- ಆಂಧ್ರ ದುರಂತದ ನಂತರ ಎಚ್ಚೆತ್ತ ಕರ್ನಾಟಕ ಸರ್ಕಾರ
- ಇನ್ಮುಂದೆ ಬಸ್ಗಳಲ್ಲಿ ಸ್ಫೋಟಕ ವಸ್ತು ಸಾಗಾಟಕ್ಕೆ ನಿಷೇಧ
- ಸುರಕ್ಷತಾ ಪರಿಶೀಲನೆಗಾಗಿ ನಾಲ್ಕು ನಿಗಮಗಳಿಗೆ ಪತ್ರ ಬರೆದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ
Bengaluru: ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಭೀಕರ ಬಸ್ ದುರಂತದ ನಂತರ ಎಚ್ಚೆತ್ತ ಕರ್ನಾಟಕ ಸರ್ಕಾರ ಪ್ರಯಾಣಿಕರ ಸುರಕ್ಷತೆಗಾಗಿ ಹಲವು ಕ್ರಮ ಕೈಗೊಂಡಿದೆ.(ramalingareddy new Instruction for transport)
ಆ ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಸಜೀವ ದಹನಗೊಂಡಿದ್ದು, ಹಲವರು ಗಂಭೀರ ಗಾಯಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ ಸಾರಿಗೆ ಇಲಾಖೆಯು ತುರ್ತು ಕ್ರಮಕ್ಕೆ ಮುಂದಾಗಿದೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು, ಬಸ್ಗಳ ಸುರಕ್ಷತಾ ಕ್ರಮಗಳ ಕುರಿತು ಖಡಕ್ ಸೂಚನೆ ನೀಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಕರ್ನೂಲ್ ಬಳಿ ಖಾಸಗಿ ಬಸ್ ಒಂದರಲ್ಲಿ ಸಂಭವಿಸಿದ ಬೆಂಕಿ ದುರಂತವು ದೇಶವನ್ನೇ ನಡುಗಿಸಿತು. ಬಸ್ ಎಂಜಿನ್ನಿಂದ ಹೊತ್ತಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಸಂಪೂರ್ಣ ವಾಹನವನ್ನು ಆವರಿಸಿಕೊಂಡಿತ್ತು. ಪ್ರಯಾಣಿಕರಿಗೆ ಹೊರಬರುವ ಅವಕಾಶ ಸಿಕ್ಕದೆ 20ಕ್ಕೂ ಹೆಚ್ಚು ಮಂದಿ ಸಜೀವ ದಹನಗೊಂಡರು.
ಈ ಭೀಕರ ಘಟನೆಗೆ ಕಾರಣವಾಗಿ ಬಸ್ನ ಒಳಗೆ ಸಾಗಿಸಲಾಗುತ್ತಿದ್ದ ಸ್ಫೋಟಕ ಅಥವಾ ಬೇಗನೆ ಉರಿಯುವ ವಸ್ತುಗಳಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕವೂ ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಕ್ರಮ ಕೈಗೊಳ್ಳಲು ತಯಾರಾಗಿದೆ.
ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು, ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ — ಕೆಎಸ್ಆರ್ಟಿಸಿ (KSRTC), ಬಿಎಂಟಿಸಿ (BMTC), ವಾಯವ್ಯ ಕರ್ನಾಟಕ ಸಾರಿಗೆ ನಿಗಮ (NWKRTC) ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ (KKRTC) — ಇವುಗಳ ಎಂಡಿಗಳಿಗೆ ಪತ್ರ ಬರೆದು ಅನೇಕ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದ್ದಾರೆ.
ಹೊಸ ನಿಯಮಗಳು ಹೀಗಿವೆ ಅವರ ಸೂಚನೆಗಳ ಪ್ರಕಾರ: (ramalingareddy new Instruction for transport)
- ಪ್ರತಿ ಬಸ್ನಲ್ಲಿಯೂ ಸುರಕ್ಷತಾ ಸಾಧನಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ಪ್ರತಿ ಪ್ರಯಾಣದ ಮುನ್ನ ಪರಿಶೀಲನೆ ನಡೆಸಬೇಕು.
- ಯಾವುದೇ ಬಸ್ನಲ್ಲಿ ಬೇಗನೆ ಉರಿಯುವ ಅಥವಾ ಸ್ಫೋಟಕ ವಸ್ತುಗಳನ್ನು ಸಾಗಿಸಲು ಸಂಪೂರ್ಣ ನಿಷೇಧ ಇರಬೇಕು.
- ಎಲ್ಲ ಎಸಿ ಬಸ್ಗಳಲ್ಲಿ ತುರ್ತು ಪರಿಸ್ಥಿತಿಯಲ್ಲಿ ಕಿಟಕಿಗಳನ್ನು ಒಡೆಯಲು ಅಗತ್ಯವಾದ ಸುತ್ತಿಗೆಗಳು ಕಡ್ಡಾಯವಾಗಿ ಇರಬೇಕು.
- ಲಗೇಜ್(Luggage) ವಿಭಾಗದಲ್ಲಿ ಯಾರನ್ನೂ ಮಲಗಲು ಅಥವಾ ವಿಶ್ರಾಂತಿಗೆ ಬಿಡಬಾರದು.
- ಹಳೆಯ ಅಥವಾ ಅತಿಯಾಗಿ ಉಪಯೋಗದಲ್ಲಿರುವ ಬಸ್ಗಳನ್ನು ನವೀಕರಿಸುವ ಕುರಿತು ತಕ್ಷಣ ಪರಿಶೀಲನೆ ನಡೆಸಬೇಕು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ (KSRTC) ಇನ್ನೂ ಹಲವಾರು ಹಳೆಯ ಡಕೋಟಾ ಬಸ್ಗಳು ಸಂಚರಿಸುತ್ತಿವೆ.
ಈ ಬಸ್ಗಳ(Bus) ತಾಂತ್ರಿಕ ಸ್ಥಿತಿಯ ಬಗ್ಗೆ ಸಾರ್ವಜನಿಕರು ಹಿಂದೆಯೂ ಪ್ರಶ್ನೆ ಎತ್ತಿದ್ದರು.
ಕೆಲವು ಬಸ್ಗಳಲ್ಲಿ ತಾಂತ್ರಿಕ ದೋಷಗಳು ಕಂಡುಬಂದಿದ್ದರೂ, ಅವು ಇನ್ನೂ ರಸ್ತೆಗಿಳಿಯುತ್ತಿರುವುದರ ಬಗ್ಗೆ ಆತಂಕ ವ್ಯಕ್ತವಾಗಿದೆ.
ಸಚಿವರ ಈ ಹೊಸ ನಿರ್ದೇಶನದ ನಂತರ ಈ ಬಸ್ಗಳ ಸ್ಥಿತಿಯ ಕುರಿತು ಸಮಗ್ರ ಪರಿಶೀಲನೆ ನಡೆಯಲಿದೆ ಎನ್ನಲಾಗಿದೆ.
ಸಾರಿಗೆ ಸಚಿವಾಲಯದ ಪ್ರಕಾರ, ಪ್ರತಿಯೊಂದು ಬಸ್ನಲ್ಲಿಯೂ ಅಗ್ನಿ ನಂದಕ (fire extinguisher), ತುರ್ತು ನಿರ್ಗಮನ ಮಾರ್ಗ (emergency exit) ಮತ್ತು ಸೀಟ್ಗಳಲ್ಲಿ ಸುರಕ್ಷತಾ ಸೂಚನೆಗಳು ಕಡ್ಡಾಯವಾಗಬೇಕು.
ಬಸ್ ಚಾಲಕರು ಹಾಗೂ ನಿರ್ವಾಹಕರು ಸುರಕ್ಷತಾ ನಿಯಮಗಳ ಕುರಿತು ತರಬೇತಿ ಪಡೆಯಬೇಕೆಂದು ಸಚಿವರು ಸೂಚಿಸಿದ್ದಾರೆ.
ಇದು ಕೇವಲ ಸರ್ಕಾರಿ ಬಸ್ಗಳಿಗೆ ಮಾತ್ರವಲ್ಲ, ಖಾಸಗಿ ಸಾರಿಗೆ ಸಂಸ್ಥೆಗಳಿಗೆ ಸಹ ಅನ್ವಯಿಸುತ್ತದೆ ಎಂದಿದ್ದಾರೆ.