• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ಕಾಂತಾರ ಒಂದು ‘ಮಾಸ್ಟರ್‌ಪೀಸ್’ ; ರಿಷಬ್ ನೀವು ನನಗೆ ರೋಮಾಂಚನ ನೀಡಿದ್ದೀರಿ : ರಜನಿಕಾಂತ್

Mohan Shetty by Mohan Shetty
in ಮನರಂಜನೆ
ಕಾಂತಾರ ಒಂದು ‘ಮಾಸ್ಟರ್‌ಪೀಸ್’ ; ರಿಷಬ್ ನೀವು ನನಗೆ ರೋಮಾಂಚನ ನೀಡಿದ್ದೀರಿ : ರಜನಿಕಾಂತ್
0
SHARES
0
VIEWS
Share on FacebookShare on Twitter

Chennai : ತಮಿಳು ಚಿತ್ರರಂಗದ ಹಿರಿಯ ನಟ ತಲೈವಾ ರಜನಿಕಾಂತ್(Talaiwa Rajnikanth) ಅವರು ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ ಕಾಂತಾರ(Rajnikanth Likes Kantara) ಚಿತ್ರವನ್ನು ನೋಡಿ ವಿಮರ್ಶಿಸಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Rajnikanth

ಕಾಂತಾರ ಸಿನಿಮಾವೂ ‘ಭಾರತೀಯ ಚಿತ್ರರಂಗದ ಮೇರುಕೃತಿ’. ಚಿತ್ರದ ನಾಯಕ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ(Rishab Shetty) ಅವರ ಪ್ರಯತ್ನವನ್ನು ಅದ್ಭುತವಾಗಿದೆ ಎಂದಿದ್ದಾರೆ.

ಕನ್ನಡದ ಸೆನ್ಸೇಷನ್ ಸಿನಿಮಾವಾಗಿರುವ ಕಾಂತಾರವನ್ನು ಹಾಡಿ ಹೊಗಳುತ್ತಿರುವ ಭಾರತೀಯ ಸೆಲೆಬ್ರಿಟಿಗಳ ದಂಡಿಗೆ ಸದ್ಯ ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೂಡ ಸೇರ್ಪಡೆಯಾಗಿದ್ದಾರೆ.

ಕಾಂತಾರ ಸಿನಿಮಾ ವೀಕ್ಷಿಸಿ ಸಂತಸಪಟ್ಟ ಸೂಪರ್ ಸ್ಟಾರ್ ರಜನಿಕಾಂತ್, ಬುಧವಾರ ಟ್ವಿಟರ್‌ನಲ್ಲಿ(Rajnikanth Likes Kantara) ಕಾಂತಾರ ಚಿತ್ರತಂಡವನ್ನು ಈ ರೀತಿ ಹೊಗಳಿದ್ದಾರೆ.

“ಕಾಂತಾರ ಚಿತ್ರವೂ ಒಂದು ಮೇರುಕೃತಿ. ಚಿತ್ರದ ನಟ-ನಿರ್ದೇಶಕ ರಿಷಬ್ ಶೆಟ್ಟಿಗೆ ನನ್ನ ವಿಶೇಷ ಪ್ರಶಂಸೆ, ಶ್ಲಾಘನೆ.

ರಜನಿಕಾಂತ್ ಟ್ವೀಟ್ : https://twitter.com/rajinikanth/status/1585190099444469761?s=20&t=rWiDxKcGr4amXqw2xRmaAg

ಸಿನಿಮಾವನ್ನು ತಯಾರು ಮಾಡುವಲ್ಲಿ ರಿಷಬ್ ಅವರ ಪಾತ್ರ ಪ್ರಮುಖವಾದದ್ದು, ರಿಷಬ್ ಅವರು ನನ್ನನ್ನು ರೋಮಾಂಚನಗೊಳಿಸಿದ್ದಾರೆ” ಎಂದು ಟ್ವೀಟ್ ಮಾಡಿ ಶ್ಲಾಘಿಸಿದ್ದಾರೆ.

ಕಾಂತಾರ ಚಿತ್ರವೂ ಜಗತ್ತಿನೆಲ್ಲೆಡೆ ವ್ಯಾಪಕ ಮೆಚ್ಚುಗೆಗಳನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತಿದೆ.

ಇದನ್ನೂ ಓದಿ : https://vijayatimes.com/chethan-ahimsa-over-kantara/

ಕಳೆದ ತಿಂಗಳು ಬಿಡುಗಡೆಯಾದ ಸಮಯದಿಂದಲೂ ಸಾರ್ವತ್ರಿಕ ಮೆಚ್ಚುಗೆಯನ್ನು ಗಳಿಸಿದೆ ಮತ್ತು ಪ್ರಸ್ತುತ #IMDb ಯಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಚಲನಚಿತ್ರವಾಗಿದೆ.

ರಜನಿಕಾಂತ್ ಅವರಂತೆ ಭಾರತೀಯ ಚಿತ್ರರಂಗದ ಅನೇಕ ಕಲಾವಿದರು ಕಾಂತಾರ ಸಿನಿಮಾ ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ.

Sandalwood

ಆ ಪೈಕಿ ಕಂಗನಾ ರಣಾವತ್ ಅವರು, ‘ಕಾಂತಾರ ಮುಂದಿನ ವರ್ಷ ಆಸ್ಕರ್‌ಗೆ ಭಾರತದಿಂದ ಪ್ರವೇಶವಾಗಬೇಕು’ ಎಂದು ಬುಧವಾರ ಟ್ವೀಟ್ ಮಾಡಿ ತಿಳಿಸಿದ್ದರು.

ಅದೇ ರೀತಿ ಡಾರ್ಲಿಂಗ್ ಪ್ರಭಾಸ್, ಕಂಗನಾ ರನೌತ್, ರಾಮ್ ಗೋಪಾಲ್ ವರ್ಮಾ, ದ ಕಾಶ್ಮೀರಿ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ಶಿಲ್ಪಾ ಶೆಟ್ಟಿ ಸೇರಿದಂತೆ ಹಲವಾರು ಖ್ಯಾತ ಕಲಾವಿದರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : https://vijayatimes.com/kantara-copied-our-song/

ಕಾಂತಾರ ಕನ್ನಡ ಚಲನಚಿತ್ರವಾಗಿದ್ದು, ಮನುಷ್ಯ ಮತ್ತು ಪ್ರಕೃತಿಯಂತಹ ಸಮಸ್ಯೆಗಳನ್ನು ಮತ್ತು ಕರಾವಳಿ ಕರ್ನಾಟಕದ ಭೂ ವಿವಾದಗಳನ್ನು ಸ್ಥಳೀಯ ನಂಬಿಕೆಗಳು ಮತ್ತು ದೈವಗಳ ಸುತ್ತಲಿನ ನಂಬಿಕೆಯ ಕಥಾಹಂದರವಾಗಿದೆ.

ಸದ್ಯ ಕಾಂತಾರ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು, ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ಮುಖ ಮಾಡುವಂತೆ ಮಾಡಿರುವುದು ಹೆಮ್ಮೆಯ ಸಂಗತಿ.

Blockbuster

ಜಾಗತಿಕವಾಗಿ ಕಾಂತಾರ ಗಲ್ಲಾಪೆಟ್ಟಿಗೆಯಲ್ಲಿ 200 ಕೋಟಿ ರೂ. ಕಲೆಕ್ಷನ್ ಮಾಡಿ, ಮೂರನೇ ಕನ್ನಡ ಚಿತ್ರ ಎಂಬ ಸ್ಥಾನವನ್ನು ಅಲಂಕರಿಸಿದೆ. ಜಗತ್ತಿನಾದ್ಯಂತ ಕಾಂತಾರ ಮಾಡುತ್ತಿರುವ ಸದ್ದು, ಕನ್ನಡಿಗರ ಕಿವಿಯನ್ನು ಅಪ್ಪಳಿಸುತ್ತಿದೆ, ಹೃದಯವನ್ನು ಸ್ಪರ್ಶಿಸುತ್ತಿದೆ ಎಂಬುದರಲ್ಲಿ ಅನುಮಾನವೇ ಇಲ್ಲ!

Tags: KantaraKarnatakaRishab Shetty

Related News

ರಾಮ್ ಚರಣ್ ನಿರ್ಮಾಣದ ವೀರ ಸಾವರ್ಕರ್ ಜೀವನ ಆಧರಿಸಿದ ಹೊಸ ಚಿತ್ರ : ಶುರುವಾಯ್ತು ಚರ್ಚೆ
Vijaya Time

ರಾಮ್ ಚರಣ್ ನಿರ್ಮಾಣದ ವೀರ ಸಾವರ್ಕರ್ ಜೀವನ ಆಧರಿಸಿದ ಹೊಸ ಚಿತ್ರ : ಶುರುವಾಯ್ತು ಚರ್ಚೆ

May 30, 2023
ಜೂನ್ನಲ್ಲಿ ಅಭಿಷೇಕ್ ಅಂಬರೀಷ್ – ಅವಿವಾ ಬಿದ್ದಪ್ಪ ವಿವಾಹ : ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ
Vijaya Time

ಜೂನ್ನಲ್ಲಿ ಅಭಿಷೇಕ್ ಅಂಬರೀಷ್ – ಅವಿವಾ ಬಿದ್ದಪ್ಪ ವಿವಾಹ : ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ

May 30, 2023
ಕೊಹ್ಲಿಗೆ Instagram 25 ಕೋಟಿ ಫಾಲೋವರ್ಸ್‌! ಏಷ್ಯಾದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ವ್ಯಕ್ತಿ
Sports

ಕೊಹ್ಲಿಗೆ Instagram 25 ಕೋಟಿ ಫಾಲೋವರ್ಸ್‌! ಏಷ್ಯಾದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ವ್ಯಕ್ತಿ

May 26, 2023
ತಿರುಪತಿಯಲ್ಲಿ ನಡೆಯಲಿದೆ ‘ಆದಿಪುರುಷ್’ ಚಿತ್ರದ ಅದ್ದೂರಿ ಪ್ರೀ-ರಿಲೀಸ್ ಇವೆಂಟ್​
ಪ್ರಮುಖ ಸುದ್ದಿ

ತಿರುಪತಿಯಲ್ಲಿ ನಡೆಯಲಿದೆ ‘ಆದಿಪುರುಷ್’ ಚಿತ್ರದ ಅದ್ದೂರಿ ಪ್ರೀ-ರಿಲೀಸ್ ಇವೆಂಟ್​

May 26, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.