ಸೋಲಾಪರ ಆ 27 : ಗಾಂಜಾ ಬೆಳೆಯಲು ಅನುಮತಿ ನೀಡಿ ಎಂದು ರೈತನೊಬ್ಬ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ ವಿಚಿತ್ರ ಘಟನೆ ಮಹಾರಾಷ್ಟ್ರ ರಾಜ್ಯದ ಸೋಲಾಪುರ ಜಿಲ್ಲೆಯಲ್ಲಿ ನಡೆದಿದೆ.
ಸೋಲಾಪುರ ಜಿಲ್ಲೆಯ ಮೊಹಳ ತಾಲೂಕಿನ ಶಿರಾಪೂರ ಗ್ರಾಮದ ರೈತನೊಬ್ಬ ಇಂತಹ ವಿಚಿತ್ರ ಬೇಡಿಕೆಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ ಜೊತೆಗೆ ಪತ್ರದಲ್ಲಿ ನನಗೆ 2 ಎಕರೆ ಜಮೀನು ಇದ್ದು, ಅಲ್ಲಿ ಏನೇ ಕೃಷಿ ಮಾಡಿದರೂ ಕೃಷಿ ಬೆಳೆಗಳಿಗೆ ಮಾಡಿದ ವೆಚ್ಚದಷ್ಟು ಸಹಿತ ಪ್ರತಿಫಲ ದೊರೆಯುತ್ತಿಲ್ಲ. ಆದರೆ ಕೃಷಿಗಾಗಿ ಮಾಡಬೇಕಾದ ವೆಚ್ಚಗಳು ಮಾತ್ರ ಪ್ರತಿ ವರ್ಷ ಹೆಚ್ಚಾಗುತ್ತಲೆ ಇದೆ. ಕಬ್ಬು ಬೆಳೆದರೆ ಕಾರ್ಖಾನೆಗಳು ಸರಿಯಾದ ಸಮಯಕ್ಕೆ ಬಿಲ್ ಪಾವತಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ನನ್ನ 2 ಎಕರೆ ಜಮೀನಿನಲ್ಲಿ ಗಾಂಜಾ ಬೆಳೆಯಲು ಉದ್ದೇಶಿಸಿದ್ದು, ಇದಕ್ಕಾಗಿ ಈ ಲಿಖಿತ ಮನವಿಯನ್ನು ನೀಡುತ್ತಿದ್ದೇನೆ. ಎಂಬ ವಿಚಿತ್ರ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಬರೆದಿದ್ದು, ಅವರಿಂದ ಏನು ಉತ್ತರ ಬರಲಿದೆ ಎಂಬುವುದನ್ನು ಕಾದು ನೋಡಬೇಕಿದೆ.