ಬೆಂಗಳೂರು,ಫೆ.17: ನಟ ರಾಘವೇಂದ್ರ ರಾಜ್ಕುಮಾರ್ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ನಿನ್ನೆ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟ ಹಾಗೂ ನಿರ್ಮಾಪಕರಾಗಿದ್ದ, ರಾಘವೇಂದ್ರ ರಾಜ್ಕುಮಾರ್ ಅವರಿಗೆ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ ಮಾಡಲಾಗವುದು ಎನ್ನಲಾಗಿದೆ. ರಾಘವೇಂದ್ರ ರಾಜ್ಕುಮಾರ್ ಅವರ ಆರೋಗ್ಯದ ಬಗ್ಗೆ ತೀವ್ರ ಕಾಳಜಿ ಮಾಡುತ್ತಿರುವ ಬೆಂಗಳೂರಿನ ಕೊಲಂಬಿಯಾ ಆಸ್ಪತ್ರೆಯ ವೈದ್ಯರು ಅವರ ಆರೋಗ್ಯವನ್ನುಪರೀಕ್ಷಿಸಿ, ಇಂದು ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿದ್ದಾರೆ.
ಈಗಾಗಲೇ ಆಸ್ಪತ್ರೆಗೆ ರಾಜ್ಕುಮಾರ್ ಕುಟಂಬ ವರ್ಗದವರು ಆಗಮಿಸಿದ್ದು, ವೈದ್ಯರ ಬಳಿ ಎಲ್ಲಾ ಚರ್ಚೆ ನಡೆಸಿದ್ದಾರೆ. ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಅವರು ಸಿನಿಮಾ ರಂಗದಿಂದ ಆನಾರೋಗ್ಯದಿಂದಲೇ ದೂರವಿದ್ದು, ವಜ್ರೇಶ್ವರಿ ಕಂಬೈನ್ಸ್ಗೆ ಸಂಬಂಧಪಟ್ಟ ಕೆಲಸಗಳನ್ನು ಮಾತ್ರ ಮಾಡುತ್ತಿದ್ದರು. ಆದಾದ ಬಳಿಕ ಅವರು ಇತ್ತೀಚಿಗೆ ತಮ್ಮ ಅನಾರೋಗ್ಯದ ನಡುವೆ ಕೂಡ “ಬೆಳಕು” ಚಿತ್ರದ ಚಿತ್ರೀಕರಣದ ವೇಳೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಕುಸಿದು ಬಿದ್ದ ಅವರನ್ನು ಮಂಗಳವಾರ ಸಂಜೆ ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.