ಕರ್ನಾಟಕ ರತ್ನ(Karnataka Ratna), ಪವರ್ ಸ್ಟಾರ್(PowerStar) ಪುನೀತ್ ರಾಜ್ ಕುಮಾರ್(Puneeth Rajkumar) ಅವರನ್ನು ಸಾಹಸ ನಿರ್ದೇಶಕ(Stunt Master) ರವಿ ವರ್ಮಾ(Ravi Varma) ಅವರು ಸಿನಿಮಾದ ಒಂದು ದೃಶ್ಯವನ್ನು ನೆನದು ಭಾವುಕರಾಗಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಹುಡುಗರು ಚಿತ್ರದಲ್ಲಿ ಮೂಡಿಬಂದಿರುವ ಸಾಹಸ ದೃಶ್ಯದಲ್ಲಿ ನಡೆದುಕೊಂಡ ರೀತಿ ಇಂದಿಗೂ ನನ್ನ ಕಣ್ಣಿನಲ್ಲಿ ಕಟ್ಟಿದಂತಿದೆ.
ಕನ್ನಡಾಭಿಮಾನಿಗಳ ಆರಾಧ್ಯದೈವ ಅಪ್ಪು(Appu) ಸರ್ ಅವರಿಗೆ ಸರಿಸಾಟಿ ಯಾರು ಇಲ್ಲ, ಅದಕ್ಕೆ ಅವರು ಇಂದಿಗೂ ದೇವರಾಗಿ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿರುವುದು.
ಪುನೀತ್ ಸರ್ ಜೊತೆ ನಾನು ಇಲ್ಲಿಯವರೆಗೂ 13 ಸಿನಿಮಾಗಳಲ್ಲಿ ಸಾಹಸ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಇದೇ ಮಾರ್ಚ್ 17 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಜೇಮ್ಸ್(James) ಚಿತ್ರಕ್ಕೂ ನಾನೇ ಸಾಹಸ ನಿರ್ದೇಶನ ಮಾಡಿದ್ದೇನೆ. ಪುನೀತ್ ಸರ್ ಅವರೊಟ್ಟಿಗೆ ಕಳೆದಿರುವ ಸಾಕಷ್ಟು ಒಳ್ಳೆ ಕ್ಷಣಗಳಲ್ಲಿ ಈ ಒಂದು ಸಂಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಹುಡುಗರು ಸಿನಿಮಾ ಸಾಹಸ ನಿರ್ದೇಶನ ಮಾಡಬೇಕಾದರೆ, ನಟ ಲೂಸ್ ಮಾದ ಯೋಗಿ ಕಾರನ್ನು ಹತ್ತಲು ಓಡಿ ಬರುವ ಸನ್ನಿವೇಶ ಇತ್ತು. ಆ ಸಮಯದಲ್ಲಿ ಲೂಸ್ ಮಾದ ಯೋಗಿ ಅವರ ಕಿವಿಗೆ ನಿಜಕ್ಕೂ ಪೆಟ್ಟು ಬಿತ್ತು!