧ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಹೇಳಿದ್ದಾರೆ.ಈ ನಡುವೆ ಭಾರತದಲ್ಲೇ ಆಂತರಿಕವಾಗಿ ಅಶಾಂತಿ ಇದೆ (Internal unrest) ಎಂದು ಅವರು ಬೊಟ್ಟು ಮಾಡಿದ್ದಾರೆ. ಮಣಿಪುರ ಸೇರಿದಂತೆ ನಾಗಾಲ್ಯಾಂಡ್ನಿಂದ (Nagaland) ಕಾಶ್ಮೀರದವರೆಗೆ ಭಾರತದ ಸರ್ಕಾರದ ವಿರುದ್ಧ ಹೋರಾಟ ನಡೆಯುತ್ತಿದೆ ಎಂದು ಅವರು ಹೇಳಿದರು
ಏತನ್ಮಧ್ಯೆ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗಾಗಿ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಸಂತಾಪಗಳನ್ನು ಸೂಚಿಸಿದೆ. ಅನಂತ್ನಾಗ್ ಜಿಲ್ಲೆಯಲ್ಲಿ (Anantnag district) ನಡೆದ ದಾಳಿಯಲ್ಲಿ ಪ್ರವಾಸಿಗರು ಮೃತಪಟ್ಟಿರುವುದು ಅತ್ಯಂತ ಕಳವಳಕಾರಿಯಾಗಿದೆ. ಮೃತರ ಸಂಬಂಧಿಕರಿಗೆ ನಾವು ಸಂತಾಪವನ್ನು ಸೂಚಿಸುತ್ತೇವೆ.
ಇದನ್ನೂ ಓದಿ: http://ಪಹಲ್ಗಾಮ್ ಅಲ್ಲಿ ಭಯೋತ್ಪಾದಕರ ಅಟ್ಟಹಾಸ: ಜೀವ ಕಳೆದುಕೊಂಡ ಮೂವರು ಕನ್ನಡಿಗರು,ಸಹಾಯವಾಣಿ ಆರಂಭಿಸಿದ ಸರ್ಕಾರ
ಗಾಯಗೊಂಡವರು ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಪಾಕ್ ವಿದೇಶಾಂಗ (Pakistan mourns death of tourists) ಸಚಿವಾಲಯದ ವಕ್ತಾರ ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ (Tourists in Pahalgam) ಮೇಲೆ ಉಗ್ರರು ಮಂಗಳವಾರ ನಡೆಸಿದ ಗುಂಡಿನ ದಾಳಿಯಲ್ಲಿ 26 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು (Many were injured) . 2019ರ ಪುಲ್ವಾಮಾದ ಬಳಿಕ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ