ಇರಾನ್–ಇಸ್ರೇಲ್ ಸಂಘರ್ಷದ ಹೊಡೆತ: ಬಳ್ಳಾರಿ (Production declines Bellary jeans industry) ಜೀನ್ಸ್ ಕಾರ್ಖಾನೆಗಳಿಗೆ ತೊಂದರೆ
ರಂಜಾನ್–ಯುಗಾದಿ ಬೇಡಿಕೆ ಇದ್ದರೂ ಉತ್ಪಾದನೆ ಕುಗ್ಗಿ ಸಂಕಷ್ಟ
ರಾಸಾಯನಿಕ ಪೂರೈಕೆ ನಿಂತು ಕಾರ್ಖಾನೆಗಳ ಮೇಲೆ ಮುಚ್ಚುವ ಭೀತಿ
Bellary: ಇರಾನ್–ಇಸ್ರೇಲ್ ನಡುವಿನ ಸಂಘರ್ಷವು ಜಾಗತಿಕ ಮಟ್ಟದಲ್ಲಿ ಮಾತ್ರವಲ್ಲದೆ, ಕರ್ನಾಟಕದ (Production declines Bellary jeans industry) ಸ್ಥಳೀಯ ಉದ್ಯಮಗಳ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ.
ಅದರಲ್ಲೂ ಬಳ್ಳಾರಿಯ ಪ್ರಸಿದ್ಧ ಜೀನ್ಸ್ ಉದ್ಯಮವು ಈ ಯುದ್ಧದ ಪರಿಣಾಮದಿಂದ ತತ್ತರಿಸಿ ಹೋಗಿದೆ. ಗಲ್ಫ್ ರಾಷ್ಟ್ರಗಳಿಂದ ಬರುತ್ತಿದ್ದ ಕಚ್ಚಾ ವಸ್ತುಗಳ ಪೂರೈಕೆ ಸ್ಥಗಿತಗೊಂಡಿದ್ದು, ಉತ್ಪಾದನೆ ಮೇಲೆ ನೇರ ಪರಿಣಾಮ ಬೀರಿದೆ. ಉದ್ಯಮಿಗಳು ಮಾತ್ರವಲ್ಲದೆ, ಸಾವಿರಾರು ಕಾರ್ಮಿಕರ ಬದುಕಿಗೂ ಈ ಪರಿಸ್ಥಿತಿ ಆತಂಕವನ್ನುಂಟು ಮಾಡುತ್ತಿದೆ.
ಜೀನ್ಸ್ ತಯಾರಿಕೆಯಲ್ಲಿ ಪ್ರಮುಖ ಪಾತ್ರವಹಿಸುವ ರಾಸಾಯನಿಕಗಳ ಕೊರತೆ ಉದ್ಯಮವನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.

ಹೈಡ್ರೋಜನ್ ಪೆರಾಕ್ಸೈಡ್ (Hydrogen Peroxide) , ಸೋಡಿಯಂ ಹೈಪೋಕ್ಲೋರೈಟ್ ಹಾಗೂ ಪೊಟ್ಯಾಸಿಯಮ್ ಪರ್ಮಾಂಗನೇಟ್ (Potassium Permanganate) ಮುಂತಾದ ಪ್ರಮುಖ ರಾಸಾಯನಿಕಗಳು ಗಲ್ಫ್ ದೇಶಗಳಿಂದ ಸಾಗಣೆ ಆಗುತ್ತಿದ್ದು, ಯುದ್ಧದ ಹಿನ್ನೆಲೆಯಲ್ಲಿ ಹಡಗು ಸಂಚಾರವೇ ಸ್ಥಗಿತಗೊಂಡಿದೆ.
ಇದರ ಪರಿಣಾಮವಾಗಿ, ಜೀನ್ಸ್ ಬಟ್ಟೆಗಳಿಗೆ ಅಗತ್ಯವಾದ ಬಣ್ಣ ಹಾಗೂ ಲೇಪನ ಪ್ರಕ್ರಿಯೆಗಳು ನಿಧಾನಗೊಂಡಿದ್ದು, ಉತ್ಪಾದನೆ ಶೇ.50ರಷ್ಟು ಕುಸಿತ ಕಂಡಿದೆ.
ಇದರಿಂದಾಗಿ ಮಾರುಕಟ್ಟೆಯಲ್ಲಿ ಕೆಮಿಕಲ್ (Chemical) ಬೆಲೆಗಳು ಮೂರ್ನಾಲ್ಕು (Production declines Bellary jeans industry) ಪಟ್ಟು ಏರಿಕೆಯಾಗಿದೆ. ಮೊದಲು ಕೆಜಿಗೆ ಸುಮಾರು 40 ರೂಪಾಯಿಗೆ ಸಿಗುತ್ತಿದ್ದ ರಾಸಾಯನಿಕಗಳು ಈಗ 150 ರೂಪಾಯಿಗೂ ಹೆಚ್ಚು ಬೆಲೆಯಲ್ಲಿ ಮಾರಾಟವಾಗುತ್ತಿವೆ.
ಸ್ಥಳೀಯವಾಗಿ ಲಭ್ಯವಿರುವ ಸ್ವಲ್ಪ ಸ್ಟಾಕ್ನ್ನೇ ವ್ಯಾಪಾರಿಗಳು ದುಬಾರಿ ದರದಲ್ಲಿ ಮಾರಾಟ ಮಾಡುತ್ತಿರುವುದು ಉದ್ಯಮಿಗಳಿಗೆ ಮತ್ತಷ್ಟು ಹೊರೆ ಆಗಿದೆ. ಈ ಬೆಲೆ ಏರಿಕೆಯಿಂದ ಉತ್ಪಾದನಾ ವೆಚ್ಚ ಹೆಚ್ಚಿದ್ದು, ಲಾಭಾಂಶ ಕಡಿಮೆಯಾಗುತ್ತಿದೆ.
ಇದಕ್ಕೂ ಮುನ್ನವೇ ಕಾರ್ಮಿಕರ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದ ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಇದು ಮತ್ತೊಂದು ದೊಡ್ಡ ಹೊಡೆತವಾಗಿದೆ.
ಯುಗಾದಿ ಮತ್ತು ರಂಜಾನ್ ಹಬ್ಬದ ಸಂದರ್ಭದಲ್ಲಿ ಸಾಮಾನ್ಯವಾಗಿ ವಿದೇಶಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವ ಜೀನ್ಸ್ ಉತ್ಪನ್ನಗಳು ಈ ಬಾರಿ ಸರಿಯಾಗಿ ಪೂರೈಸಲಾಗುತ್ತಿಲ್ಲ.
ಸುಮಾರು 20 ಲಕ್ಷ ಜೀನ್ಸ್ ಪ್ಯಾಂಟ್ಗಳನ್ನು (Jeans Pant) ರಫ್ತು ಮಾಡುವ ಯೋಜನೆ ಇದ್ದರೂ, ಉತ್ಪಾದನೆ ಕುಸಿತದಿಂದ ಅದು ಸಾಧ್ಯವಾಗದೇ ಕೋಟ್ಯಂತರ ರೂಪಾಯಿ ವ್ಯವಹಾರ ನಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಒಟ್ಟಿನಲ್ಲಿ, ಅಂತರಾಷ್ಟ್ರೀಯ ರಾಜಕೀಯ ಸಂಘರ್ಷವು ಸ್ಥಳೀಯ ಉದ್ಯಮಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಬಳ್ಳಾರಿ ಜೀನ್ಸ್ ಉದ್ಯಮವೇ ಸ್ಪಷ್ಟ ಉದಾಹರಣೆ.
ಪರಿಸ್ಥಿತಿ ಇದೇ ರೀತಿಯಲ್ಲಿ ಮುಂದುವರಿದರೆ, ಸಾವಿರಾರು ಕುಟುಂಬಗಳಿಗೆ ಆಧಾರವಾಗಿರುವ ಈ ಉದ್ಯಮವೇ ಮುಚ್ಚುವ ಹಂತಕ್ಕೆ ತಲುಪುವ ಭೀತಿ ಎದುರಾಗಿದೆ. ಸರ್ಕಾರದಿಂದ ತುರ್ತು ಕ್ರಮಗಳು ಹಾಗೂ ಪರ್ಯಾಯ ಪೂರೈಕೆ ವ್ಯವಸ್ಥೆಗಳ ಅಗತ್ಯತೆ ತೀವ್ರವಾಗಿ ಕಾಣಿಸಿಕೊಂಡಿದೆ.
ಇದನ್ನು ಓದಿ : https://vijayatimes.com/pakistan-airstrike-on-kabul-hospital/