- ಪ್ರಯಾಣಿಕರ ನೆರವಿಗೆ ಬಂದ ಭಾರತೀಯ ರೈಲ್ವೇ ಇಲಾಖೆ (Railways help amid IndiGo crisis)
- ವಿಮಾನ ಬಿಕ್ಕಟ್ಟಿನ ನಡುವೆ ನಾಲ್ಕು ಏಕಮುಖ ವಿಶೇಷ ರೈಲುಗಳ ಸಂಚಾರ
- ಪಶ್ಚಿಮ ಮತ್ತು ಈಶಾನ್ಯ ಮಾರ್ಗದ ರೈಲ್ವೆಯಲ್ಲಿ ಹೆಚ್ಚುವರಿ ಎಸಿ-ಸ್ಲೀಪರ್ ಕೋಚ್ಗಳು ಆರಂಭ
New delhi: ಇಂಡಿಗೋ ಸೇರಿದಂತೆ ಹಲವು ಪ್ರಮುಖ ವಿಮಾನಯಾನ ಸಂಸ್ಥೆಗಳು ದೇಶದಾದ್ಯಂತ ಅನೇಕ ವಿಮಾನಗಳನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಸಾವಿರಾರು ಪ್ರಯಾಣಿಕರು ಗೊಂದಲ ಮತ್ತು ತೊಂದರೆಗಳನ್ನು ಅನುಭವಿಸುತ್ತಿದ್ದರು.

ವಿಶೇಷವಾಗಿ ದಕ್ಷಿಣ ಭಾರತ ಹಾಗೂ ದೆಹಲಿ–ಮುಂಬೈ ಮಾರ್ಗಗಳಲ್ಲಿ ವಿಮಾನ ರದ್ದುಗೊಂಡ ಪ್ರಮಾಣ ಹೆಚ್ಚು ಇರುವುದರಿಂದ ಬೇರೆ ಪರ್ಯಾಯಗಳಿಗಾಗಿ ಪ್ರಯಾಣಿಕರು ಒತ್ತಡದಲ್ಲಿದ್ದರು.
ಈ ಪರಿಸ್ಥಿತಿಯನ್ನು ಗಮನಿಸಿದ ಭಾರತೀಯ ರೈಲ್ವೇ ಇಲಾಖೆ ಯಾವುದೇ ವಿಳಂಬವಿಲ್ಲದೆ ತಕ್ಷಣ ಕಾರ್ಯಪ್ರವೃತ್ತಗೊಂಡು, (Railways help amid IndiGo crisis)ಹೆಚ್ಚುವರಿ ಬೋಗಿಗಳು, ವಿಶೇಷ ಟ್ರಿಪ್ಗಳು, ಮತ್ತು ತಾತ್ಕಾಲಿಕ ರೈಲುಗಳ ಮೂಲಕ ಪ್ರಯಾಣಿಕರಿಗೆ ದೊಡ್ಡ ರೀತಿಯಲ್ಲಿ ನೆರವಾಗುವ ಕಾರ್ಯ ಆರಂಭಿಸಿದೆ.
ಡಿಸೆಂಬರ್ 6, 2025 ರಿಂದಲೇ ಹೊಸ ವ್ಯವಸ್ಥೆಗಳನ್ನು ಜಾರಿಗೆ ತಂದಿರುವ ರೈಲ್ವೆ ಇಲಾಖೆ, ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ.
ಇನ್ನು ಇಂಡಿಗೊ ಸೇರಿದಂತೆ ಹಲವು ವಿಮಾನಗಳು ರದ್ದುಗೊಂಡ ಪರಿಣಾಮವಾಗಿ ಲಕ್ಷಾಂತರ ಪ್ರಯಾಣಿಕರು ರೈಲ್ವೆಯತ್ತ ಮುಖ ಮಾಡಿದ್ದರಿಂದ, ಟಿಕೆಟ್ ಬೇಡಿಕೆಯು ಅಷ್ಟರ ಮಟ್ಟಿಗೆ ಏರಿತ್ತು. ಇದರಿಂದ ಸಾಮಾನ್ಯ ದಿನಗಳಲ್ಲಿ ಖಾಲಿಯಾಗಿರಬಹುದಾದ ಹಲವಾರು ಮಾರ್ಗಗಳಲ್ಲಿಯೂ ಕೂಡ ಸೀಟುಗಳು ತುಂಬಿ ಹೋಗಿದ್ದವು.
ಈ ಬೃಹತ್ ಬೇಡಿಕೆಯನ್ನು ನಿಭಾಯಿಸಲು, ದಕ್ಷಿಣ ರೈಲ್ವೆ 18 ಪ್ರಮುಖ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಸೇರಿಸಿದ್ದು, ಸ್ಲೀಪರ್ ಹಾಗೂ ಚೇರ್ ಕಾರ್ ಸೀಟುಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿದೆ.
ಬೆಂಗಳೂರು, ಚೆನ್ನೈ, ಕೊಯಮತ್ತೂರು, ತಿರುವನಂತಪುರಂ ಮೊದಲಾದ ನಗರಗಳ ನಡುವಿನ ಸಂಪರ್ಕ ಪುನಃ ಸುಗಮಗೊಂಡಿದೆ. ಈ ಪ್ರದೇಶಗಳಲ್ಲಿ ವಿಮಾನ ರದ್ದತಿಗಳ ಪ್ರಮಾಣ ಹೆಚ್ಚಿನದಾಗಿದ್ದುದರಿಂದ, ರೈಲು ಸಾಮರ್ಥ್ಯವನ್ನು ಹೆಚ್ಚಿಸುವ ಕ್ರಮ ಜನರಿಗೆ ನಿಟ್ಟುಸಿರು ಬಿಟ್ಟಂತಾಗಿದೆ.
ಇದಲ್ಲದೆ, ಹೆಚ್ಚಿನ ಮಾರ್ಗಗಳಲ್ಲಿ ತಾತ್ಕಾಲಿಕವಾಗಿ ಹೆಚ್ಚುವರಿ ಟ್ರಿಪ್ಗಳನ್ನೂ (Trips) ನಡೆಸಲಾಗುತ್ತಿದೆ. ಇನ್ನು ಉತ್ತರ ಭಾರತದತ್ತ ಪ್ರಯಾಣಿಸುವ ಜನಸಂಖ್ಯೆಯೂ ತೀವ್ರವಾಗಿ ಹೆಚ್ಚುತ್ತಿರುವುದು ಕಂಡುಬಂದಿದ್ದು, ಉತ್ತರ ರೈಲ್ವೆ ಕೂಡ ತಕ್ಷಣವೇ ಕ್ರಮಕೈಗೊಂಡಿದೆ.
ದೆಹಲಿಗೆ ಹೋಗುವ 8 ಪ್ರಮುಖ ರೈಲುಗಳಲ್ಲಿ ಹೆಚ್ಚುವರಿ ಎಸಿ ಹಾಗೂ ಚೇರ್ ಕಾರ್ (Chair Car) ಬೋಗಿಗಳನ್ನು ಸೇರಿಸಲಾಗಿದೆ. ಪಂಜಾಬ್, ಹರಿಯಾಣ, ಉತ್ತರಾಖಂಡ ಮತ್ತು ಉತ್ತರ ಪ್ರದೇಶ ಪ್ರದೇಶಗಳಿಂದ ಪ್ರಯಾಣಿಸುವ ಜನರಿಗೆ ಈ ನಿರ್ಧಾರ ದೊಡ್ಡ ಸಹಾಯವಾಗಿದೆ.
ದೆಹಲಿ–ಮುಂಬೈ ಮಾರ್ಗದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದರಿಂದ, ಪಶ್ಚಿಮ ರೈಲ್ವೆ 3 ಎಸಿ (Ac) ಮತ್ತು 2 (Sleeper) ಬೋಗಿಗಳನ್ನು ಮಹತ್ವದ ನಾಲ್ಕು ರೈಲುಗಳಲ್ಲಿ ಸೇರಿಸಿದೆ. ಈ ಬದಲಾವಣೆ ಜಾರಿಗೆ ಬಂದ ತಕ್ಷಣ ಸಾವಿರಾರು ಪ್ರಯಾಣಿಕರು ಸೀಟು (seat) ಪಡೆಯಲು ಸಾಧ್ಯವಾಗಿದ್ದು, ವಿಮಾನ ಬಿಕ್ಕಟ್ಟಿನಿಂದ ಉಂಟಾಗುವ ಒತ್ತಡವು ಗಣನೀಯವಾಗಿ ಕಡಿಮೆಯಾಯಿತು.
ಪೂರ್ವ ಮತ್ತು ಈಶಾನ್ಯ ಭಾರತದ ಮಾರ್ಗಗಳಲ್ಲಿಯೂ ಪರಿಸ್ಥಿತಿ ಗಂಭೀರವಾಗಿದ್ದರಿಂದ ಆ ಪ್ರದೇಶಗಳ ರೈಲ್ವೆಗಳು ಸಹ ತುರ್ತು ಕ್ರಮಗಳನ್ನು ಕೈಗೊಂಡಿವೆ. ಪಾಟ್ನಾ–ದೆಹಲಿ ಮಾರ್ಗದಲ್ಲಿ ಡಿಸೆಂಬರ್ 6 ರಿಂದ 10 ರವರೆಗೆ ರಾಜೇಂದ್ರನಗರ–ದೆಹಲಿ ರಾಜಧಾನಿ ಎಕ್ಸ್ಪ್ರೆಸ್ಗೆ (Express) ಐದು ಹೆಚ್ಚುವರಿ ಟ್ರಿಪ್ಗಳನ್ನು ಸೇರಿಸಲಾಗಿದೆ.
2AC ಕೋಚ್ಗಳ ಸಂಖ್ಯೆಯನ್ನೂ ಹೆಚ್ಚಿಸುವ ಮೂಲಕ ಆಸನ ಒತ್ತಡವನ್ನು ಕಡಿಮೆ ಮಾಡಲಾಗಿದೆ. ಒಡಿಶಾದಿಂದ ದೆಹಲಿಗೆ ಹೋಗುವ 20817, 20811 ಮತ್ತು 20823 ರೈಲುಗಳಲ್ಲಿ ಹೆಚ್ಚುವರಿ 2AC ಕೋಚ್ಗಳನ್ನು ಐದು ಟ್ರಿಪ್ಗಳಲ್ಲಿ ಸೇರಿಸಲಾಗಿದೆ.
ಪೂರ್ವ ರೈಲ್ವೆ ಡಿಸೆಂಬರ್ 7 ಮತ್ತು 8 ರಂದು ಮೂರು ಪ್ರಮುಖ ರೈಲುಗಳಿಗೆ ಹೆಚ್ಚುವರಿ ಸ್ಲೀಪರ್ ಕೋಚ್ಗಳನ್ನು ಸೇರಿಸಿದ್ದು, ಈಶಾನ್ಯ ಗಡಿನಾಡು ರೈಲ್ವೆ ಡಿಸೆಂಬರ್ 6ರಿಂದ 13ರವರೆಗೆ 8 ಹೆಚ್ಚುವರಿ ಟ್ರಿಪ್ಗಳೊಂದಿಗೆ 3AC ಮತ್ತು ಸ್ಲೀಪರ್ ಸೀಟುಗಳನ್ನು ಹೆಚ್ಚಿಸಿದೆ.
ಈ ಕ್ರಮಗಳು ದೂರದ ಪ್ರಯಾಣಿಕರಿಗೆ ಸುಗಮ ಸಂಚಾರವನ್ನು ಖಾತ್ರಿಪಡಿಸಿವೆ.ಒಟ್ಟಾರೆ, ದೇಶದಾದ್ಯಂತ ವಿಮಾನಯಾನ ವ್ಯವಸ್ಥೆಯಲ್ಲಿ ಉಂಟಾದ ಅನಿರೀಕ್ಷಿತ ಬಿಕ್ಕಟ್ಟಿನ ನಡುವೆ ಭಾರತೀಯ ರೈಲ್ವೆ ಇಲಾಖೆ ತೋರಿಸಿರುವ ತುರ್ತು ಯೋಜನೆ ಮತ್ತು ಕಾರ್ಯಾಚರಣೆ ಗಮನಾರ್ಹವಾಗಿದೆ.
ಗೋರಖ್ಪುರ–ಆನಂದ್ ವಿಹಾರ್ ವಿಶೇಷ ರೈಲು, ನವದೆಹಲಿ–ಮುಂಬೈ ಸೆಂಟ್ರಲ್ ವಿಶೇಷ ರೈಲು, ನವದೆಹಲಿ–ಶ್ರೀನಗರ ಮಾರ್ಗಕ್ಕೆ ವಂದೇ ಭಾರತ್ ವಿಶೇಷ ರೈಲು ಮತ್ತು ನಿಜಾಮುದ್ದೀನ್–ತಿರುವನಂತಪುರಂ ವಿಶೇಷ ರೈಲು ಸೇರಿದಂತೆ ನಾಲ್ಕು ಏಕಮುಖ ವಿಶೇಷ ರೈಲುಗಳನ್ನೂ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
ಇವು ಸಂಪೂರ್ಣವಾಗಿ ಪ್ರಯಾಣಿಕರ ನೆರವಿಗೆ ವಿನ್ಯಾಸಗೊಳಿಸಿದ ಕ್ರಮಗಳು. ರೈಲುಗಳ ಸಾಮರ್ಥ್ಯ ಹೆಚ್ಚಳ, ಹೆಚ್ಚುವರಿ ಟ್ರಿಪ್ಗಳು ಮತ್ತು ವಿಶೇಷ ರೈಲುಗಳ ಸಂಚಾರ ಎಲ್ಲ ಸೇರಿ ವಿಮಾನ ಬಿಕ್ಕಟ್ಟಿನಿಂದ ಸಂಕಷ್ಟದಲ್ಲಿದ್ದ ಲಕ್ಷಾಂತರ ಜನರಿಗೆ ದೊಡ್ಡ ಮಟ್ಟದ ಪರಿಹಾರ ಒದಗಿಸಿದೆ.
ಇದನ್ನು ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಒಂದೇ ದಿನ 62 ಇಂಡಿಗೋ ವಿಮಾನ ಹಾರಾಟ ರದ್ದು: ಪ್ರಯಾಣಿಕರಲ್ಲಿ ಗೊಂದಲ, DGCA ತನಿಖೆ ಪ್ರಾರಂಭ