ಪುನೀತ್ ಹೃದಯಾಘಾತದಿಂದ ಅಸುನೀಗಿದ ಹಿನ್ನಲೆಯಲ್ಲಿ ಗಾಜನೂರಿನಲ್ಲಿದ್ದ ಡಾ.ರಾಜ್ ಕುಟುಂಬಸ್ಥರು ಬೆಂಗಳೂರಿಗೆ ದೌಡಾಯಿಸುತ್ತಿದ್ದಾರೆ.
ಡಾ.ರಾಜ್ ಸಹೋದರಿ, ಮಗ ಗೋಪಾಲ್, ಗೋಪಾಲ್ ಪತ್ನಿ ಪ್ರೇಮ ಬೆಂಗಳೂರಿನತ್ತ ಪಯಣಿಸುತ್ತಿದ್ದಾರೆ. ದೊಡ್ಡನೆಯಿಂದ ಮೊಬೈಲ್ ಕರೆ ಹಿನ್ನಲೆಯಲ್ಲಿ ಸಂಬಂಧಿಕರು ಬೆಂಗಳೂರಿಗೆ ದೌಡಾಯಿಸುತ್ತಿದ್ದಾರೆ ಒಂದು ತಿಂಗಳ ಹಿಂದಷ್ಟೇ ಪುನೀತ್ ಗಾಜನೂರಿಗೆ ಭೇಟಿ ನೀಡಿದ್ದರು. ಸಹೋದರ ಡಾ.ಶಿವರಾಜಕುಮಾರ್ ಜತೆ ಪುನೀತ್ ಭೇಟಿ ನೀಡಿದ್ದರು.
ಸಾರ್ವಜನಿಕರ ಅಂತಿಮ ದರ್ಶನಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ.