ಬೆಂಗಳೂರು ಅ 1 : ನಟ ಪುನೀತ್ ರಾಜ್ಕುಮಾರ್ ಅವರು ಹೃದಯಾಘಾತ ಹಿನ್ನಲೆಯಲ್ಲಿ ಅ. 29ರಂದು ಅಸುನೀಗಿದ್ದರು ಈ ಹಿನ್ನಲೆಯಲ್ಲಿ ಅವರ 2 ಕಣ್ಣುಗಳು ನಾಲ್ವರ ಜೀವಕ್ಕೆ ಬೆಳಕು ನೀಡಿವೆ. ಡಾ. ರಾಜ್ ಕುಮಾರ್ ಅವರ ಹಾದಿಯಂತೆ ಪುನೀತ್ ದಾನ ಮಾಡಿದ ಎರಡು ಕಣ್ಣುಗಳಿಂದ ನಾರಾಯಣ ನೇತ್ರಾಲಯ ನಾಲ್ವರು ದೃಷ್ಟಿ ವಿಕಲಚೇತನರಿಗೆ ಬೆಳಕು ಕೊಡಿಸಿದೆ. ನಟ ಪುನೀತ್ ನಾಲ್ವರ ಕಣ್ಣಲ್ಲಿ ಇರಲಿದ್ದಾರೆ. ಅಪ್ಪು ಎರಡು ನೇತ್ರ ನಾಲ್ವರಿಗೆ ದೃಷ್ಟಿ ನೀಡುವ ಮೂಲಕ ಸಾವಿನಲ್ಲೂ ದಾಖಲೆ ಬರೆದಿದ್ದಾರೆ.
ಅದರಲ್ಲೂ ನಾಲ್ವರು ಕಡಿಮೆ ವಯಸ್ಸುಳ್ಳವರಾಗಿದ್ದಾರೆ. ಅದರಲ್ಲಿ ಒಬ್ಬರು ಮಹಿಳೆ, ಮೂವರು ಯುವಕರ ಬಾಳಿನಲ್ಲಿ ಅಪ್ಪು ಬೆಳಗುತ್ತಿದ್ದಾರೆ. ಆದರೆ ಅವರು ಯಾರು ಎಂದು ಯಾರಿಗೂ ಗೊತ್ತಿಲ್ಲ. ಅಪ್ಪು ಕಣ್ಣಿನಿಂದ ಬೆಳಕು ಪಡೆದವರಿಗೂ ಈ ವಿಷಯ ಗೊತ್ತಿಲ್ಲ. ಅಪ್ಪು ನೇತ್ರ ಪಡೆದವರು ಯಾರು ಎಂಬುದು ಜೀವನ ಪರ್ಯಂತ ನಿಗೂಢವಾಗಿಯೇ ಉಳಿಯಲಿದೆ
ಸಾಮಾನ್ಯವಾಗಿ ಒಂದು ಕಣ್ಣು ದಾನ ಮಾಡಿದರೆ ಒಂದು ಕಣ್ಣಿನಂತೆ ಇಬ್ಬರಿಗೆ ದಾನ ಮಾಡಲಾಗುತ್ತದೆ. ಆದರೆ, ಅಪ್ಪು ಅವರ ಎರಡು ಕಣ್ಣಿನಿಂದ ನಾಲ್ವರಿಗೆ ದೃಷ್ಟಿ ಹೇಗೆ ನೀಡಿದರು ಎನ್ನುವ ಪ್ರಶ್ನೆ ಸಾಮಾನ್ಯ. ಈಗಿನ ತಂತ್ರಜ್ಞಾನ ಬಳಿಸಿಕೊಂಡು ಅಪ್ಪು ಕಣ್ಣನ್ನು ಸ್ಲೈಸ್ ಮಾಡಿದೆವು. ಕಣ್ಣಿನ ಹಿಂಬದಿಯನ್ನು ಅದರ ಅಗತ್ಯ ಇರುವರಿಗೆ ಬಳಸಿದ್ದೇವೆ. ಕಣ್ಣಿನ ಕಾರ್ನಿಯಾ ಭಾಗ ಮತ್ತೊಬ್ಬರಿಗೆ ಬಳಿಸಿದ್ದೇವೆ. ಅಪ್ಪು ಕಣ್ಣು ತುಂಬಾ ಚೆನ್ನಾಗಿದ್ದರಿಂದ ಸ್ಲೈಸ್ ಮಾಡಿ ನಾಲ್ವರು ಅಂದರಿಗೆ ಶಸ್ತ್ರ ಚಿಕಿತ್ಸೆ ನಡೆಸಿ ದೃಷ್ಟಿ ನೀಡಲಾಗಿದೆ. ಕಣ್ಣಿನ ಹಿಂಬದಿ ಅಗತ್ಯವಿದ್ದ ಇಬ್ಬರಿಗೆ ಅಪ್ಪು ಕಣ್ಣಿನ ಹಿಂಬದಿಯ ಭಾಗ ಅಳವಡಿಸಿದ್ದೇವೆ. ಕಾರ್ನಿಯಾ ಭಾಗವನ್ನು ಇಬ್ಬರಿಗೆ ಅಳವಡಿಸಿದ್ದೇವೆ. ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಒಬ್ಬರಿಂದ ಎರಡು ಕಣ್ಣು ಪಡೆದು ನಾಲ್ವರಿಗೆ ದೃಷ್ಟಿ ನೀಡಲಾಗಿದೆ. ನಾಲ್ವರೂ ಈಗ ಚೆನ್ನಾಗಿದ್ದಾರೆ. ಇದಕ್ಕೆ ಕಾರಣಕರ್ತರು ನಾರಾಯಣ ನೇತ್ರಾಲಯದ ಡಾ.ಯತೀಶ್ ಮತ್ತು ತಂಡ ಎಂದು ಡಾ. ಭುಜಂಗಶೆಟ್ಟಿ ತಿಳಿಸಿದ್ದಾರೆ.