ಬೆಂಗಳೂರು, ಮಾ. 01: ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮೈತ್ರಿ ಗೊಂದಲ ಸದ್ಯಕ್ಕೆ ಬಗೆಹರಿಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ.
ಪಾಲಿಕೆ ಮೈತ್ರಿ ಕುರಿತು ಅಸಮಾಧಾನ ಹೊರಹಾಕಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕೋಪ ಇನ್ನೂ ತಣ್ಣಗಾಗದಂತೆ ಕಾಣುತ್ತಿಲ್ಲ. ಹೀಗಾಗಿ ಮೈತ್ರಿ ಕುರಿತು ಭುಗಿಲೆದ್ದಿರುವ ಅಸಮಾಧಾನದ ಬೆಂಕಿ, ಪಕ್ಷದ ಮಹತ್ವದ ಕಾರ್ಯಕ್ರಮಗಳಿಗೂ ತಟ್ಟತ್ತಾ? ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಪಾಲಿಕೆ ಮೈತ್ರಿಯಿಂದ ಮುಜುಗರಕ್ಕೀಡಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಮಾ.3ರಿಂದ ಆರಂಭವಾಗುವ
ಕಾಂಗ್ರೆಸ್ ಪಾದಯಾತ್ರೆಯಿಂದ ದೂರವೇ ಉಳಿಯುವ ಬಗ್ಗೆ ಸಿದ್ದರಾಮಯ್ಯ ಚಿಂತನೆ ಮಾಡಿದ್ದಾರೆ ಎನ್ನಲಾಗಿದೆ.
ಶಾಸಕ ತನ್ವೀರ್ ಸೇಠ್ ವಿರುದ್ದ ಕ್ರಮ ಜರುಗಿಸದಿದ್ದರೆ ಮಾರ್ಚ್ 3ರಂದು ನಡೆಯಲಿರುವ ಪಾದಯಾತ್ರೆಗೆ ಸಿದ್ದರಾಮಯ್ಯ ಗೈರಾಗುತ್ತಾರೆ ಎಂಬ ಮಾತುಗಳು ಕೈ ಪಾಳಯದಲ್ಲಿ ಕೇಳಿ ಬರುತ್ತಿದೆ. ಈ ಕುರಿತಂತೆ ದೆಹಲಿಯಲ್ಲಿ ಕೆ.ಸಿ. ವೇಣುಗೋಪಾಲ ಅವರಿಗೂ ಇದೇ ಮಾತನ್ನು ಹೇಳಿರುವ ಸಿದ್ದರಾಮಯ್ಯ, ಕೆಲವರು ಪಕ್ಷ ತಮ್ಮದೊಂದೆ ಎಂಬಂತೆ ವರ್ತಿಸುತ್ತಿದ್ದಾರೆ, ಅವರೇ ಸಂಘಟನೆ ಮಾಡಿಕೊಳ್ಳಲಿ ಎಂದು ವೇಣುಗೋಪಾಲ್ ಅವರ ಎದುರು ಆಕ್ರೋಶ ಹೊರ ಹಾಕಿದ್ದಾರೆ.