ಬೆಂಗಳೂರು ಅ 29 : ಹೃದಯಾಘಾತದಿಂದ ನಿಧನರಾದ ಸ್ಯಾಂಡಲ್ ವುಡ್ ನ ನಟ ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಪುನೀತ್ ಶರೀರವನ್ನು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುವುದು, ಇದಕ್ಕಾಗಿ ಎಲ್ಲಾ ರೀತಿಯ ಏರ್ಪಾಡು ಮಾಡಿಕೊಳ್ಳಲಾಗುತ್ತಿದೆ. ಪುನೀತ್ ಅವರ ಮೃತ ಶರೀರವನ್ನು ಆಸ್ಪತ್ರೆಯಿಂದ ಮೊದಲು ಮನೆಗೆ ತೆಗೆದುಕೊಂಡು ಹೋಗಿ ಬಳಿಕ ಕಂಠೀರವ ಸ್ಟೇಡಿಯಂಗೆ ತೆಗೆದುಕೊಂಡು ಹೋಗಲಾಗುವುದು ಎಂದು ತಿಳಿದು ಬಂದಿದೆ.
ಅಂತಿಮ ದರ್ಶನದ ಬಳಿಕ ಬಿಡದಿಯ ಫಾರ್ಮ್ ಹೌಸ್ ನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲು ನಿರ್ಧಾರ ಮಾಡಲಾಗಿದೆ. ಅಮೇರಿಕಾದಿಂದ ಮಗಳು ವಾಪಸ್ ಬಂದ ಬಳಿಕ ಅಂತ್ಯಸಂಸ್ಕಾರ ನಡೆಸಲಾಗುವುದು, ಈಗಾಗ್ಲೇ ಅಮೇರಿಕಾದಿಂದ ಪುನೀತ್ ರಾಜ್ ಕುಮಾರ್ ಮಗಳು ಹೊರಟಿದ್ದಾರೆ. ಇತ್ತ ಅಭಿಮಾನಿಗಳ ನೋವು- ಆಕ್ರಂದನ ಮುಗಿಲುಮುಟ್ಟಿದೆ.