ನೂಪುರ್ ಶರ್ಮಾ(Nupur Sharma) ಮತ್ತು ಪ್ರವಾದಿ(Prophet) ಕುರಿತು ನೀಡಿದ ವಿವಾದಾತ್ಮಕ ಹೇಳಿಕೆ(Controversial Statement) ದೇಶದಲ್ಲಿ ಅನೇಕ ಅಹಿತಕರ ಘಟನೆಗಳನ್ನು ಸೃಷ್ಟಿಸಿದೆ ಎಂದು ಸುಪ್ರಿಂ ಕೋರ್ಟ್(Supremecourt) ನೂಪುರ್ ಶರ್ಮಾ ಅವರನ್ನು ತರಾಟೆಗೆ ತೆಗೆದುಕೊಂಡಿತು. ನೂಪುರ್ ಶರ್ಮಾ ನೀಡಿದ ಹೇಳಿಕೆಯಿಂದ ದೇಶದಲ್ಲಿ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಲಾಯಿತು. ಇದಲ್ಲದೇ ಆ ಒಂದು ಹೇಳಿಕೆಗೆ ಬೆಂಬಲ ಸೂಚಿಸಿದ ಹಿಂದೂ ಟೈಲರ್ ಕನ್ಹಯ್ಯ ಕುಮಾರ್ ಅನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.
ಇಂಥ ಘಟನೆಗಳಿಗೆ ನೂಪುರ್ ಶರ್ಮಾ ಹೇಳಿಕೆ ಕಾರಣ, ಅಂದೇ ಮಾಧ್ಯಮದ ಸಂದರ್ಶನದಲ್ಲಿ ಕ್ಷಮೆಯಾಚಿಸಬೇಕಿತ್ತು. ಈ ಕೂಡಲೇ ದೇಶದ ಮುಂದೆ ಕ್ಷಮೆಯಾಚಿಸಿ ಎಂದು ಸುಪ್ರಿಂ ಸೂಚನೆ ನೀಡಿದೆ. ಸದ್ಯ ಸುಪ್ರಿಂ ಸೂಚನೆಯ ಬಳಿಕ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶದಲ್ಲಿ ಕೋಪ ಮತ್ತು ದ್ವೇಷದ ವಾತಾವರಣವನ್ನು ಕೇಂದ್ರ ಸರ್ಕಾರ ಸೃಷ್ಟಿಸಿದೆ ಹೊರೆತು, ಒಬ್ಬ ವ್ಯಕ್ತಿಯಲ್ಲ ಎಂದು ಹೇಳಿದ್ದಾರೆ.
ಕೇರಳದ ವಯನಾಡ್ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ, “ಸುಪ್ರೀಂ ಕೋರ್ಟ್ ಈ ಮಾತನ್ನು ಹೇಳಿದೆ. ಆದರೆ ದೇಶದಲ್ಲಿ ವಾತಾವರಣವನ್ನು ಸೃಷ್ಟಿಸಿರುವುದು ಆಡಳಿತಾರೂಢ ಸರ್ಕಾರ. ಇದು ಪ್ರಧಾನಿ, ಗೃಹ ಸಚಿವರು ದೇಶದಲ್ಲಿ ಈ ವಾತಾವರಣವನ್ನು ಸೃಷ್ಟಿಸಿದ ಬಿಜೆಪಿ ಮತ್ತು ಆರ್ಎಸ್ಎಸ್. ಈ ಗಲಭೆ ವಾತಾವರಣ ಮತ್ತು ಈ ದ್ವೇಷದ ವಾತಾವರಣ ಸೃಷ್ಟಿಸಿರುವುದು ಸರ್ಕಾರ, ಇದು ಭಾರತ ಮತ್ತು ನಮ್ಮ ಜನರ ಹಿತಾಸಕ್ತಿಗೆ ವಿರುದ್ಧವಾಗಿದೆ.
“ಕಾಂಗ್ರೆಸ್ ಪಕ್ಷವು ಜನರ ನಡುವೆ ಸೇತುವೆಗಳನ್ನು ನಿರ್ಮಿಸುತ್ತದೆ, ನಾವು ಸಮುದಾಯಗಳ ನಡುವೆ ಸೇತುವೆಗಳನ್ನು ನಿರ್ಮಿಸುತ್ತೇವೆ, ನಾವು ಜನರನ್ನು ಒಟ್ಟಿಗೆ ಸೇರಿಸುತ್ತೇವೆ. ಹಾಗಾಗಿ ನಾವು ದೇಶದಲ್ಲಿ ನೋಡುತ್ತಿರುವುದು ಆರ್ಎಸ್ಎಸ್ ಮತ್ತು ಬಿಜೆಪಿ ಮಾಡುತ್ತಿರುವುದನ್ನು. ಇದು ನಮ್ಮ ತತ್ವಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಆದ್ರೆ, ನಾವು ಅವರಂತೆ ಮಾಡುವುದಿಲ್ಲ. ದ್ವೇಷ ಮತ್ತು ಕೋಪದಿಂದ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ನನಗೆ ನಂಬಿಕೆಯಿಲ್ಲ” ಎಂದು ಹೇಳಿದ್ದಾರೆ.