• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಮುಸ್ಲಿಂ ಲೇಖಕರ ಪುಸ್ತಕ ಓದಬೇಡಿ ಎಂದು ಯಾವಾಗ ಫರಮಾನು ಹೊರಡುವುದೊ ಕಾಣೆ : ರೆಹಮತ್‌ ತರಿಕೇರಿ

Mohan Shetty by Mohan Shetty
in ರಾಜ್ಯ
ಮುಸ್ಲಿಂ ಲೇಖಕರ ಪುಸ್ತಕ ಓದಬೇಡಿ ಎಂದು ಯಾವಾಗ ಫರಮಾನು ಹೊರಡುವುದೊ ಕಾಣೆ : ರೆಹಮತ್‌ ತರಿಕೇರಿ
0
SHARES
1
VIEWS
Share on FacebookShare on Twitter

ಮುಸ್ಲಿಂ ಹಿನ್ನೆಲೆಯ ಲೇಖಕರ ಪುಸ್ತಕ ಓದಬೇಡಿ ಎಂದು ಯಾವಾಗ ಫರಮಾನು ಹೊರಡುವುದೊ ಕಾಣೆ ಎಂದು ಕನ್ನಡ ಲೇಖಕ(Rahamat Tarikere about Banaras) ಮತ್ತು ಪ್ರಾದ್ಯಾಪಕ ರೆಹಮತ್‌ ತರಿಕೇರಿ ಹೇಳಿದ್ದಾರೆ.

Rahamat Tarikere about Banaras

ಈ ಕುರಿತು ತಮ್ಮ ಫೇಸ್‌ಬುಕ್‌ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ‘ಬನಾರಸ್’(Rahamat Tarikere about Banaras) ಚಿತ್ರವನ್ನು ಮುಸ್ಲಿಂ ನಟನಿರುವ ಕಾರಣಕ್ಕೆ ಬಹಿಷ್ಕರಿಸುವ ಹೇಳಿಕೆಯನ್ನು ಕಂಡಾಗ ಆಶ್ಚರ್ಯವಾಗಲಿಲ್ಲ. ಇದು ‘ಮುಸ್ಲಿಂ ವ್ಯಾಪಾರಿಗಳಿಂದ ಖರೀದಿ ಮಾಡಬೇಡಿ, ‘ಅವರನ್ನು ಪ್ರೀತಿಸಿ ಮದುವೆಯಾಗಬೇಡಿ’,

ಇದನ್ನೂ ಓದಿ : https://vijayatimes.com/review-of-banaras/

‘ಅವರಿಗೆ ಬಾಡಿಗೆ ಮನೆಕೊಡಬೇಡಿ’, ‘ಅವರು ಈ ದೇಶದಲ್ಲಿರಬಾರದು’ ಇತ್ಯಾದಿ ಹೇಳಿಕೆ-ಗ್ರಹಿಕೆಗಳ ತಾರ್ಕಿಕ ಮುಂದುವರಿಕೆಯಷ್ಟೆ.  ಮುಸ್ಲಿಂ ಹಿನ್ನೆಲೆಯ ಲೇಖಕರ ಪುಸ್ತಕ ಓದಬೇಡಿ ಎಂದು ಯಾವಾಗ ಫರಮಾನು ಹೊರಡುವುದೊ ಕಾಣೆ. ಸಮಸ್ಯೆಯೆಂದರೆ, ಕಲಾ ಲೋಕದಲ್ಲಿ ಬಹಿಷ್ಕಾರಗಳು ಬಹಿಷ್ಕರಿಸುವವರ ಅಪೇಕ್ಷಿತ ಆಶಯಕ್ಕೆ ವಿರುದ್ಧ ಪರಿಣಾಮವನ್ನು ಬೀರುವುದು.

ಇದನ್ನೂ ಓದಿ : https://vijayatimes.com/hd-devegowda-letter-to-pm/

ಬಹಿಷ್ಕಾರಗಳಲ್ಲಿ, ಅವಕ್ಕೆ ಗುರಿಯಾಗುವ ವ್ಯಕ್ತಿ/ಸಮುದಾಯಗಳ ಮೇಲಾಗುವ ಪರಿಣಾಮಗಳಿಗಿಂತ ಘೋರವಾದುದು, ಅದನ್ನು ವಿಧಿಸುವವರು ಕುಬ್ಜ ಮತ್ತು ನಿಕೃಷ್ಟಗೊಳ್ಳುವುದು. ನಂಜನ್ನು ಉಗುಳುವಾಗ, ಅದನ್ನು ನಾವು ಹೊಟ್ಟೆಯಲ್ಲಿ ಧರಿಸಿರಬೇಕಾಗುತ್ತದೆ. ನಮ್ಮ ನಾಲಗೆಯ ಮೂಲಕ ಹೊರಹಾಕಬೇಕಾಗುತ್ತದೆ. ಆಗದು ನಮ್ಮ ಒಳಗನ್ನೂ ಸುಟ್ಟಿರುತ್ತದೆ.

movie - Rahamat Tarikere about Banaras

ಇನ್ನು ಭಾರತೀಯ ಸಿನಿಮಾದ ಮೊದಲ ದಿನಗಳಲ್ಲಿ, ಮುಂಬೈ ಚಿತ್ರ ಜಗತ್ತಿನಲ್ಲಿ ಕಲಾವಿದರ ಜಾತಿ, ಧರ್ಮ, ಲಿಂಗ ಪ್ರದೇಶಗಳ ಹಿನ್ನೆಲೆಗಿಂತ, ವ್ಯಕ್ತಿ ಪ್ರತಿಭೆ, ಪರಿಣತಿ ಮತ್ತು ಅನುಭಗಳಿಗೆ ಆದ್ಯತೆಯಿತ್ತು. ಬಂಡವಾಳಶಾಹಿ ಮಾರುಕಟ್ಟೆ ಆಯಾಮವುಳ್ಳ ಸಿನಿಮಾ ಮಾಧ್ಯಮದಲ್ಲೇ ಸಾಂಪ್ರದಾಯಿಕ ಕಟ್ಟುಪಾಡು ಮೀರುವ ಗುಣವು ಸಾಂಪ್ರದಾಯಿಕ ಕಲಾಲೋಕದಲ್ಲಿ ಇರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿತ್ತು.

https://youtu.be/Hha3KHrTSyk ಬ್ಯಾಡರಹಳ್ಳಿ – ವಿಶ್ವೇಶ್ವರಯ್ಯ ಲೇಔಟ್ ಅವಶ್ಯಕತೆ ಇಲ್ಲದ 150 ಅಡಿ ಲಿಂಕ್ ರೋಡ್.

ಕಲೆ, ವಾಣಿಜ್ಯ, ಭಾಷೆಗಳಿಗೆ ಜಾತಿ-ಧರ್ಮಗಳನ್ನು ಮೀರುವ ಈ ಗುಣವು, ಮುಂಬೈ ಶಹರಿನಲ್ಲಿ ಹೆಚ್ಚು ಪ್ರಕಟವಾಗುತ್ತಿತ್ತು. ವಾಣಿಜ್ಯ ರಾಜಧಾನಿಯಾದ ಮುಂಬೈ ಜಾತ್ಯತೀತ ಕಲೆಗಳ ಕೇಂದ್ರವೂ ಆಗಿ ರೂಪುಗೊಂಡಿದ್ದು, ಒಂದು ಸ್ವಾರಸ್ಯಕರ ಮತ್ತು ಐತಿಹಾಸಿಕ ಸಂಗತಿ ಎಂದು ಸುದೀರ್ಘ ಲೇಖನವನ್ನು ಬರೆದುಕೊಂಡಿದ್ದಾರೆ.

  • ಮಹೇಶ್.ಪಿ.ಎಚ್
Tags: Banaras FilmRahamat Tarikerestatement

Related News

ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಜೂ.1ಕ್ಕೆ ಸಂಪುಟ ಸಭೆ: ಡಿ.ಕೆ.ಶಿವಕುಮಾರ್‌
Vijaya Time

ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಜೂ.1ಕ್ಕೆ ಸಂಪುಟ ಸಭೆ: ಡಿ.ಕೆ.ಶಿವಕುಮಾರ್‌

May 29, 2023
ನೂತನ ಸಚಿವ ಸಂಪುಟದ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ??? ಇಲ್ಲಿದೆ ಮಾಹಿತಿ
Vijaya Time

ನೂತನ ಸಚಿವ ಸಂಪುಟದ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ??? ಇಲ್ಲಿದೆ ಮಾಹಿತಿ

May 29, 2023
ಅತ್ತ ಸಂಸತ್‌ ಭವನ ಉದ್ಘಾಟನೆ, ಇತ್ತ ದೇಶಕ್ಕೆ ಕೀರ್ತಿ ತಂಡ ಕುಸ್ತಿಪಟುಗಳ ಬಂಧನ: ಹಾಡುಹಗಲೇ ಪೊಲೀಸ್‌ ಗೂಂಡಾಗಿರಿ
Vijaya Time

ಅತ್ತ ಸಂಸತ್‌ ಭವನ ಉದ್ಘಾಟನೆ, ಇತ್ತ ದೇಶಕ್ಕೆ ಕೀರ್ತಿ ತಂಡ ಕುಸ್ತಿಪಟುಗಳ ಬಂಧನ: ಹಾಡುಹಗಲೇ ಪೊಲೀಸ್‌ ಗೂಂಡಾಗಿರಿ

May 29, 2023
ರಾಮನಗರ: ಕಾಂಗ್ರೆಸ್ ಅಭ್ಯರ್ಥಿ ಕೊಟ್ಟಿದ್ದ ಕುಕ್ಕರ್ ಸ್ಫೋಟ; ಬಾಲಕಿಗೆ ಗಂಭೀರ ಗಾಯ
ಪ್ರಮುಖ ಸುದ್ದಿ

ರಾಮನಗರ: ಕಾಂಗ್ರೆಸ್ ಅಭ್ಯರ್ಥಿ ಕೊಟ್ಟಿದ್ದ ಕುಕ್ಕರ್ ಸ್ಫೋಟ; ಬಾಲಕಿಗೆ ಗಂಭೀರ ಗಾಯ

May 29, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.