Delhi: ದಿನದಿಂದ ದಿನಕ್ಕೆ ದೆಹಲಿಯಲ್ಲಿ (Parking Fee Increase) ವಾಯುಗುಣಮಟ್ಟ ಅಪಾಯಮಟ್ಟಕ್ಕೆ ತಲುಪುತ್ತಿದ್ದು, ಈ ಹಿನ್ನೆಲೆ ದೆಹಲಿ ಸರ್ಕಾರವು ಮಾಲಿನ್ಯ ನಿಯಂತ್ರಣಕ್ಕಾಗಿ ಹಲವಾರು
ಕಠಿಣ ಕ್ರಮಗಳನ್ನು ತುರ್ತಾಗಿ ಜಾರಿಗೊಳಿಸುತ್ತಿದೆ. ಹಾಗಾಗಿ ಮತ್ತೊಂದು ಹೊಸ ಕಠಿಣ ಕ್ರಮದ ಮೂಲಕ ಮಾಲಿನ್ಯ ನಿಯಂತ್ರಣಕ್ಕೆ (Parking Fee Increase) ಕ್ರಮಕೈಗೊಳ್ಳಲಾಗುತ್ತಿದೆ.

ದೀಪಾವಳಿ ಪಟಾಕಿಯಿಂದಾಗಿ (Crackers) ವಾಹನಗಳ ಮಾಲಿನ್ಯದ ಜೊತೆಗೆ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) 390ರಿಂದ 435ಕ್ಕೆ ತಲುಪಿದ್ದು, ಅತಿಯಾದ ಮಾಲಿನ್ಯದಿಂದಾಗಿ ಜನರರಲ್ಲಿ
ಉಸಿರಾಟ ತೊಂದರೆ, ಕಣ್ಣುಗಳಲ್ಲಿ ಕಿರಿಕಿರಿ ಜೊತೆಗೆ ಹಲವಾರು ರೀತಿಯ ಆರೋಗ್ಯ (Parking Fee Increase) ಸಮಸ್ಯೆ ಎದುರಿಸುತ್ತಿದ್ದಾರೆ.
ಈಗಾಗಲೇ ಹಲವಾರು ಕಠಿಣ ಕ್ರಮಗಳನ್ನು ಮಾಲಿನ್ಯ ನಿಯಂತ್ರಣಕ್ಕಾಗಿ ತಕ್ಷಣವೇ ಜಾರಿಗೆ ಬರುವಂತೆ ಕೈಗೊಳ್ಳಲಾಗಿದ್ದು, ದೆಹಲಿ ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಬಳಕೆಯ ವಾಹನಗಳ ಪಾರ್ಕಿಂಗ್
(Parking) ದರವನ್ನು ಏರಿಕೆ ಮಾಡಲಾಗಿದೆ. ದುಬಾರಿ ಶುಲ್ಕದಿಂದಾಗಿ ಜನ ಅನಗತ್ಯವಾಗಿ ಸ್ವಂತ ವಾಹನಗಳ ಬಳಕೆಯನ್ನು ಕಡಿಮೆ ಮಾಡಬಹುದೆಂದು ನೀರಿಕ್ಷಿಸಲಾಗಿದ್ದು, ದುಬಾರಿ ಪಾರ್ಕಿಂಗ್ ಶುಲ್ಕವು
ವಾಹನ ಮಾಲೀಕರಿಗೆ ತಲೆಬಿಸಿಯಾಗಿದೆ.
ಕಾರುಗಳಿಗೆ ಪ್ರತಿ ಗಂಟೆಗೆ ಪಾರ್ಕಿಂಗ್ ಶುಲ್ಕ ಹೆಚ್ಚಳಕ್ಕೂ ಮುನ್ನ ರೂ. 20 ರಿಂದ ಆರಂಭದಿಂದ ಪ್ರತಿ ದಿನಕ್ಕೆ ಗರಿಷ್ಠ ರೂ. 100 ಶುಲ್ಕ ವಿಧಿಸಲಾಗುತ್ತಿತ್ತು. ಹಾಗೆಯೇ ದ್ವಿಚಕ್ರ ವಾಹನಗಳಿಗೆ ಪ್ರತಿ ಗಂಟೆಗೆ
ರೂ. 10 ರಂತೆ ಪ್ರತಿ ದಿನಕ್ಕೆ ಗರಿಷ್ಠ ರೂ. 50 ಶುಲ್ಕ ವಿಧಿಸಲಾಗುತ್ತಿತ್ತು.

ಆದರೆ ಶುಲ್ಕ ಹೆಚ್ಚಳದ ನಂತರ ಕಾರುಗಳಿಗೆ ಪ್ರತಿ ಗಂಟೆಗೆ ರೂ. 40 ರಿಂದ ಗರಿಷ್ಠ ಒಂದು ದಿನಕ್ಕೆ ರೂ. 200 ಮತ್ತು ದ್ವಿಚಕ್ರ ವಾಹನಗಳಿಗೆ (Two Wheeler) ಪ್ರತಿ ಗಂಟೆಗೆ ರೂ. 20 ರಿಂದ ಪ್ರತಿ ದಿನಕ್ಕೆ
ಗರಿಷ್ಠ ರೂ. 200 ಶುಲ್ಕ ವಿಧಿಸಲಾಗುತ್ತಿದೆ. ಈ ಮೂಲಕ ಪಾರ್ಕಿಂಗ್ ಶುಲ್ಕವು ಈ ಹಿಂದಿಗಿಂತಲೂ ಶೇ. 300 ರಷ್ಟು ಹೆಚ್ಚಳವಾದಂತಾಗಿದೆ.
ದೆಹಲಿಯಲ್ಲಿ 41 ಪಾರ್ಕಿಂಗ್ ಸ್ಥಳಗಳನ್ನು ಪಾಲಿಕೆಯೇ ನೇರವಾಗಿ ನಿರ್ವಹಣೆ ಮಾಡುತ್ತಿದ್ದು, ಸದ್ಯ 91 ಸಾರ್ವಜನಿಕ ಬಳಕೆಯ ಪಾರ್ಕಿಂಗ್ ಸ್ಥಳಗಳು ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಇನ್ನುಳಿದ ಪಾರ್ಕಿಂಗ್
ಸ್ಥಳಗಳನ್ನು ವಿವಿಧ ಏಜೆನ್ಸಿಗಳು (Agency) ನಿರ್ವಹಿಸುತ್ತಿದ್ದು, ರಾಜಪಥ್ ನಿಂದ ಎಮ್ಸ್, ಸರೋಜಿನಿ ನಗರ್ ಮಾರ್ಕೆಟ್, ಖಾನ್ ಮಾರ್ಕೆಟ್, ಲೂಧಿ ರೋಡ್ ಮತ್ತು ಐಎನ್ಎ (INA) ಮತ್ತು ಸಫ್ದರ್ಜಂಗ್
ಭಾಗಗಳಲ್ಲಿ ಹೆಚ್ಚಿನ ಪಾರ್ಕಿಂಗ್ ಸ್ಥಳಗಳಿವೆ.
ಈ ಕಾರಣದಿಂದ ಈಗಾಗಲೇ ದೆಹಲಿಯಲ್ಲಿ ಬೆಸ-ಸಮ ಮೂಲಕ ಖಾಸಗಿ ವಾಹನಗಳ ಬಳಕೆಗೆ ಕಡಿವಾಣ ಹಾಕುವುದರ ಜೊತೆಗೆ ಟ್ರಕ್ ಗಳ (Truck) ಪ್ರವೇಶವನ್ನು ನಿಷೇಧಿಸಲಾಗಿದ್ದು, ಅಗತ್ಯ ಸರಕುಗಳನ್ನು
ಸಾಗಿಸುವ ಮತ್ತು ಅಗತ್ಯ ಸೇವೆಗಳನ್ನು ಒದಗಿಸುವ ಎಲ್ಎನ್ ಜಿ (LNG), ಸಿಎನ್ ಜಿ ಮತ್ತು ಎಲೆಕ್ಟ್ರಿಕ್ ಟ್ರಕ್ಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಮಾದರಿಯ ವಾಣಿಜ್ಯ ವಾಹನಗಳ ಸಂಚಾರಕ್ಕೆ
ಬ್ರೇಕ್ (Break) ಹಾಕಲಾಗಿದೆ.
ಇದನ್ನು ಓದಿ: ಉಡುಪಿಯ ನಾಲ್ವರ ಹತ್ಯೆ ಪ್ರಕರಣ: ಕಡೆಗೂ ಪೋಲೀಸರ ಬಲೆಗೆ ಬಿದ್ದ ಹಂತಕ
- ಭವ್ಯಶ್ರೀ ಆರ್.ಜೆ